ಬಂದೆ ಬಂದೆ

ಮಾತೃವಚನ

ನನ್ನ ದೊರೆಯೆ ಸವಿಗಾರ ಸ್ವಾಮಿ ಈ ನಿನ್ನ ಕೆಲಸವನ್ನೇ
ಗೊನೆಗೊಳಿಸಲೆಂದು ಜಡಜಲಧಿತಳಕೆ ಮುಟ್ಟಿದೆನು ಮೂಲವನ್ನೇ
ಸುಳ್ಳನ್ನು ಮತ್ತೆ ಅಜ್ಞಾನನರಕ ಬೆರಳೊತ್ತಿ ಮುಟ್ಟಿಬಿಟ್ಟೆ
ಗಾಢಾಂಧಕಾರ ವಿಸ್ಮೃತಿಯ ಪರಮಗುಹೆಯಲ್ಲಿ ಪಾದವಿಟ್ಟೆ

ನಿನ್ನ ನೆನೆವು ನನ್ನೆದೆಯೊಳಿತ್ತದರ ಕರೆಯೆ ಹಾರಿ ಸಾರಿ
ನಿನ್ನತ್ತ ಬಂತು; ಹಾ ದೊರೆಯೆ ಎತ್ತೆತ್ತು ನಿನ್ನ ವೈರಿ
ಜಯಮತ್ತರಂತೆ ತೋರುತ್ತಲಿಹರು ಜಗದೊಡೆಯನೀಗ ಸತ್ಯ
ನೀನಿರದ ಬಾಳು ಅದು ಒಂದು ಸಾವು ಅದು ನರಕ ನಿತ್ಯನಿತ್ಯ

ಆಸೆಯನ್ನು ತಳ್ಳಿ ಸಂಶಯವೆ ಪಟ್ಟವನ್ನು ಕಟ್ಟಿಕೊಂಡು ಮತ್ತೆ
ಹುಸಿಬಂಡು ಪುಂಡು ಶರಣತೆಯ ನೂಕಿ, ನಂಬುಗೆಯ ತೀರಹತ್ತಿ
ಉಪಕಾರ ಸ್ಮೃತಿಯು ಹುಟ್ಟಿಲ್ಲವಿನ್ನು ಕಗ್ಗುರುಡು ಕಾಮ
ಕೊಲೆಗಡಕ ಬುದ್ದಿ ಬರುತಿಹುದು ನೋಡ ದುರ್ಬಲದ ತಪ್ಪಹೊಂದಿ

ಆ ನಿನ್ನ ಮಧುರತಮ ಪ್ರೇಮಧರ್ಮ ಬಾಯ್ಗಟ್ಟಿ ಉಸಿರುಗಟ್ಟಿ
ಉಮ್ಮಳಿಸುತಿಹುದು ಹಾ ದೊರೆಯೆ ನೀನೆ ಆಪಗೆಯ ಪಟ್ಟಗಟ್ಟಿ;
ಬಿಡುವಿಯೇನು? ಆ ಅನೃತವನ್ನು ಆ ವಿಕೃತಿಯನ್ನು ಮತ್ತೆ,
ಸಂತಾಪ ತಾಪ ಸಂತತಿಯನೆಲ್ಲ ಆ ಮಹಾವಿಜಯದತ್ತೆ.

ಹಾ ದೊರೆಯೆ ಆಜ್ಞೆಯನು ಕೊಟ್ಟು ನೋಡು ಕಟ್ಟಿಟ್ಟ ವಿಜಯವಹುದು
ನಾ ಬಲ್ಲೆ, ನಮಗೆ ಯೋಗ್ಯತೆಯು ಇಲ್ಲ ಜಗ ಸಿದ್ಧವಿಲ್ಲ; ಅಹುದು
ಕಡುಕಟ್ಟಿ ನಂಬುಗೆಯ ತುಟ್ಟತುದಿಯ ಮುಟ್ಟೊಮ್ಮೆ ಕೂಗಿಕೊಳುವೆ,
ದೊರೆ ಹೈ ಹಸಾದ ಜಗ ರಕ್ಷಿಸಯ್ಯ ಅದು ನಿನ್ನ ಅರುಳಿನಳವೆ.

ಇದು ಏನೆ ಇರಲಿ, ಇದು ಹೇಗು ಇರಲಿ, ತೋರಯ್ಯ ಕರುಣೆದೋರು.
ಉದ್ದಾರವಹುದು ಜಗವಮೃತವಹುದು ಭವಜಲಧಿ ದಾಟಿ ಪಾರು.
ಪಾತಾಳದಿಂದ ಎದೆಯಾಳದಿಂದ ಜೀವಾಳದಿಂದ ಒಂದು
ನಿನ್ನತ್ತ ನುಗ್ಗಿ ಹೊರಹೊಮ್ಮಿ ಹಿಗ್ಗಿ ಪ್ರಾರ್ಥನೆಯು ತಾನೆ ಬಂದು

ನಿನ್ನನ್ನು ಕಂಡೆ ಕಡುಕಾಂತಿಯಲ್ಲಿ ನೀನಾಗ ನನಗೆ ಅಂದೆ
ಎದೆಗೆಡಿಸಿಕೊಳ್ಳದಿರು, ಧೀರಳಾಗು, ಇಗೊ ನಂಬು ಬಂದೆಬಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೆಟ್ಟಿಯ ಲೆಕ್ಕಾಚಾರ
Next post ಸುಭದ್ರೆ – ೧೬

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys