ಬದುಕು ಒಂದು ರುದ್ರವೀಣೆ

ಬದುಕು ಒಂದು ರುದ್ರವೀಣೆ
ನಡೆಸುವವನು ನುಡಿಸು ನೀನು
ಬೆರಸಿ ನಿನ್ನ ತನು ಮನವನು||
ಕಲಿಸಿ ಎಲ್ಲಾನಡೆಸುತಿರಲವನು
ಭಯವದೇಕೆ ಬದುಕುವುದಕೆ?||

ನಾಳೆಯ ಚಿಂತೆಯ ಬಿಟ್ಟುನೀನು
ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ|
ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇಕೊಡುವನು|
ನಾಳೆಗಾಗಿ ಕೊರಗಿ ನೀನು ಕೆಡಲುಬೇಡ
ಇಂದಿನ ಸುಂದರ ಅಮೃತಘಳಿಗೆಯನು||

ಆಗಿಹೋದ ಮಿಂಚಿಮಾಸಿದ
ಕಹಿಯನೆನೆದು ಕೊರಗಲು ಫಲವದಿಲ್ಲ|
ಹಳೆಯದನುಭವದಿ ಹೊಸಾ ಚಿಗುರಬೆಳಸಿ
ತಳಿರುಕಾಂತಿಯ ತುಂಬು ನೀನು|
ಫಲಾಫಲವ ಬಯಸದಲೇ
ಪಾಪಕರ್ಮವೆಸಗದೆ ಬಾಳಸಾಗಿಸು ನೀನು
ತಂದ ಕರ್ಮತೀರಿಸುತಲಿ
ಮುಂದೆ ಮುಂದೆ ಸಾಗು ನೀನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವಲಗಾರ ಕಂಭ
Next post ಭಕ್ತಿ ತರಂಗಗಳು

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…