ಕ್ಷಣಿಕ ಬಣ್ಣದ ಲೋಕ

ಬಾಳೊಂದು ತೊರೆದು ಆಚೆ ಬಾ
ದೇವರ ಪಾದದಲ್ಲಿ ಕರಗಿಹೋಗು
ಪರಮಾತ್ಮನ ಧ್ಯಾನದಲ್ಲಿ ನೀನು
ಪಡೆದುಕೊ ಮುಕ್ತಿಯೆಂಬ ಜೇನು

ಹೆರವರ ಭಾವಗಳು ನಾವೇಕೆ ತಿದ್ದಬೇಕು
ಹೆರವರ ಅನುಭಾವ ನಮಗೇಕೆ ಬೇಕು
ನಿಂದೆ ಯಾಡುವುದು ಹೀನತನದ ವ್ಯಕ್ತಿತ್ವ
ಪಡೆದುಕೊ ಅಮರನಾಗಿ ಪರಮಾತ್ಮ ತತ್ವ

ವಿಷಯಗಳ ನಿತ್ಯವೂ ಚರ್ಚೆಬೇಡ
ಉದರ ವೈರಾಗ್ಯ ಕಪಟತನ ಬೇಡ
ಹೊನ್ನು ಮಣ್ಣುಗಳೆಲ್ಲ ಬರೀ ನೀರಸ
ನಿನ್ನ ಪ್ರಪಾತಕ್ಕೆ ತಳ್ಳುವುದು ಸಹಜ

ಈ ಬದುಕೊಂದು ಚಣದ ಸಂತೆ
ಇದಕ್ಕಾಗಿ ಏಕೆ ಇಷ್ಟೆಲ್ಲ ಚಿಂತೆ
ಕಣ್ಣು ಮುಚ್ಚಿ ತೆರೆದರಾಯ್ತು ಇಲ್ಲಿ
ಎಲ್ಲವೂ ಮಂಗಮಾಯ ಕನಸು ಎಲ್ಲಿ

ಬಣ್ಣ ಬಣ್ಣಗಳ ಲೋಕ ಇದು ಮಕ್ಕಳಾಟ
ಇದು ಬರೀ ಚಂಚಲದ ಹುಡುಕಾಟ
ನಿನ್ನೆದೆಯಿಂದ ಉಕ್ಕಿಬರಲಿ ವ್ಯಾಕುಲತೆ
ಮಾಣಿಕ್ಯ ವಿಠಲನಿಗಿರಲಿ ಕಕ್ಕುಲತೆ ಕಣ್ಣೀರು ಕತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫೨
Next post ಒಂಟಿ ಸಲಗ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys