ಬೆಳ್ಳಿ ಚುಕ್ಕಿ

ಸಭಾದಾಗ ಕೂತುಕೊಂಡು ಇವರು
ನಮ್ಮ ಮೇಲೆ ಕಾನೂನು ಮಾಡ್ತಾರ,
ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು
ಓಟ ಕೇಳಲಿಕ್ಕೆ ಬರತಾರ.
ನಮ್ಮ ಉದ್ಧಾರವೇ ತಮ್ಮ ಧೈಯ
ಅಂತ ಹೇಳಿ ಘೋಷಣೆ ಕೊಡ್ತಾರ
ಆ ನನ್ಮಕ್ಕಳ ಚರ್ಮ ಸುಲೀಬೇಕನಸ್ತಾದ.
ನಾವು ಇವರಿಗೆ ಬ್ಯಾಡಂತ.
ನಮ್ಮ ಓಟ ಮಾತ್ರ ಬೇಕಂತ.
ಊರಾಗ ನಾವು ಇದ್ರ ಸರಿ
ಕಾಣೋದಿಲ್ಲಂತ ಬುಲ್ಡೊಜರ ಹಚ್ಚಿ
ನಮ್ಮ ಗುಡಿಸಲು ನೆಲಸಮ ಮಾಡ್ತಾರ.
ಆಗಾಗ ಅವಕ್ಕೆ ಬೆಂಕಿ ಇಟ್ಟು
ಹೋಳಿ ಆಡ್ತಾರ ಜೀವಂತ ಸುಡ್ತಾರ
ಆ ಪರದೇಶಿಗಳು ಬಂದಾಗ
ನಮ್ಮ ಜೋಪಡಿ ಅವರ ಕಣ್ಣಿಗೆ ಬೀಳದಂಗ
ಭಾಳ ಎಚ್ಚರಿಕೆ ವಹಿಸಿ,
ಅವರ ಜೊತೆಗೇನೆ ತಿರಗ್ತಾರ.
ಆಗಾಗ ನಮ್ಮ ಉದ್ಧಾರಕ್ಕೆ
ಸಭೆನೂ ಕರೀತಾರ
ಸನ್ಮಾನ ಮಾಡ್ಕೊತಾರ
ಎರ್‌ಕಂಡಿಷನ್ ಕಾರಿನ್ಯಾಗ ಕೂತು
ಹಾರ ಹಾಕ್ಕೋತಾರ.
ನಮ್ಮ ಉದ್ಧಾರಕ್ಕ ಹೊರಟಾರಿವರು.
ನಮ್ಮ ಮ್ಯಾಲೇನೇ ದೊಡ್ಡ ದೊಡ್ಡ
ಕಾನೂನಿನ ಪುಸ್ತಕನೂ ಬರ್‍ದಾರಿವರು
ಅಂದು ಗಾಂಧಿ ಮುದುಕ
ಅರ್ಧಕ್ಕೆ ಬಿಟ್ಟ ಕೆಲಸ ಪೂರ್ತಿ
ಮಾಡಾಕ ಹತ್ತಾರಂತ ಇವರು.
ಅವನ ಹೆಸರಿನ ಮಂತ್ರ
ಆಗ್ಯಾದ ಇವರ ರಾಜಕೀಯ ತಂತ್ರ
ಅವನ ಟೊಪ್ಪಿಗಿ ಹಾಕ್ಕೊಂಡು
ಓಟ ಕೇಳಲಿಕ್ಕೆ ಬರತಾರಿವರು.
ನಾವು ಹಸಿವಿನಿಂದ ಸಾಯ್ತಿದ್ದೀವಿ
ಹೊಟ್ಟೆ ಬಟ್ಟೆ ಕಟ್ಟಿ ಅಸಮತೆಯ
ತ್ಯಾಗ ಬೇಯಾಕತ್ತೀವಿ.
ತಣಯ ಕಾಲೀಗಿ ಬೂಟು ಮೆಟ್ಟು ಹೊಲಿದು
ಬರಿಗಾಲಿಂದು ತಿರುಗಾಕತ್ತೀವಿ
ನಮ್ಮ ಕೇಂಪನ್ನ ರಕ್ತ ಸುಟ್ಟು
ಕಪ್ಪನ ಹೊಗೆಯರಾಗಿ,
ಕಾರ್ಖಾನೆ ಕೊಳವೆಯಿಂದ
ಕರಿಮೋಡಾಗಿ ಹೊರಹೊಮ್ಮಲಿಕತ್ತ್ಯಾದ
ಸುತ್ತೆಲ್ಲಾ ಭೀಕರ ಕತ್ತಲ ಮುತ್ತ್ಯಾದ
ಅಲ್ಲಿ ನೋಡು ಮೋಡದಲ್ಲಿ.
ಬೆಳ್ಳಿಚುಕ್ಕಿಯೊಂದು ಹೊಳಿಲಿಕತ್ತ್ಯಾದ
ಅದರ ಬೆಳಕಿನ್ಯಾಗ
ಮುಂದಕ್ಕ ಸಾಗೋಣ ನಾವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣಲೆಂದು ನಿಂದಲ್ಲೇ ನಿಂದರೇನು ಬಂತು?
Next post ನಿಮಗ್ಯಾಕೆ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…