ಮೋಹನ ಮುರಳಿ

ಎಲ್ಲಿಯದೋ ಒಂದು ಧ್ವನಿ
ಅನುರಣುಸುತ್ತಿದೆ, ಎದೆಯ ಆಳದಲಿ
ನಿತ್ಯ ನೂತನದ ತಂಗಾಳಿಯ ಅಲೆಗಳು
ಅಪ್ಪಳಿಸಿವೆ ನದಿಯ ದಂಡೆಯಲಿ.

ಕೇದಿಗೆ ಅರಳಿ ಘಮ್ಮೆಂದು ಸೂಸಿದ
ಪರಿಮಳ ಎಲ್ಲೆಲ್ಲೂ ಹರಡಿ ನದಿಗುಂಟ
ಹರಿದು ಮೂರು ಸಂಜೆಯ ಹೊತ್ತು
ನೀಲಾಂಜನದ ಬೆಳಕು ಹರಡಿದ ತಂಪು.

ಹೂವಿನಿಂದ ಹೂವಿಗೆ ಹಾರುವ ಚಿಟ್ಟೆಗಳ
ಸಂಭ್ರಮದ ಮುಂಜಾನೆ, ಸೂರ್ಯ ತನ್ನ
ಕ್ಯಾಮರಾ ಕಣ್ಣುಗಳಿಂದ ಪ್ಲಾಶ್‌ಗೊಳಿಸಿದಾಗ
ತೊಟ್ಟಿಲಲ್ಲಿ ಮಲಗಿದ ಕಂದನ ಕಣ್ಣುಗಳ ತುಂಬ
ಹೊಂಬೆಳಕು

ನವಿರಾದ ಪ್ರೀತಿ ಅರಳಿದ ಸಮಯ,
ಕವಿತೆಯ ಕೂದಲುಗಳು ಉದ್ದ ಜಡೆ ಹೆಣೆದು
ಕ್ಯಾದಿಗೆ ಮುಡಿದು, ಚಿಟ್ಟೆಗಳ ಅರಳಿಸಿ ಜೋತಾಡಿದಾಗ
ನೀನು ಬಂದು ನನ್ನ ಮನೆಯ ಬಾಗಿಲು ತಟ್ಟಿದೆ.

ಕೊನರಿದ ಕೊರಡು ಬಿದುರಿನಿಂದ ಹೊರಟ
ನಿನ್ನ ನಿನಾದ ರಾತ್ರಿಯ ಬೆಳದಿಂಗಳಲಿ
ಪಸರಿಸಿ ಸವಿ ಸಮ್ಮಿಲನದ ಸುಖದಲಿ
ಮನೆ, ಗಂಡ, ಮಗು ಎಲ್ಲರೂ ದೂರ ಉಳಿದ
ಇರಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಕನ್ನಡ
Next post ಬಕಾಸುರ ಸಂಹಾರ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys