Home / ಕವನ / ಕವಿತೆ / ಹಕ್ಕಿ ಮತ್ತು ಗಿಡುಗ

ಹಕ್ಕಿ ಮತ್ತು ಗಿಡುಗ

ಹಕ್ಕಿಯೊಂದು ಹಾರುತ್ತಿತ್ತು.
ಮೇಲೆ ಮೇಲೆ ಏರುತ್ತಿತ್ತು
ಇಹವ ಮರೆತು ನಲಿಯುತ್ತಿತ್ತು
ಸ್ವಚ್ಛಂದವಾಗಿ ತೇಲುತ್ತಿತ್ತು.

ಗಿಡುಗನೊಂದು ನೋಡುತ್ತಿತ್ತು
ಹಿಡಿಯಲೆಂದು ಹೊಂಚುತ್ತಿತ್ತು
ಹಿಂದೆ ಹಿಂದೆ ಅಲೆಯುತ್ತಿತ್ತು
ಮೇಲೆರಗಲು ಕಾಯುತ್ತಿತ್ತು.

ಹಕ್ಕಿಗಿಲ್ಲ ಇಹದ ಗೊಡವೆ
ಮರೆತ ಮೇಲೆ ತನ್ನ ಇರವೇ
ಏರುತ್ತಿತ್ತು ಮೇಲೆ ಮೇಲೆ
ಆಗಸದಗಲ ಅಳೆಯುತ್ತಿತ್ತು.

ಏರಿದಂತ ಮೇಲೆ ಮೇಲೆ
ಪಾಶವೊಂದು ಎಳೆಯುತ್ತಿತ್ತು.
ಬಿಟ್ಟು ಬಂದ ತನ್ನವರ
ನೆನಪು ಮನಸ ಕಾಡುತ್ತಿತ್ತು.

ಇಹದ ಪಾಶ ಎಳೆಯುತ್ತಿರಲು
ಕರುಳಬಳ್ಳಿ ಮಿಡಿಯುತ್ತಿರಲು
ಗೂಡುಸೇರುವ ತವಕ ಹೆಚ್ಚುತ್ತಿರಲು
ಕೆಳಕ್ಕಿಳಿಯಲೆಂದು ಹಕ್ಕಿ ತಿರುಗಿತ್ತು.

ಎದುರಿಗಿತ್ತು ಹೊಂಚುತ್ತಿದ್ದ ಗಿಡುಗ –
ಹೆದರಿ ಮುದುಡಿದ್ದ ಹಕ್ಕಿಯ
ಮೇಲೆರಗಲು ಕಾಯುತ್ತಿತ್ತು
ಮೃತ್ಯು ಬಾಯ್ದೆರೆದು ನಿಂತಿತ್ತು.

ಹಕ್ಕಿ ನಡುಗಿತ್ತು, ಹಕ್ಕಿ ಚೀರಿತ್ತು
ಸಹಾಯಕ್ಕಾಗಿ ಮೊರೆ ಇಟ್ಟಿತ್ತು
ಆನೆಗಿದ್ದ ಸಹಾಯ ಹಕ್ಕಿಗಿರಲಿಲ್ಲ
ಬಿಡಿಸಲಾರೂ ಬರಲಿಲ್ಲ.

ಆಗಸದಿಂದ ಇಳಿಯುತ್ತಿತ್ತು ಮೆಲ್ಲಮೆಲ್ಲ
ಮಾನಮುಚ್ಚಿದ್ದ ರೆಕ್ಕೆ ಪುಕ್ಕ ಎಲ್ಲ
ಹಕ್ಕಿ ಆಕ್ರಮಣಕ್ಕೊಳಗಾದ ಕುರುಹಾಗಿ
ಗಿಡುಗನ ಗೆಲುವಿನ ಸಂಕೇತವಾಗಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...