ನೀನು ಯೌವನದೊಡನೆ ಕೂಡಿಕೊಂಡಿರುವಾಗ

ನೀನು ಯೌವನದೊಡನೆ ಕೂಡಿಕೊಂಡಿರುವಾಗ
ಕನ್ನಡಿಯು ನನ್ನ ವಯಸ್ಸನ್ನೆ ತೋರಿಸದು,
ಆದರೀ ನಿನ್ನ ಹಣೆಯೊಳು ನೆರಿಗೆ ಕಂಡಾಗ
ಇನ್ನು ಮುಗಿಯಿತು ನನ್ನ ಕಾಲ ಎನಿಸುವುದು
ನಾ ನಿನ್ನೊಳಿರುವಂತೆ ನೀನಿರುವೆ ನನ್ನೊಳಗೆ,
ನಿನ್ನ ಮೈಚೆಲುವೆಲ್ಲ ನನ್ನ ಆತ್ಮದ ತೊಡಿಗೆ,
ಹೀಗಿರುತ ನಾನು ನಿನಗಿಂತ ಹಿರಿಯನು ಹೇಗೆ ?
ಒಲವೆ ಎಚ್ಚರವಹಿಸು ನೀ ನಿನ್ನ ಬಗೆಗೆ.
ಲಕ್ಷ್ಯ ನೀಡುವೆ ನಾನು ಕೂಡ ನಿನಗಾಗೇ
ನನಗಾಗಿ ಅಲ್ಲ, ನನ್ನೊಳಗಿರುವ ನಿನಗಾಗಿ,
ದಾದಿ ಜೋಪಾನದಲಿ ಕೇಡು ಬಾರದ ಹಾಗೆ
ಎಚ್ಚರ ತಳೆವ ರೀತಿ ಮಡಿಲ ಎಳೆಮಗುಗಾಗಿ.
ನಾನಳಿವೆ, ಹೃದಯ ಹಿಂದಕ್ಕೆ ಕೇಳಲು ಸಲ್ಲ,
ನೀನು ನನಗದನು ಕೊಟ್ಟದ್ದು ಮರಳಿಸಲಿಲ್ಲ
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 22
My glass shall not persuade me I am old

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಂಸ್ತ್ರೀ – ೩
Next post ವಿದ್ಯಾರ್‍ಥಿ ಆತ್ಮಹತ್ಯೆ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…