ಯಾರಿವರು?

ಎಲ್ಲೋ ನೋಡಿದ್ದೇನೆ ಇವರನ್ನು
ಕೇಳಿದ್ದೇನೆ ಮಾತುಗಳನ್ನು
ಯಾರಿವರು?
ಅಟ್ಟದಿಂದ ಬೆಟ್ಟಕ್ಕೆ ಏರಿಸಿ
ಧೊಪ್ಪನೆ ಕೆಡುವವರು
ಕಂಬಿ ಇಲ್ಲದೆ ರೈಲು ಬಿಡುವ
ಅತಿ ಮಾನುಷರು.
ಮಾತಿನಲ್ಲೇ ಮನೆ ಕಟ್ಟಿ
ಮಾತಿನಲ್ಲೇ ಹೊಟ್ಟೆ ಬಟ್ಟೆ
ಮಾತಿನಲ್ಲೇ ಸ್ವರ್ಗ ತೋರಿಸುವ
ಮರುಳು ಮಾನವರು.
ಮಾತಿನಲ್ಲೇ ಸಮಾಧಿ ಕಟ್ಟಿ
ಸಮಾಧಿ ಮೇಲೆ ಗದ್ದುಗೆ
ಗದ್ದುಗೆಯಲ್ಲಿ ವಿರಾಜಿಸುವ
ಗದ್ದಲ ಶೂರರು.
ಅತ್ತಿತ್ತಗಲದೆ ಸುತ್ತ ನೋಡದೆ
ಅಧಿಕಾರದ ಚುಕ್ಕಾಣಿ ಹಿಡಿದು
ಮರದಿಂದ ಮರಕ್ಕೆ ಜಿಗಿಯುವ
ಮರ್ಕಟ ಜಾತಿಯವರು.
ಎಳ್ಳಷ್ಟಿಲ್ಲ ತತ್ತ್ವ ಸಿದ್ಧಾಂತ
ಅರ್ಥವಿಲ್ಲದ ಆದರ, ಆದರ್ಶ
ಅಧಿಕಾರದ ಲಾಲಸೆ ಹಣದ ಮೋಹ
ಗೋರಿಗೋಗುವ ಸಮಯವಾದರೂ
ಬಿಡದ ಕುರ್ಚಿಯ ವ್ಯಾಮೋಹ
ಸ್ವಾರ್ಥ ಸಾಧಕರಿವರು
ಯಾರಿವರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಪುರುಷತ್ವ
Next post ಜನದಟ್ಟಣೆ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys