ಮಿಹಿರದ್ವೀಪ

ಸ್ವರ್ಣಸಮುದ್ರದಿ ಪಯಣಿಸಿಹೆ
ರಜತತೀರವನು ನೂಕಿರುವೆ
ಜ್ಞಾನಭಾಸ್ಕರನ ತಲುಪಿರುವೆ
ಇಳೆಯಿರುಳಭಿಜಿತ್ ಸೋಕಿರುವೆ.

ದೃಷ್ಟಿದೀಪಿಸುವ ಕ್ಷೇತ್ರಗಳು
ಕೆಚ್ಚಿನ ಕಸುವಿನ ಬೆಟ್ಟಗಳು
ಹರ್ಷಜ್ವಾಲೆಯ ಶಿಖರಗಳು
ಕೇವಲ ಬೆಳಕಿನ ಗಾಳಿಯೊಳು.

ಆತ್ಮವಿಸ್ಕೃತಿಯ ಕಡಲುಗಳು
ರುದ್ರನಿದ್ರೆಗಳ ಗಿರಿದರಿಯು
ನನ್ನ ಜೀವದಾ ರಾಜ್ಯದೊಳು
ನಂದಾ ದ್ವೀಪಾವಳಿಗಳೊಳು.

ದೇವನೆ ದೇವ ಮೌನೋ ಮೌನ
ಕಾಲರಹಿತವಹ ಕಾಲದ ಅಯನ
ಅಲ್ಲಿ ಜೀವನವು ರಾಗದ ಮೂರ್ತಿ.
ಸತ್ಯ ವಿಚಾರವೆ ಛಂದಃಶಯನ

ಅಲ್ಲಿಯ ಬೆಳಕೇ ಸುತ್ತೂಮುತ್ತು.
ಇಲ್ಲಿಗೆ ಬಂದರು ಎತ್ತಲು ಇತ್ತು
ಅಮೃತ ಜ್ಞಾನವು ಇಳೆಗಿಳಿದಿತ್ತು
ಮೌನವ ಜನ್ಮದ ಗರ್ಭದಿ ಬಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವ ದಾರಿಯೊ!
Next post ವಾಗ್ದೇವಿ – ೪೦

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…