ಬೆಳ್ಳಿಗೆ

ಮೂಡದಿಸೆಯಲಿ ಮುಗುಳಿನಂದದಿ
ಅರಳಲಿಹ ಚಲು ಬೆಳ್ಳಿಯೆ
ಯಾವ ಸಿದ್ಧಿಗೆ ಯಾವ ಧ್ಯಾನದಿ
ಮಗ್ನಳಾಗಿಹೆ ಕಳ್ಳಿಯೆ

ಯಾವ ವೃತವಿದು ಏನು ನಿಯಮವು?
ಹೇಳಬಾರದೆ ಗೆಳತಿಯೆ?
ನಿನ್ನ ಶಾ೦ತಿಯು ನನಗೆ ಬೇಕಿದೆ
ಒಣದು ಬಾಳಲಿ ಬಳಲಿಹೆ

ಬೆರಳನೆಣಿಸಿದರೇನು ಕರುಳಿಗೆ
ಕಣ್ಣು ಒಡೆಯದೆ ನಿಂತಿಹೆ
ಎದೆಗೆ ಯಾವದೊ ಭಾರ ಬಿದ್ದಿದೆ
ನನ್ನ ಗತಿಯೋ ಇಂತಿದೆ

ನೀನು ಜೀವನಕಲೆಯನರಿತಿಹೆ
ನಿನ್ನ ಭಾಗ್ಯವೆ ಭಾಗ್ಯವು
ನಿನ್ನ ತಪಕಿದೆ ಸಿದ್ದಿ ನನಗೋ
ಇಲ್ಲ ಮನಕಾರೋಗ್ಯವು

ನೀಡು ಸಂದೇಶವನ್ನು ಬೆಳ್ಳಿಯೆ
ಬೇಡಿಕೊಳ್ಳುವೆ! ಎನ್ನನು
ದಿವ್ಯ ದೀಕ್ಷೆಯ ನೀಡಿ ಒಯ್ವೆಯ
ನಂಬಿ ನಿಂತಿಹೆ ನಿನ್ನನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಹನಿಗವನ
Next post ರಂಗಣ್ಣನ ಕನಸಿನ ದಿನಗಳು – ೧೭

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…