ಪರಿಸರ ಗೀತೆ

ಬದುಕಿನ ದೀರ್ಘ ಪಯಣದಲ್ಲಿ
ಹೊಳೆದಂಡೆಗೆ ಕುಳಿತು ನೀನು
ಯೋಚಿಸುವೆ ಏನನ್ನು?
ನೀನೆಲ್ಲಿ ಹೋದರೂ
ಹಿಂದೆಯೇ ಬರುತ್ತವೆ
ನಿನ್ನ ಭೂತದ ನೆನಪುಗಳು.
ಘೋರ ರಾತ್ರಿ ಕಳೆದು
ಮುಂಜಾವಿನ ನಸುಕು
ನಿನ್ನ ಗೋಳನ್ನು ಮೀರಿ
ಉದಯಿಸುತ್ತಿರುವ ಸೂರ್ಯ
ಕಾಲನ ಕೈಗೆ ಸಿಕ್ಕು
ಸೋತಿರುವ ನಿನ್ನ ಬದುಕು
ಕಾಮನ ಬಿಲ್ಲಿನ ಬಣ್ಣಗಳು
ಸೃಷ್ಟಿಯ ಸುಂದರ
ತಾಣದಲಿ ಕೂತು ನೀನು
ನೆಮ್ಮದಿಯ ಹುಡುಕುತಲಿರುವೆಯಾ?
ಈ ಸುಂದರ ತಾಣಗಳ
ಇನ್ನೆಷ್ಟು ದಿನ ಸವಿಯುವೆ?
ನಗರಗಳು ಬೆಳೆದಂತೆ
ಬೆಟ್ಟಗಳೆಲ್ಲ ಭೂಮಿಯ
ಒಡಲು ಸೇರುವವು
ಕಾಡುಗಳೆಲ್ಲ ಬರಡಾಗುವವು
ತಿಳಿಜಲ ಮಲೀನವಾಗಿ
ಕೊನೆಗೊಂದು ದಿನ ಬತ್ತಿ
ಒಣಗಿ ಹೋಗುವವು.
ಗೆಳೆಯಾ!
ಕಳೆದುಹೋದ ನಿನ್ನ
ಭೂತವ ಬಿಟ್ಟು
ಬರಲಿರುವ ನಾಳಿನ
ಕುರಿತು ಯೋಚಿಸು.
ಸೃಷ್ಟಿಯ ಸುಂದರ
ತಾಣಗಳ ಉಳಿಸು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾ ಎಂದೊಡದು ಸ್ವರ್ಗಕ್ಕೆ ಸರಣಿ ಮೆಟ್ಟಿಲಾಗದೇ?
Next post ಜೂಜು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys