ಯಾರಿವರು?

ಎಲ್ಲೋ ನೋಡಿದ್ದೇನೆ ಇವರನ್ನು
ಕೇಳಿದ್ದೇನೆ ಮಾತುಗಳನ್ನು
ಯಾರಿವರು?
ಅಟ್ಟದಿಂದ ಬೆಟ್ಟಕ್ಕೆ ಏರಿಸಿ
ಧೊಪ್ಪನೆ ಕೆಡುವವರು
ಕಂಬಿ ಇಲ್ಲದೆ ರೈಲು ಬಿಡುವ
ಅತಿ ಮಾನುಷರು.
ಮಾತಿನಲ್ಲೇ ಮನೆ ಕಟ್ಟಿ
ಮಾತಿನಲ್ಲೇ ಹೊಟ್ಟೆ ಬಟ್ಟೆ
ಮಾತಿನಲ್ಲೇ ಸ್ವರ್ಗ ತೋರಿಸುವ
ಮರುಳು ಮಾನವರು.
ಮಾತಿನಲ್ಲೇ ಸಮಾಧಿ ಕಟ್ಟಿ
ಸಮಾಧಿ ಮೇಲೆ ಗದ್ದುಗೆ
ಗದ್ದುಗೆಯಲ್ಲಿ ವಿರಾಜಿಸುವ
ಗದ್ದಲ ಶೂರರು.
ಅತ್ತಿತ್ತಗಲದೆ ಸುತ್ತ ನೋಡದೆ
ಅಧಿಕಾರದ ಚುಕ್ಕಾಣಿ ಹಿಡಿದು
ಮರದಿಂದ ಮರಕ್ಕೆ ಜಿಗಿಯುವ
ಮರ್ಕಟ ಜಾತಿಯವರು.
ಎಳ್ಳಷ್ಟಿಲ್ಲ ತತ್ತ್ವ ಸಿದ್ಧಾಂತ
ಅರ್ಥವಿಲ್ಲದ ಆದರ, ಆದರ್ಶ
ಅಧಿಕಾರದ ಲಾಲಸೆ ಹಣದ ಮೋಹ
ಗೋರಿಗೋಗುವ ಸಮಯವಾದರೂ
ಬಿಡದ ಕುರ್ಚಿಯ ವ್ಯಾಮೋಹ
ಸ್ವಾರ್ಥ ಸಾಧಕರಿವರು
ಯಾರಿವರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಪುರುಷತ್ವ
Next post ಜನದಟ್ಟಣೆ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…