ಕಾಲನ ಗಳಿಗೆ ಬಟ್ಟಲನ್ನು ಕುಡುಗೋಲನ್ನು
ಕೈಯಲ್ಲಿ ಹಿಡಿದಿರುವ ಚೆಲುವನೇ ನೀನಿನ್ನು
ಮುಂಚಿನಂತಲ್ಲ ಕರಗುತ್ತ ಬೆಳೆದಿರುವೆ,
ಸುತ್ತಲಿನ ಗೆಳೆಯರೆಲ್ಲರ ಕೊಡವಿಕೊಂಡಿರುವೆ.
ಅದು ನಿನ್ನ ಸವಿಯಿಚ್ಛೆ ಬಲಿತುದನು ತೋರುವುದು.
ಎಲ್ಲ ಗೊಂದಲವನು ನಿಯಂತ್ರಿಸಬಲ್ಲ ಪ್ರಕೃತಿಯದು
ಮತ್ತೆ ಹಿಂದಕ್ಕೆ ಎಳೆದಿರಿಸಿದರೆ ನಿನ್ನನ್ನು,
ಕಾಲವ ನಿಯಂತ್ರಿಸಲು ತನ್ನ ಶಕ್ತಿಗಳನ್ನು
ತೋರಿಸುವ ಸಲುವಾಗಿ. ಆದರೂ ಅವಳ ಭಯ
ಇರಲಿ, ಚೆಲುವನ್ನೇನೊ ಕಾಯಬಹುದವಳ ದಯ
ಉಳಿಸಲಾರದು ಸದಾ, ಲೆಕ್ಕ ಸಲಿಸಲೆಬೇಕು
ಪ್ರಕೃತಿ ಕರ್ತವ್ಯ ಅದು, ನಿನ್ನ ಕಳಿಸಲೆಬೇಕು.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 126
O Thou my lovely Boy who in thy power
Related Post
ಸಣ್ಣ ಕತೆ
-
ಏಡಿರಾಜ
ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
-
ತ್ರಿಪಾದ
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…