Home / ಕವನ / ಕವಿತೆ / ಬಿಡುವು

ಬಿಡುವು

ಜೀವನದಲ್ಲೇನಿದೆ ಎಲ್ಲಾ ಇದ್ದೂ
ಒಂದು ಕ್ಷಣ ಮೈಮರೆತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ
ದೃಷ್ಟಿ ಹಾಯಿಸಲು ಬಿಡುವಿಲ್ಲದ ಮೇಲೆ?

ಹಸಿರು ಹೊದ್ದ ಮರದ ನೆರಳಲಿ ನಿಂತು
ದನಕರು, ಕುರಿಮಂದೆ ಮೇಯುತ್ತಿರುವಷ್ಟು
ದೂರದವರೆಗೆ ಕಣ್ಣು ಹಿಗ್ಗಿಸಿ
ನೋಡಲು ಬಿಡುವಿಲ್ಲದ ಮೇಲೆ?

ದಟ್ಟಡವಿಯಲಿ ಹಾದು ಹೋಗುವಾಗ
ಹಣ್ಣಾಗಿ ಉದುರಿದ್ದ ಬೀಜಗಳ ಹೆಕ್ಕಿ ಹುಲ್ಲಿನ ಪೊದೆಗಳಲ್ಲಿ
ಅಡಗಿಸಿಡುವ ಅಳಿಲಿನ ತುಂಟಾಟವ ನೋಡಿ
ನಗಲು ಬಿಡುವಿಲ್ಲದ ಮೇಲೆ?

ನಕ್ಷತ್ರಗಳು ಫಳಫಳಿಸುವ ರಾತ್ರಿಯಾಕಾಶವನ್ನು ನೆನಪಿಸುವಂತೆ
ಜುಳು ಜುಳು ಹರಿವ ನೀರಲ್ಲಿ ರವಿಕಿರಣ ಪ್ರತಿಫಲಿಸಿ
ಮಟಮಟ ಮಧ್ಯಾಹ್ನದಲಿ ನಕ್ಷತ್ರಗಳ ಹಿಂಡನ್ನೇ ಸೃಷ್ಟಿಸಿರುವ
ಅಂದವ ನೋಡಿ ಆನಂದಿಸಲು ಬಿಡುವಿಲ್ಲದ ಮೇಲೆ?

ಬಿಡುವಿಲ್ಲ, ನಮಗೆ ಯಾವುದಕ್ಕೂ ಬಿಡುವಿಲ್ಲ
ಪ್ರಕೃತಿ ದೇವಿ ಸೌಂದರ್‍ಯ ಸ್ಪರ್ಧೆಯಲ್ಲಿ ಪಂಥ ಕಟ್ಟಿ
ನಲಿಯುವುದ ನೋಡಲು, ಅವಳ ಕಣ್ಣಲ್ಲಿ ಮಿಂಚಿದ ನಗು
ಹೂವಾಗಿ ಗಿಡಗಳಲ್ಲಿ ಬಿರಿಯುವುದ ನೋಡಲು ಬಿಡುವಿಲ್ಲ

ಎಲ್ಲಾ ಇದ್ದರೂ ಒಂದು ಕ್ಷಣ ಮೈಮೆರತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ ದೃಷ್ಟಿಹಾಯಿಸಲು ನಮಗೆ ಬಿಡುವಿಲ್ಲ.
ಯಾವುದಕ್ಕೂ ಬಿಡುವಿಲ್ಲದ ಜೀವನಕ್ಕೇನರ್‍ಥ?
ಅದು ಏನೂ ಇಲ್ಲದ ಬರಡು ಬಂಜರುಭೂಮಿ!
*****
(ಸರ್ ವಿಲಿಯಂ ಹೆನ್ರಿ ಡೇವಿಸ್‌ರವರ ‘ಲೀಜರ್’ ಕವನದಿಂದ ಪ್ರೇರಿತ)

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...