ದೆಸೆ ತಿರುಗಿ ಮೇಲೆದ್ದ ಜನ ತಮಗೆ ಗಿಟ್ಚಿರುವ
ಬಿರುದು ಬಾವಲಿಯನ್ನು ಕೊಚ್ಚಿಕೊಳ್ಳಲಿ ಬೀಗಿ,
ನನಗಿಲ್ಲ ಅಂಥ ಅದೃಷ್ಟ, ನನ್ನೆಲ್ಲ ಸುಖ
ಬಲು ಹಿರಿಯದೆಂದು ನಾ ಗೌರವಿಸಿದುದರಲ್ಲಿ.
ರಾಜಕೃಪೆ ದಕ್ಕಿ ವೀರರ ಕೀರ್ತಿ ಹಬ್ಬುವುದು
ರವಿಕಿರಣ ತಾಗಿ ಹೂ ಹೊನ್ನಂತೆ ಹೊಳೆವಂತೆ;
ಗೆದ್ದೆಲ್ಲ ಹೆಮ್ಮೆ ಇದ್ದಲ್ಲೆ ಪುಡಿ ಪುಡಿ, ಮುಳಿದು
ಹುಬ್ಬುಗಂಟಿಕ್ಕಲದು ಎಲ್ಲ ಕಥೆ ಮುಗಿದಂತೆ.
ದಿಟ್ಟ ಹೋರಾಟಗಳ ಸಾರಿ ಸಾವಿರ ಬಾರಿ
ಗೆದ್ದು ಯಾವಾಗಲೋ ಒಮ್ಮೆ ಬಿದ್ದರೆ ಮಲ್ಲ,
ಗೌರವದ ಶಿಖರದಿಂದುರುಳಿ ಗೋರಿಗೆ ದಾರಿ
ಹೊಳೆಯಲ್ಲಿ ಹುಣಿಸೆ ತೊಳೆದಂತೆ ಹಿಂದಿನದೆಲ್ಲ.
ನಾನೆ ಸುಖಿ ಕೊಟ್ಟು ಪಡೆದಿರುವೆ ಪ್ರೀತಿಯನೆಲ್ಲ,
ತೊರೆಯುವವನಲ್ಲ, ತೊರೆಯುವರೆಂಬ ಭಯವಿಲ್ಲ.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 25
Let those who are in favour with their stars
Related Post
ಸಣ್ಣ ಕತೆ
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…