ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್

ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್

ಅಮೆರಿಕಾದೇಶವು ತಂತ್ರಜ್ಞಾನದಲ್ಲಿ ಮುಂದೆಮುಂದೆ ಹೋಗುತ್ತ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಲಿದೆ. ಅದರಲ್ಲೂ ಮೊಬೈಲ್ ಫೋನ್‌ನಲ್ಲಿ ವಿಶಿಷ್ಟವಾದ, ಅಪೂರ್ವವೆನಿಸಿದ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. “ಇಟೇಲ್ ಪಿ ೩೦೦” ಎಂದು ಇದರ ಹೆಸರು. ಈ ಪಾಕೆಟ್ ಪಿಸಿಯ ಸ್ಕ್ರೀನ್ ೩೨೦೨೪೦ ಪಿಕ್ಸೆಲ್ ರಿಜಲ್ಯೂಶನ್ ಹೊಂದಿದ್ದು ಟಚ್‌ಸ್ಕ್ರೀನ್ ಹೊಂದಿದೆ. ಸ್ಟೈಲಸ್ ಅಥವಾ ಒಂದು ಬೆರಳು ಉಪಯೋಗಿಸಿ ಮಾಹಿತಿಯನ್ನು ತುಂಬುವ ಮತ್ತು ಪಡೆಯುವ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಉಪಯೋಗಿಸಲಾಗಿರುವ ಟ್ರಾನ್ಸ್‌ಟೆಕ್ಟಿವ್ ತಂತ್ರಜ್ಞಾನದಿಂದ ಪರದೆಯ ಮೇಲಿನ ಅಕ್ಷರಗಳನ್ನು ಅತಿಸ್ಪಷ್ಟವಾಗಿ ಓದಬಹುದು. ೧೨ ಬಿಟ್‌ವರ್ಣ ಪರದೆ ೪೦೯೬ ವರ್ಣಗಳನ್ನು ಬಿಂಬಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಮೊಬೈಲ್ Phone ನ್ನು ವಿಶ್ವವ್ಯಾಪಿಯಾಗಿ ಯಾವುದೇ G.S.M/G.P.R.S. ಜಾಲಗಳಲ್ಲಿ ಉಪಯೋಗಿಸಬಹುದು. ಇದರೊಳಗೆ ವೆಬ್‌ಕ್ಯಾಮರಾ (640-480) ಸಹ ಅಳವಡಿಸಲಾಗಿದೆ. ಇದನ್ನು ಉಪಯೋಗಿಸಿಕೊಂಡು ಸಣ್ಣ ಅವಧಿಯ ವಿಡಿಯೋ ಮತ್ತು ಸ್ಥಿರಚಿತ್ರಗಳನ್ನು ತೆಗೆದು E ಮೆಲ್ ಮಾಡಬಹುದು. P-300ನಲ್ಲಿ 200 M.H.Z ಹಿತಾಚಿ A.R.M.9 ಪ್ರೊಸೆಸರ್ 64 ಎಂಬಿ ಎಸ್‌ಡಿರ್‍ಯಾಮ್ ಹೊಂದಿದೆ. ಈP.C. ಮೈಕ್ರೋಸಾಪ್ಟ್ ವಿಂಡೋಸ್ ಮೊಬೈಲ್ 2003 ಪಾಕೆಟ್ PC O.S ಆಧಾರದ ಮೇಲೆ ನಡೆಯುತ್ತದೆ. ಅಲ್ಲದೇ ವಿಂಡೋಸ್ ಸಿ. ಇ. 4-2 ಆಪರೇಟಿಂಗ್ ಸಿಸ್ಟಮ್ ಮತ್ತು ಪಾಕೆಟ್ P.C.ಆವೃತ್ತಿಯ ಕ್ಯಾಲೆಂಡರ್ ಇನ್‌ಬಾಕ್ಸ್, ಎಕ್ಸೆಲ್, ಇಂಟರ್ನೆಟ್ ಎಕ್ಸ್‌ಪ್ಲೋರರ್, ಎಂ.ಎಸ್.ರೀಡರ್ ಮಿಡಿಯಾ ಪ್ಲೇಯರ್, ಇಮ್ಯಾಜ್ ಮೇಕರ್ ಮಲ್ಟಿ ಮಿಡಿಯಾ ಮ್ಯಾನೇಜರ್ ಫೋಟೋ ಕ್ಯಾಪ್ಚರ್ ಸಿಮ್‌ಮ್ಯಾನೇಜರ್, ಬ್ಯಾಕ್ ಅಪ್ ಯುಟಿಲಿಟಿ, ಕಾಂಟಾಸೈ ಅಡ್ಜಸ್ಟರ್, ಮತ್ತು ಸಿಸ್ಟಮ್ ಕನ್ಸೋಲ್‌ಗಳನ್ನು ಇದು ಹೊಂದಿದೆ.

ದಿಲ್ಲಿ ಮುಂಬೈ, ಮತ್ತು ಬೆಂಗಳೂರಿನ ಕೆಲವು ಆಯಾ ಮಳಿಗೆಗಳಲ್ಲಿ ಲಭ್ಯವಿರುವ ಈ ಉತ್ಪನ್ನದ ಬೆಲೆ ೩೫೯೯ ರೂ.ಗಳು ೨೧ ನೆ ಶತಮಾನದ ವೈಯಕ್ತಿಕ ಸಂವಹನದ ಹಾಗೂ ಮಾಹಿತಿಗಳ ಅಪೂರ್ವ ಮೊಬೈಲ್ ಇದಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜವಾಬುದಾರಿ
Next post ಪಾಪಿ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…