Home / ಕವನ / ಕವಿತೆ / ರೇಷ್ಮೆ ಹುಳಗಳು

ರೇಷ್ಮೆ ಹುಳಗಳು

ದುಷ್ಟ ಗಂಗೋತ್ರಿಗೆ
ಗಂಡಂದಿರ ಬಲಿ ಕೊಟ್ಟ
ನಿಮಗೆ ಮುಂಡೆಯರ
ಪಟ್ಟವೇ ಗಟ್ಟಿಯಾಯಿತೇನು?

ಉಕ್ಕಿ ಬಂದ ನಿಮ್ಮ ಹರೆಯ
ಅಂತರಂಗದಲೇ ಹಿಂಗಿತೇನು?
ಮೆಟ್ಟಿಬಂದ ಕಣ್ಣೀರು
ಗೊಂಡಾರಣ್ಯದ ಗೂಢಕ್ಕಿಳಿದು
ಗಟ್ಟಿ ಘನವಾಯಿತೇನು?

ಸಿಡಿದು ಹೋದ ಕನಸುಗಳು
ಕಡಲಾಚೆಯ ನೋವುಗಳು
ಬೆಂಕಿಯಿಲ್ಲ ಕಿಡಿಯಿಲ್ಲ
ಬರೀ ಬೂದಿಯ ಗೂಡುಗಳು.

ಒಡೆದು ಹೋದ ಕನ್ನಡಿಯಲ್ಲಿ
ಛಿದ್ರಗೊಂಡ ಕನಸುಗಳನು
ಬದುಕಿನ ಮುಸ್ಸಂಜೆಯಲಿ
ಮತ್ತೆ ಹೇಗೆ ಸಂಧಿಸುವಿರಿ?

ಬಯಕೆಗಳ ಗೋರಿಯ ಮೇಲೆ
ತೃಪ್ತಿಯ ಮುಖವಾಡವನು
ಎಲ್ಲಿಯತನಕ ಧರಿಸುವಿರಿ?
ವಿಧವೆಯ ಹಣೆಪಟ್ಟಿ ಹೊತ್ತು
ಎಲ್ಲಿಯವರೆಗೆ ನರಳುವಿರಿ?

ಕೋಗಿಲೆಯ ಕತ್ತನು
ಹಿಸುಕುವ ನಿಮ್ಮ ವಸಂತಗಳು
ಚೈತ್ರದ ಚಿಗುರುಗಳು
ಕಮರಿದ ಆಸೆಗಳು
ಬಣ್ಣ ಕಳೆದುಕೊಂಡು
ಬರಡಾದ ಚಿತ್ರಗಳು

ನಿಮ್ಮಾಳದಲ್ಲಿ ಬೇರುಬಿಟ್ಟ
ಬಿಳಲುಗಳ ಬೊಡ್ದೆಗಳಿಗೆ
ಅಲುಗಾಡಿಸಲಾರದೇ ಏದುಸಿರು ಬಿಡುತ್ತ
ಎಲ್ಲಿಯವರೆಗೆ ಜೋತು ಬೀಳುವಿರಿ?

ಅಂತಸ್ತುಗಳ ಅಂಕುಶದಡಿಯಲಿ
ಅಧೀರವಾಗಿ ಅಂಕೆ ತಪ್ಪುವ
ನಿಮ್ಮ ಅತೃಪ್ತ ಆತ್ಮಗಳು
ಗೂಡಿನಲ್ಲಿಯೇ ಕೊನೆಗಾಣುವ
ರೇಷ್ಮೆಯ ಹುಳಗಳು.
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...