ಬದುಕು ಒಂದು ರುದ್ರವೀಣೆ

ಬದುಕು ಒಂದು ರುದ್ರವೀಣೆ
ನಡೆಸುವವನು ನುಡಿಸು ನೀನು
ಬೆರಸಿ ನಿನ್ನ ತನು ಮನವನು||
ಕಲಿಸಿ ಎಲ್ಲಾನಡೆಸುತಿರಲವನು
ಭಯವದೇಕೆ ಬದುಕುವುದಕೆ?||

ನಾಳೆಯ ಚಿಂತೆಯ ಬಿಟ್ಟುನೀನು
ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ|
ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇಕೊಡುವನು|
ನಾಳೆಗಾಗಿ ಕೊರಗಿ ನೀನು ಕೆಡಲುಬೇಡ
ಇಂದಿನ ಸುಂದರ ಅಮೃತಘಳಿಗೆಯನು||

ಆಗಿಹೋದ ಮಿಂಚಿಮಾಸಿದ
ಕಹಿಯನೆನೆದು ಕೊರಗಲು ಫಲವದಿಲ್ಲ|
ಹಳೆಯದನುಭವದಿ ಹೊಸಾ ಚಿಗುರಬೆಳಸಿ
ತಳಿರುಕಾಂತಿಯ ತುಂಬು ನೀನು|
ಫಲಾಫಲವ ಬಯಸದಲೇ
ಪಾಪಕರ್ಮವೆಸಗದೆ ಬಾಳಸಾಗಿಸು ನೀನು
ತಂದ ಕರ್ಮತೀರಿಸುತಲಿ
ಮುಂದೆ ಮುಂದೆ ಸಾಗು ನೀನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವಲಗಾರ ಕಂಭ
Next post ಭಕ್ತಿ ತರಂಗಗಳು

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…