Home / ಕವನ / ಕವಿತೆ / ಕವನ ಮೀಮಾಂಸೆ

ಕವನ ಮೀಮಾಂಸೆ

ಕವಿತೆ ಹುಟ್ಟುವ ಸಮಯ
ಗೊತ್ತಿಲ್ಲ
ಕವಿತೆ ಬರೆವುದು ಹೇಗೆ
ಗೊತ್ತಿಲ್ಲ

ಕವಿತೆ ಬೆಳೆವುದು ಎಲ್ಲಿ
ಕವಿತೆ ಅಳಿವುದು ಎಲ್ಲಿ?
ಗೊತ್ತಿಲ್ಲ

ನಾವು ಕವಿಗಳಾದೆವೆ
ಬರೆದ ಕವಿತೆ ಪೂರ್‍ಣವೆ?
ಗೊತ್ತಿಲ್ಲ

ಕವಿತೆ ಹುಟ್ಟಬಲ್ಲದೆ
ಹುಟ್ಟು ಕವಿತೆಯ ಸಾವೆ?
ಗೊತ್ತಿಲ್ಲ

ಕವಿತೆ ತಿಳಿದವರಾರು?
ಕವಿತೆ ಬರೆದವರಾರು?
ಗೊತ್ತಿಲ್ಲ

ಕವಿತೆ ತಿಳಿವುದು ಹೇಗೆ?
ಕವಿತೆ ಬಗೆವುದು ಹೇಗೆ?
ಗೊತ್ತಿಲ್ಲ

ಕವಿತೆ ನುಸುಳುವುದ್ಹೇಗೆ?
ಕವಿತೆ ಮರಳುವುದ್ಹೇಗೆ?
ಗೊತ್ತಿಲ್ಲ

ಕವಿತೆಗೆ ಏನು ಬೇಕು?
ಕವಿತೆಗೆ ಏನು ಬೇಡ?
ಗೊತ್ತಿಲ್ಲ

ಕವಿತೆಗೆ ಅರ್‍ಥ ಬೇಕೆ?
ಕವಿತೆಗೆ ನಾದ ಸಾಕೆ?
ಗೊತ್ತಿಲ್ಲ

ಕವಿತೆಗೆ ಚರಿತೆ ಇದೆಯೆ?
ಕವಿತೆಗೆ ದಿಕ್ಕು ಇದೆಯೆ?
ಗೊತ್ತಿಲ್ಲ

ಕವಿತೆಗೆ ಮಾತು ಬೇಕೆ?
ಆ ಮಾತಿಗಂತ್ಯವಿದೆಯೇ?
ಗೊತ್ತಿಲ್ಲ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...