ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು
ಒರೆಸಿ ತೊಳೆಯುತ್ತಲಿದೆ ನಿನ್ನೊಲುಮೆ ಕರುಣೆ ಜಲ;
ತಪ್ಪ ಬದಿಗೊತ್ತಿ ಒಪ್ಪಿರಲು ನೀ ಗುಣವನ್ನು
ಲಕ್ಷ್ಯ ಮಾಡುವೆನೆ ಯಾರದೊ ನಿಂದೆ ಸ್ತೋತ್ರಗಳ?
ನನ್ನೆಲ್ಲ ಲೋಕ ನೀನೇ, ನಿನ್ನ ಮುಖದಿಂದ
ಬಂದುದಷ್ಟೇ ನನ್ನ ನಿಜದ ನಿಂದೆ ಪ್ರಶಂಸೆ,
ಯಾರು ನನಗಿನ್ನು? ಬದಲಿಸಬರದು ಪರರಿಂದ
ಸರಿಯೊ ತಪ್ಪೋ ನನ್ನ ನಿರ್ಧಾರ ಆಕಾಂಕ್ಷೆ.
ಅನ್ಯರಾಡಿದ್ದಕ್ಕೆ ಅನ್ನಿಸಿದ್ದನ್ನೆಲ್ಲ
ಆಳಬಾವಿಗೆ ಹಾಕಿ ಹೂಳುವೆನು. ಕಹಿಮಾತು
ಸಿಹಿಮಾತು ಎರಡಕ್ಕು ನನಗಿನ್ನು ಕಿವಿಯಿಲ್ಲ,
ಈ ಎಲ್ಲ ಮಾತಿಗೂ ನೀನೊಬ್ಬನೇ ಹೊರತು.
ನನ್ನ ಚಿಂತನೆಯಾಳದಲ್ಲಿ ಬೇರಿಳಿಸಿರುವೆ
ನಿನ್ನುಳಿದು ನನಗೆ ಇಡಿ ಲೋಕವೇ ಸತ್ತಿದೆ.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 112
Your love and pity doth the impression fill
Related Post
ಸಣ್ಣ ಕತೆ
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ವ್ಯವಸ್ಥೆ
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಮುಗ್ಧ
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…