Home / ಕವನ / ಗಝಲ್ / ಉಪ್ಪರಿಗೆ

ಉಪ್ಪರಿಗೆ

ಗಝಲ್


ಅವನಿಗಾಗಿಯೆ ಬವಣಿಯೊಂದುತ
ಎದೆಯ ಕುದಿಯೊಳು ಕಾಯುತ,
ಸವಿಯ ಕಾಣದೆ ಬಾಳಿನಲಿ ಬಿಸು-
ಸುಯಿಲ ಬೇಗೆಗೆ ಬೇಯುತ
ಸವೆಯುತಿಹೆ ನಾನಿಲ್ಲಿ….!
ಸವೆಯುತಿಹೆ ನಾನಿಲ್ಲಿ-ಕತ್ತಲು-
ಕವಿದ ಕಿರುಮನೆಯಲ್ಲಿ.


ಇಲ್ಲಿ ಕತ್ತಲು ಕವಿದ ಕಿರುಮನೆ-
ಯಲ್ಲಿ ಸುಮ್ಮನೆ ಕುಳಿತರೆ,
ನಲ್ಲ ಬಂದೆನ್ನನ್ನು ತಾನೆ-
ಲ್ಲೆಲ್ಲಿಯೂ ಶೋಧಿಸಿದರೆ….!
ಹೊರಗೆ ಇರದಿರೆ ನಾನು….
ಹೊರಗೆ ಇರದಿರೆ ನಾನು-ಹಾಗೆಯೆ-
ಹೊರಟು ಬಿಡಬಹುದೇನು ?!


ನಾನು ಈ ತಾಣದೊಳು ಕುಳಿತುದು
ಜಾಣನಿಗೆ ಗೊತ್ತಾಗಿ,
ಕೋಣೆಯಲ್ಲಿಯೆ ಬಂದರೀ ಕರಿ-
ಗತ್ತಲೆಯು ಒತ್ತಾಗಿ,
ಅವನ ಸಿರಿಮೊಗವನ್ನು ….
ಅವನ ಸಿರಿಮೊಗವನ್ನು-ಮರೆಯಿಸಿ-
ಸವಿಗೆಡಿಸದಿಹುದೇನು ?


ಇಲ್ಲಿ ಬರಿ ಬಿದ್ದಿದ್ದರೇನದು !
ನಲ್ಲ ಬಂದರೆ ಕಾಂಬೆನೇ !
ಬೆಲ್ಲದಂತಹ ಮೊದಲ ನೋಟವ
ಹುಲ್ಲನಾಗಿಸಿಕೊಂಬೆನೆ !
ಅದಕೆ ನೆಲೆಮನೆಗೇರಿ….
ಅದಕೆ ನೆಲೆಮನೆಗೇರಿ-ಹೋಗುವೆ-
ತಿಂಗಳಂಗಳ ಸಾರಿ.


ಹಗಲು ಇರುಳೂ ನಗುವ ಬೆಳಕದು
ಜಗಜಗಿಸುತಿಹುದಲ್ಲಿ,
ಬಿಗಿದು ಕಂಗಳ ಮುಗಿಸುವಾ ಕ-
ತ್ತಲೆಗೆ ನೆಲೆಯಿಲ್ಲಲ್ಲಿ,
ಅಲ್ಲಿ ಬಂದರೆ ಚೆನ್ನ ….
ಅಲ್ಲಿ ಬಂದರೆ ಚೆನ್ನ -ಅವನೊಳೆ-
ನಿಲ್ಲಿಸುವೆನೀ ಕಣ್ಣ!

ನಿಲ್ಲಿಸುವೆನೀ ಕಣ್ಣ….
ನಿಲ್ಲಿಸುವೆನೀ ಕಣ್ಣ-ನಾತಗೆ-
ಸಲ್ಲಿಸುವೆ ನನ್ನನ್ನ !
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...