Home / ಕವನ / ಕವಿತೆ / ಬೆಳ್ಳಿ ಚುಕ್ಕಿ

ಬೆಳ್ಳಿ ಚುಕ್ಕಿ

ಸಭಾದಾಗ ಕೂತುಕೊಂಡು ಇವರು
ನಮ್ಮ ಮೇಲೆ ಕಾನೂನು ಮಾಡ್ತಾರ,
ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು
ಓಟ ಕೇಳಲಿಕ್ಕೆ ಬರತಾರ.
ನಮ್ಮ ಉದ್ಧಾರವೇ ತಮ್ಮ ಧೈಯ
ಅಂತ ಹೇಳಿ ಘೋಷಣೆ ಕೊಡ್ತಾರ
ಆ ನನ್ಮಕ್ಕಳ ಚರ್ಮ ಸುಲೀಬೇಕನಸ್ತಾದ.
ನಾವು ಇವರಿಗೆ ಬ್ಯಾಡಂತ.
ನಮ್ಮ ಓಟ ಮಾತ್ರ ಬೇಕಂತ.
ಊರಾಗ ನಾವು ಇದ್ರ ಸರಿ
ಕಾಣೋದಿಲ್ಲಂತ ಬುಲ್ಡೊಜರ ಹಚ್ಚಿ
ನಮ್ಮ ಗುಡಿಸಲು ನೆಲಸಮ ಮಾಡ್ತಾರ.
ಆಗಾಗ ಅವಕ್ಕೆ ಬೆಂಕಿ ಇಟ್ಟು
ಹೋಳಿ ಆಡ್ತಾರ ಜೀವಂತ ಸುಡ್ತಾರ
ಆ ಪರದೇಶಿಗಳು ಬಂದಾಗ
ನಮ್ಮ ಜೋಪಡಿ ಅವರ ಕಣ್ಣಿಗೆ ಬೀಳದಂಗ
ಭಾಳ ಎಚ್ಚರಿಕೆ ವಹಿಸಿ,
ಅವರ ಜೊತೆಗೇನೆ ತಿರಗ್ತಾರ.
ಆಗಾಗ ನಮ್ಮ ಉದ್ಧಾರಕ್ಕೆ
ಸಭೆನೂ ಕರೀತಾರ
ಸನ್ಮಾನ ಮಾಡ್ಕೊತಾರ
ಎರ್‌ಕಂಡಿಷನ್ ಕಾರಿನ್ಯಾಗ ಕೂತು
ಹಾರ ಹಾಕ್ಕೋತಾರ.
ನಮ್ಮ ಉದ್ಧಾರಕ್ಕ ಹೊರಟಾರಿವರು.
ನಮ್ಮ ಮ್ಯಾಲೇನೇ ದೊಡ್ಡ ದೊಡ್ಡ
ಕಾನೂನಿನ ಪುಸ್ತಕನೂ ಬರ್‍ದಾರಿವರು
ಅಂದು ಗಾಂಧಿ ಮುದುಕ
ಅರ್ಧಕ್ಕೆ ಬಿಟ್ಟ ಕೆಲಸ ಪೂರ್ತಿ
ಮಾಡಾಕ ಹತ್ತಾರಂತ ಇವರು.
ಅವನ ಹೆಸರಿನ ಮಂತ್ರ
ಆಗ್ಯಾದ ಇವರ ರಾಜಕೀಯ ತಂತ್ರ
ಅವನ ಟೊಪ್ಪಿಗಿ ಹಾಕ್ಕೊಂಡು
ಓಟ ಕೇಳಲಿಕ್ಕೆ ಬರತಾರಿವರು.
ನಾವು ಹಸಿವಿನಿಂದ ಸಾಯ್ತಿದ್ದೀವಿ
ಹೊಟ್ಟೆ ಬಟ್ಟೆ ಕಟ್ಟಿ ಅಸಮತೆಯ
ತ್ಯಾಗ ಬೇಯಾಕತ್ತೀವಿ.
ತಣಯ ಕಾಲೀಗಿ ಬೂಟು ಮೆಟ್ಟು ಹೊಲಿದು
ಬರಿಗಾಲಿಂದು ತಿರುಗಾಕತ್ತೀವಿ
ನಮ್ಮ ಕೇಂಪನ್ನ ರಕ್ತ ಸುಟ್ಟು
ಕಪ್ಪನ ಹೊಗೆಯರಾಗಿ,
ಕಾರ್ಖಾನೆ ಕೊಳವೆಯಿಂದ
ಕರಿಮೋಡಾಗಿ ಹೊರಹೊಮ್ಮಲಿಕತ್ತ್ಯಾದ
ಸುತ್ತೆಲ್ಲಾ ಭೀಕರ ಕತ್ತಲ ಮುತ್ತ್ಯಾದ
ಅಲ್ಲಿ ನೋಡು ಮೋಡದಲ್ಲಿ.
ಬೆಳ್ಳಿಚುಕ್ಕಿಯೊಂದು ಹೊಳಿಲಿಕತ್ತ್ಯಾದ
ಅದರ ಬೆಳಕಿನ್ಯಾಗ
ಮುಂದಕ್ಕ ಸಾಗೋಣ ನಾವು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...