ರೇಷ್ಮೆ ಹುಳಗಳು

ದುಷ್ಟ ಗಂಗೋತ್ರಿಗೆ
ಗಂಡಂದಿರ ಬಲಿ ಕೊಟ್ಟ
ನಿಮಗೆ ಮುಂಡೆಯರ
ಪಟ್ಟವೇ ಗಟ್ಟಿಯಾಯಿತೇನು?

ಉಕ್ಕಿ ಬಂದ ನಿಮ್ಮ ಹರೆಯ
ಅಂತರಂಗದಲೇ ಹಿಂಗಿತೇನು?
ಮೆಟ್ಟಿಬಂದ ಕಣ್ಣೀರು
ಗೊಂಡಾರಣ್ಯದ ಗೂಢಕ್ಕಿಳಿದು
ಗಟ್ಟಿ ಘನವಾಯಿತೇನು?

ಸಿಡಿದು ಹೋದ ಕನಸುಗಳು
ಕಡಲಾಚೆಯ ನೋವುಗಳು
ಬೆಂಕಿಯಿಲ್ಲ ಕಿಡಿಯಿಲ್ಲ
ಬರೀ ಬೂದಿಯ ಗೂಡುಗಳು.

ಒಡೆದು ಹೋದ ಕನ್ನಡಿಯಲ್ಲಿ
ಛಿದ್ರಗೊಂಡ ಕನಸುಗಳನು
ಬದುಕಿನ ಮುಸ್ಸಂಜೆಯಲಿ
ಮತ್ತೆ ಹೇಗೆ ಸಂಧಿಸುವಿರಿ?

ಬಯಕೆಗಳ ಗೋರಿಯ ಮೇಲೆ
ತೃಪ್ತಿಯ ಮುಖವಾಡವನು
ಎಲ್ಲಿಯತನಕ ಧರಿಸುವಿರಿ?
ವಿಧವೆಯ ಹಣೆಪಟ್ಟಿ ಹೊತ್ತು
ಎಲ್ಲಿಯವರೆಗೆ ನರಳುವಿರಿ?

ಕೋಗಿಲೆಯ ಕತ್ತನು
ಹಿಸುಕುವ ನಿಮ್ಮ ವಸಂತಗಳು
ಚೈತ್ರದ ಚಿಗುರುಗಳು
ಕಮರಿದ ಆಸೆಗಳು
ಬಣ್ಣ ಕಳೆದುಕೊಂಡು
ಬರಡಾದ ಚಿತ್ರಗಳು

ನಿಮ್ಮಾಳದಲ್ಲಿ ಬೇರುಬಿಟ್ಟ
ಬಿಳಲುಗಳ ಬೊಡ್ದೆಗಳಿಗೆ
ಅಲುಗಾಡಿಸಲಾರದೇ ಏದುಸಿರು ಬಿಡುತ್ತ
ಎಲ್ಲಿಯವರೆಗೆ ಜೋತು ಬೀಳುವಿರಿ?

ಅಂತಸ್ತುಗಳ ಅಂಕುಶದಡಿಯಲಿ
ಅಧೀರವಾಗಿ ಅಂಕೆ ತಪ್ಪುವ
ನಿಮ್ಮ ಅತೃಪ್ತ ಆತ್ಮಗಳು
ಗೂಡಿನಲ್ಲಿಯೇ ಕೊನೆಗಾಣುವ
ರೇಷ್ಮೆಯ ಹುಳಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗರಿಕೆ ಕಿತ್ತು ಮನೆಯ ಕಟ್ಟಿದವರುಂಟೇ?
Next post ಒಟ್ಟಿಗೆ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys