ಬೆಳ್ಳಿಗೆ

ಮೂಡದಿಸೆಯಲಿ ಮುಗುಳಿನಂದದಿ
ಅರಳಲಿಹ ಚಲು ಬೆಳ್ಳಿಯೆ
ಯಾವ ಸಿದ್ಧಿಗೆ ಯಾವ ಧ್ಯಾನದಿ
ಮಗ್ನಳಾಗಿಹೆ ಕಳ್ಳಿಯೆ

ಯಾವ ವೃತವಿದು ಏನು ನಿಯಮವು?
ಹೇಳಬಾರದೆ ಗೆಳತಿಯೆ?
ನಿನ್ನ ಶಾ೦ತಿಯು ನನಗೆ ಬೇಕಿದೆ
ಒಣದು ಬಾಳಲಿ ಬಳಲಿಹೆ

ಬೆರಳನೆಣಿಸಿದರೇನು ಕರುಳಿಗೆ
ಕಣ್ಣು ಒಡೆಯದೆ ನಿಂತಿಹೆ
ಎದೆಗೆ ಯಾವದೊ ಭಾರ ಬಿದ್ದಿದೆ
ನನ್ನ ಗತಿಯೋ ಇಂತಿದೆ

ನೀನು ಜೀವನಕಲೆಯನರಿತಿಹೆ
ನಿನ್ನ ಭಾಗ್ಯವೆ ಭಾಗ್ಯವು
ನಿನ್ನ ತಪಕಿದೆ ಸಿದ್ದಿ ನನಗೋ
ಇಲ್ಲ ಮನಕಾರೋಗ್ಯವು

ನೀಡು ಸಂದೇಶವನ್ನು ಬೆಳ್ಳಿಯೆ
ಬೇಡಿಕೊಳ್ಳುವೆ! ಎನ್ನನು
ದಿವ್ಯ ದೀಕ್ಷೆಯ ನೀಡಿ ಒಯ್ವೆಯ
ನಂಬಿ ನಿಂತಿಹೆ ನಿನ್ನನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಹನಿಗವನ
Next post ರಂಗಣ್ಣನ ಕನಸಿನ ದಿನಗಳು – ೧೭

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys