ಭಾವದ ಬೆನ್ನೇರಿ

ಭಾವದ ಬೆನ್ನೇರಿ-
ಆಕಾಶಕೆ ನೆಗೆಯುವೆಯೊ
ಪಾತಾಳಕೆ ಇಳಿಯುವೆಯೊ
ಕಡಲನು ಈಜುವೆಯೊ
ಕಡಲಾಳವ ಸೇರುವೆಯೋ! || ಪ ||

ಭಾವದ ಬೆನ್ನೇರಿ-
ಕೋಗಿಲೆ ಆಗುವೆಯೊ
ನವಿಲಾಗಿ ಕುಣಿಯುವೆಯೊ
ಕವಿತೆಯ ಬರೆಯುವೆಯೊ
ಕತೆಯೇ ಆಗುವೆಯೋ!

ಭಾವದ ಬೆನ್ನೇರಿ-
ಗುರಿಯನು ಕಾಣುವೆಯೊ
ಗರಿಯನು ಪಡೆಯುವೆಯೊ
ಗೆರೆಯನು ಒಡೆಯುವೆಯೊ
ಒರೆಯನು ಸೇರುವೆಯೋ!

ಭಾವದ ಬೆನ್ನೇರಿ-
ಜಗದಗಲ ಹರಿಯುವೆಯೊ
ಯುಗಯುಗವ ಹೀರುವೆಯೊ
ರಾಮಾಯಣ ಬರೆಯುವೆಯೊ
ರಾಮಾಯಣವೆ ಆಗುವೆಯೋ!

ಭಾವದ ಬೆನ್ನೇರಿ-
ಮುಗಿಲಲಿ ತೇಲುವೆಯೊ
ನೆಲದಲಿ ಹರಿಯುವೆಯೊ
ಹಸಿರಾಗಿ ಹೊಮ್ಮುವೆಯೊ
ಉಸಿರಾಗಿ ಮಿಡಿಯುವೆಯೋ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವ್ಯ ಬದುಕು
Next post ಬದಲಾವಣೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…