ಇದನ್ನೆಲ್ಲ ಕಂಡು ಸಾಯುವುದೆ ಮೇಲೆನಿಸುವುದು !
ದಟ್ಟ ದಾರಿದ್ರ್ಯದಲಿ ಪ್ರತಿಭೆ ಕಣ್ತೆರೆಯುವುದು,
ಹುಟ್ಬುಮುಟ್ಠಾಳ ಏಳಿಗೆ ಪಡೆದು ಮೆರೆಯುವುದು,
ಪರಿಶುದ್ಧ ನಿಷ್ಠೆ ವಂಚನೆಗೆ ಬಲಿಹೋಗುವುದು,
ಮಾನಕ್ಕೆ ಮರ್ಯಾದೆ ಕೊಡದ ನಿರ್ಲಜ್ಜನಡೆ,
ಮುಗ್ಧ ಶೀಲಕ್ಕೆ ವಸ್ತ್ರಾಪಹರಣದ ಬೆಲೆ,
ಮುಗ್ಗರಿಸುವಂತೆ ಪರಿಪೂರ್ಣತೆಗೆ ತೊಡಕು ತಡೆ,
ಸಿಂಹಸಾಹಸವ ಕುಂಟಾಗಿಸುವ ನರಿಯ ಕಲೆ,
ಕಲೆಯ ನಾಲಿಗೆಯನ್ನೆ ಕಟ್ಟಿರುವ ಅಧಿಕಾರ,
ಬುದ್ಧಿ ಕೌಶಲ್ಯಕ್ಕೆ ಪೆದ್ದರ ನಿಯಂತ್ರಣ,
ಸರಳ ಸತ್ಯಕ್ಕೆ ಸಾಮಾನ್ಯತೆಯ ಸತ್ಕಾರ,
ಶ್ರೇಷ್ಠೆತೆಗೆ ಕೀಳು ನೀಚರ ಸೇವೆ ಬಹುಮಾನ :
ಸಾಗುವುದೆ ಲೇಸೆನಿಸುವುದು ನೋಡಿ ಇದನೆಲ್ಲ
ಅದರೆನ್ನೊಲವ ಏಕಾಕಿ ಬಿಡಬೇಕಲ್ಲ !
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 66
Tired with all these, for restful death I cry
Related Post
ಸಣ್ಣ ಕತೆ
-
ಮೇಷ್ಟ್ರು ವೆಂಕಟಸುಬ್ಬಯ್ಯ
ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…
-
ಕರಿ ನಾಗರಗಳು
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…