ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು.
ಒಲವೆ ನೀನೆಂದಿಗೂ ಹೀಗೇ ಇರುವುದಿಲ್ಲ.
ಸಿದ್ಧತೆಯ ಮಾಡು ಬರಲಿರುವ ಕೊನೆ ಎದುರಿಸಲು
ನಿನ್ನ ಸವಿಬಿಂಬವನು ಯಾರಿಗಾದರು ನೀಡು.
ನಿನ್ನ ಗೇಣಿಯೊಳಿರುವ ಚೆಲುವು ನೀ ನಡೆದಾಗ
ಕೊನೆಗೊಳ್ಳುವುದು ಸಲ್ಲ. ನಿನ್ನ ಪ್ರಿಯ ತಳಿಯೇ
ಮುಂದೆ ಈ ಸೌಂದರ್ಯವನ್ನು ತಳೆವುದು, ಆಗ
ಸತ್ತರೂ ಸಹ ನೀನು ನೀನಾಗಿಯೇ ಉಳಿವೆ.
ಚಳಿಗಾಲದಲಿ ಕ್ರೂರ ಬಿರುಗಾಳಿ ಬಡಿಯುವುದು,
ಸಾವಿನ ಅನಂತ ಹಿಮದಾವೇಶವನು ತಡೆದು
ರಕ್ಷಿಸಲು ಗೌರವ ವಿವಾಹ ಸಾಧನವಿರಲು
ಬೀಳಬಿಡುವರು ಯಾರು ಸುಂದರಗೃಹ ಜರಿದು ?
ದುಂದುಗಾರರು ಮಾತ್ರ. ನಿನಗೆ ಇದ್ದನು ತಂದೆ,
ನಿನ್ನ ಮಗನೂ ಹಾಗೆ ಹೇಳಬೇಡವೆ ಮುಂದೆ ?
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 13
O that you were yourself, but love you are
Related Post
ಸಣ್ಣ ಕತೆ
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಆ ರಾತ್ರಿ
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…
-
ಮೇಷ್ಟ್ರು ರಂಗಪ್ಪ
ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…