ವಿಚಾರದಂತೆ ಮನ

ಎತ್ತೆತ್ತ ನೋಡಲಿ ದೇವಾ ನಾನು
ನೀವೇ ನನ್ನ ಕಣ್ಣ ತುಂಬ ತುಂಬಿದ್ದಿರಾ
ಕಣ್ಣು ಮಚ್ಚಿದರಾಯ್ತು ನಾನು
ನೀವೆ ಎನ್ನ ಸಪ್ನದಲ್ಲಿ ಬಂದಿದ್ದೀರಾ

ಯಾರು ಹೇಳದರೋ ನಮಗಂದು
ಮನಸ್ಸು ತುಂಬ ಮರ್ಕಟವೆಂದು
ಆದರೆ ಮನಸ್ಸನ್ನು ಕರೆದು ತೋರಿದವರು
ಇದೆಲ್ಲ ಸುಖವೆಂದು ನಾವು ಹೇಳಿದವರು

ಮನಸ್ಸು ನಮ್ಮ ಸ್ವಾಧೀನವಾದರಾಯ್ತು
ಅದನ್ನು ಅಂತರಂಗಕ್ಕೆ ತಿರುಗಿಸಬೇಕು
ಎಲ್ಲವನ್ನು ಮರೆಸುತ್ತ ನಿತ್ಯ ನಾವುಗಳು
ದೇವರ ನಾಮವನ್ನು ಸ್ಮರಿಸಬೇಕು

ಹಗಲಿರುಳು ನಾಮ ಜಪಸ್ಮರಣೆ
ನಮ್ಮ ಮನಸಾಗುವುದು ಹಣ್ಣು ಹಣ್ಣು
ಆಗ ಸದಾ ಕಾಡುವುದು ನಮ್ಮನ್ನೆ
ಬೇಕೆಂದು ಮಾಣಿಕ್ಯ ವಿಠಲ ಪಾದ ಮಣ್ಣು ಸಜ್ಜನರ ಪಾದ ಮಣ್ಣು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೮
Next post ಕಾಡ ಬೇಡ ಗೆಳತಿ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…