Home / ಕವನ / ಕವಿತೆ / ರೇಷ್ಮೆ ಹುಳಗಳು

ರೇಷ್ಮೆ ಹುಳಗಳು

ದುಷ್ಟ ಗಂಗೋತ್ರಿಗೆ
ಗಂಡಂದಿರ ಬಲಿ ಕೊಟ್ಟ
ನಿಮಗೆ ಮುಂಡೆಯರ
ಪಟ್ಟವೇ ಗಟ್ಟಿಯಾಯಿತೇನು?

ಉಕ್ಕಿ ಬಂದ ನಿಮ್ಮ ಹರೆಯ
ಅಂತರಂಗದಲೇ ಹಿಂಗಿತೇನು?
ಮೆಟ್ಟಿಬಂದ ಕಣ್ಣೀರು
ಗೊಂಡಾರಣ್ಯದ ಗೂಢಕ್ಕಿಳಿದು
ಗಟ್ಟಿ ಘನವಾಯಿತೇನು?

ಸಿಡಿದು ಹೋದ ಕನಸುಗಳು
ಕಡಲಾಚೆಯ ನೋವುಗಳು
ಬೆಂಕಿಯಿಲ್ಲ ಕಿಡಿಯಿಲ್ಲ
ಬರೀ ಬೂದಿಯ ಗೂಡುಗಳು.

ಒಡೆದು ಹೋದ ಕನ್ನಡಿಯಲ್ಲಿ
ಛಿದ್ರಗೊಂಡ ಕನಸುಗಳನು
ಬದುಕಿನ ಮುಸ್ಸಂಜೆಯಲಿ
ಮತ್ತೆ ಹೇಗೆ ಸಂಧಿಸುವಿರಿ?

ಬಯಕೆಗಳ ಗೋರಿಯ ಮೇಲೆ
ತೃಪ್ತಿಯ ಮುಖವಾಡವನು
ಎಲ್ಲಿಯತನಕ ಧರಿಸುವಿರಿ?
ವಿಧವೆಯ ಹಣೆಪಟ್ಟಿ ಹೊತ್ತು
ಎಲ್ಲಿಯವರೆಗೆ ನರಳುವಿರಿ?

ಕೋಗಿಲೆಯ ಕತ್ತನು
ಹಿಸುಕುವ ನಿಮ್ಮ ವಸಂತಗಳು
ಚೈತ್ರದ ಚಿಗುರುಗಳು
ಕಮರಿದ ಆಸೆಗಳು
ಬಣ್ಣ ಕಳೆದುಕೊಂಡು
ಬರಡಾದ ಚಿತ್ರಗಳು

ನಿಮ್ಮಾಳದಲ್ಲಿ ಬೇರುಬಿಟ್ಟ
ಬಿಳಲುಗಳ ಬೊಡ್ದೆಗಳಿಗೆ
ಅಲುಗಾಡಿಸಲಾರದೇ ಏದುಸಿರು ಬಿಡುತ್ತ
ಎಲ್ಲಿಯವರೆಗೆ ಜೋತು ಬೀಳುವಿರಿ?

ಅಂತಸ್ತುಗಳ ಅಂಕುಶದಡಿಯಲಿ
ಅಧೀರವಾಗಿ ಅಂಕೆ ತಪ್ಪುವ
ನಿಮ್ಮ ಅತೃಪ್ತ ಆತ್ಮಗಳು
ಗೂಡಿನಲ್ಲಿಯೇ ಕೊನೆಗಾಣುವ
ರೇಷ್ಮೆಯ ಹುಳಗಳು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...