ರೇಷ್ಮೆ ಹುಳಗಳು

ದುಷ್ಟ ಗಂಗೋತ್ರಿಗೆ
ಗಂಡಂದಿರ ಬಲಿ ಕೊಟ್ಟ
ನಿಮಗೆ ಮುಂಡೆಯರ
ಪಟ್ಟವೇ ಗಟ್ಟಿಯಾಯಿತೇನು?

ಉಕ್ಕಿ ಬಂದ ನಿಮ್ಮ ಹರೆಯ
ಅಂತರಂಗದಲೇ ಹಿಂಗಿತೇನು?
ಮೆಟ್ಟಿಬಂದ ಕಣ್ಣೀರು
ಗೊಂಡಾರಣ್ಯದ ಗೂಢಕ್ಕಿಳಿದು
ಗಟ್ಟಿ ಘನವಾಯಿತೇನು?

ಸಿಡಿದು ಹೋದ ಕನಸುಗಳು
ಕಡಲಾಚೆಯ ನೋವುಗಳು
ಬೆಂಕಿಯಿಲ್ಲ ಕಿಡಿಯಿಲ್ಲ
ಬರೀ ಬೂದಿಯ ಗೂಡುಗಳು.

ಒಡೆದು ಹೋದ ಕನ್ನಡಿಯಲ್ಲಿ
ಛಿದ್ರಗೊಂಡ ಕನಸುಗಳನು
ಬದುಕಿನ ಮುಸ್ಸಂಜೆಯಲಿ
ಮತ್ತೆ ಹೇಗೆ ಸಂಧಿಸುವಿರಿ?

ಬಯಕೆಗಳ ಗೋರಿಯ ಮೇಲೆ
ತೃಪ್ತಿಯ ಮುಖವಾಡವನು
ಎಲ್ಲಿಯತನಕ ಧರಿಸುವಿರಿ?
ವಿಧವೆಯ ಹಣೆಪಟ್ಟಿ ಹೊತ್ತು
ಎಲ್ಲಿಯವರೆಗೆ ನರಳುವಿರಿ?

ಕೋಗಿಲೆಯ ಕತ್ತನು
ಹಿಸುಕುವ ನಿಮ್ಮ ವಸಂತಗಳು
ಚೈತ್ರದ ಚಿಗುರುಗಳು
ಕಮರಿದ ಆಸೆಗಳು
ಬಣ್ಣ ಕಳೆದುಕೊಂಡು
ಬರಡಾದ ಚಿತ್ರಗಳು

ನಿಮ್ಮಾಳದಲ್ಲಿ ಬೇರುಬಿಟ್ಟ
ಬಿಳಲುಗಳ ಬೊಡ್ದೆಗಳಿಗೆ
ಅಲುಗಾಡಿಸಲಾರದೇ ಏದುಸಿರು ಬಿಡುತ್ತ
ಎಲ್ಲಿಯವರೆಗೆ ಜೋತು ಬೀಳುವಿರಿ?

ಅಂತಸ್ತುಗಳ ಅಂಕುಶದಡಿಯಲಿ
ಅಧೀರವಾಗಿ ಅಂಕೆ ತಪ್ಪುವ
ನಿಮ್ಮ ಅತೃಪ್ತ ಆತ್ಮಗಳು
ಗೂಡಿನಲ್ಲಿಯೇ ಕೊನೆಗಾಣುವ
ರೇಷ್ಮೆಯ ಹುಳಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗರಿಕೆ ಕಿತ್ತು ಮನೆಯ ಕಟ್ಟಿದವರುಂಟೇ?
Next post ಒಟ್ಟಿಗೆ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…