ಸನ್ನಡತೆಯಲ್ಲಿ ದೇವನಿಹನು

ಗುರಿ ಸಾಧನೆಯತ್ತ ಹೆಜ್ಜೆಹಾಕು
ಹಿಡಿದ ಪಥ ನ್ಯಾಯವಾಗಿದ್ದರೆ ಸಾಕು
ಮೇಲ್ಮಟ್ಟದ ವಿಚಾರದಿ ನಿನ್ನ ಓಲೈಸುವುದು
ಸಾರ್ಥಕ ಬಾಳು ನಿನಗೆ ತಂದು ಕೊಡುವುದು

ತುಸು ಅರಿತು ನೀನು ಧನ್ಯನೆನ್ನಬೇಡ
ಭಕ್ತಿವಂತ ನೀನ ಅಹಂಕಾರಬೇಡ
ಪವಾಡ, ಚಮತ್ಕಾರಗಳ ಮಾಡಬೇಡ
ಅವೆಲ್ಲವೂ ನಿನ್ನ ಹಿತೈಷಿಗಳೆನ್ನಬೇಡ

ಪರಮಾತ್ಮ ಸಾಗರದಲಿ ನಿತ್ಯ ಮುಳುಗು
ನಿನ್ನ ಜನ್ಮಗಳ ಪಾಪರಾಶಿಗೆ ಮರಗು
ದೇವರೆದುರಿನಲಿ ಅತ್ತು ಅತ್ತು ಕರಗು
ಅವನ ದರುಶನಕ್ಕೆ ನಿತ್ಯವೂ ಕೊರಗು

ಮನದಲಿ ಉದ್ರೇಕಿಸುವ ವಿಚಾರಬೇಡ
ನಾನು ನನ್ನದೆಂಬ ಚಿಂತೆಗಳೂ ಬೇಡ
ಆಸ್ತಿ ಅಂತಸ್ತುಗಳ ಆಡಂಬರ ಬೇಡ
ಮಾಣಿಕ್ಯ ವಿಠಲನ ಹೃದಯದಲಿ ಹಾಡ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೫
Next post ದುಡಿಯೋಣ ನಾವು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…