Home / ಕವನ / ಕವಿತೆ / ಬಿಡುವು

ಬಿಡುವು

ಜೀವನದಲ್ಲೇನಿದೆ ಎಲ್ಲಾ ಇದ್ದೂ
ಒಂದು ಕ್ಷಣ ಮೈಮರೆತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ
ದೃಷ್ಟಿ ಹಾಯಿಸಲು ಬಿಡುವಿಲ್ಲದ ಮೇಲೆ?

ಹಸಿರು ಹೊದ್ದ ಮರದ ನೆರಳಲಿ ನಿಂತು
ದನಕರು, ಕುರಿಮಂದೆ ಮೇಯುತ್ತಿರುವಷ್ಟು
ದೂರದವರೆಗೆ ಕಣ್ಣು ಹಿಗ್ಗಿಸಿ
ನೋಡಲು ಬಿಡುವಿಲ್ಲದ ಮೇಲೆ?

ದಟ್ಟಡವಿಯಲಿ ಹಾದು ಹೋಗುವಾಗ
ಹಣ್ಣಾಗಿ ಉದುರಿದ್ದ ಬೀಜಗಳ ಹೆಕ್ಕಿ ಹುಲ್ಲಿನ ಪೊದೆಗಳಲ್ಲಿ
ಅಡಗಿಸಿಡುವ ಅಳಿಲಿನ ತುಂಟಾಟವ ನೋಡಿ
ನಗಲು ಬಿಡುವಿಲ್ಲದ ಮೇಲೆ?

ನಕ್ಷತ್ರಗಳು ಫಳಫಳಿಸುವ ರಾತ್ರಿಯಾಕಾಶವನ್ನು ನೆನಪಿಸುವಂತೆ
ಜುಳು ಜುಳು ಹರಿವ ನೀರಲ್ಲಿ ರವಿಕಿರಣ ಪ್ರತಿಫಲಿಸಿ
ಮಟಮಟ ಮಧ್ಯಾಹ್ನದಲಿ ನಕ್ಷತ್ರಗಳ ಹಿಂಡನ್ನೇ ಸೃಷ್ಟಿಸಿರುವ
ಅಂದವ ನೋಡಿ ಆನಂದಿಸಲು ಬಿಡುವಿಲ್ಲದ ಮೇಲೆ?

ಬಿಡುವಿಲ್ಲ, ನಮಗೆ ಯಾವುದಕ್ಕೂ ಬಿಡುವಿಲ್ಲ
ಪ್ರಕೃತಿ ದೇವಿ ಸೌಂದರ್‍ಯ ಸ್ಪರ್ಧೆಯಲ್ಲಿ ಪಂಥ ಕಟ್ಟಿ
ನಲಿಯುವುದ ನೋಡಲು, ಅವಳ ಕಣ್ಣಲ್ಲಿ ಮಿಂಚಿದ ನಗು
ಹೂವಾಗಿ ಗಿಡಗಳಲ್ಲಿ ಬಿರಿಯುವುದ ನೋಡಲು ಬಿಡುವಿಲ್ಲ

ಎಲ್ಲಾ ಇದ್ದರೂ ಒಂದು ಕ್ಷಣ ಮೈಮೆರತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ ದೃಷ್ಟಿಹಾಯಿಸಲು ನಮಗೆ ಬಿಡುವಿಲ್ಲ.
ಯಾವುದಕ್ಕೂ ಬಿಡುವಿಲ್ಲದ ಜೀವನಕ್ಕೇನರ್‍ಥ?
ಅದು ಏನೂ ಇಲ್ಲದ ಬರಡು ಬಂಜರುಭೂಮಿ!
*****
(ಸರ್ ವಿಲಿಯಂ ಹೆನ್ರಿ ಡೇವಿಸ್‌ರವರ ‘ಲೀಜರ್’ ಕವನದಿಂದ ಪ್ರೇರಿತ)

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ