ಪರಿಸರ ಗೀತೆ

ಬದುಕಿನ ದೀರ್ಘ ಪಯಣದಲ್ಲಿ
ಹೊಳೆದಂಡೆಗೆ ಕುಳಿತು ನೀನು
ಯೋಚಿಸುವೆ ಏನನ್ನು?
ನೀನೆಲ್ಲಿ ಹೋದರೂ
ಹಿಂದೆಯೇ ಬರುತ್ತವೆ
ನಿನ್ನ ಭೂತದ ನೆನಪುಗಳು.
ಘೋರ ರಾತ್ರಿ ಕಳೆದು
ಮುಂಜಾವಿನ ನಸುಕು
ನಿನ್ನ ಗೋಳನ್ನು ಮೀರಿ
ಉದಯಿಸುತ್ತಿರುವ ಸೂರ್ಯ
ಕಾಲನ ಕೈಗೆ ಸಿಕ್ಕು
ಸೋತಿರುವ ನಿನ್ನ ಬದುಕು
ಕಾಮನ ಬಿಲ್ಲಿನ ಬಣ್ಣಗಳು
ಸೃಷ್ಟಿಯ ಸುಂದರ
ತಾಣದಲಿ ಕೂತು ನೀನು
ನೆಮ್ಮದಿಯ ಹುಡುಕುತಲಿರುವೆಯಾ?
ಈ ಸುಂದರ ತಾಣಗಳ
ಇನ್ನೆಷ್ಟು ದಿನ ಸವಿಯುವೆ?
ನಗರಗಳು ಬೆಳೆದಂತೆ
ಬೆಟ್ಟಗಳೆಲ್ಲ ಭೂಮಿಯ
ಒಡಲು ಸೇರುವವು
ಕಾಡುಗಳೆಲ್ಲ ಬರಡಾಗುವವು
ತಿಳಿಜಲ ಮಲೀನವಾಗಿ
ಕೊನೆಗೊಂದು ದಿನ ಬತ್ತಿ
ಒಣಗಿ ಹೋಗುವವು.
ಗೆಳೆಯಾ!
ಕಳೆದುಹೋದ ನಿನ್ನ
ಭೂತವ ಬಿಟ್ಟು
ಬರಲಿರುವ ನಾಳಿನ
ಕುರಿತು ಯೋಚಿಸು.
ಸೃಷ್ಟಿಯ ಸುಂದರ
ತಾಣಗಳ ಉಳಿಸು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾ ಎಂದೊಡದು ಸ್ವರ್ಗಕ್ಕೆ ಸರಣಿ ಮೆಟ್ಟಿಲಾಗದೇ?
Next post ಜೂಜು

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…