ಭಕ್ತಿ ತರಂಗಗಳು

ದಿನೆ ದಿನೆ ಬಾಳನ್ನು ಹಸನಗೊಳಿಸು
ಭಕ್ತಿಯೆಂಬ ಮಕರಂದದಲಿ ಮುಳುಗು
ತನುವಿನ ದಿಕ್ಕು ದಿಕ್ಕಿನಲ್ಲಿ ದೇವ ಅನುಭವಿಸು
ಮನದ ಮೂಲೆ ಮೂಲೆಯಲ್ಲಿ ಆತ್ಮ ಬೆಳಗು.

ಮಾನವ ತನ್ನ ತಾನು ನೆಟ್ಟಗೆ ನಿಲ್ಲಲಾರನೆ
ಹಾಗೆಂದರೆ ಅವನೆಂಥ ಕ್ಷುಲಕ ವಸ್ತು
ಕವಿ ಸ್ಯಾಮುವೆಲ್ ಡ್ಯಾನಿಯಲ್ ಕೇಳುತ್ತಾನೆ
ದೇವರೆನ್ನುತ್ತಾನೆ ನಿ ಯೋಚಿಸಿದಂತೆ ಅಸ್ತು

ಭಕ್ತ ಭಕ್ತರ ಹೃದಯ ಬೆಳಗಿದರು ಅವರು
ಅವರೆ ನಮ್ಮ ರಾಮಕೃಷ್ಣ ಪರಮಹಂಸರು
ದೇವರ ಬಿಟ್ಟು ಉಳಿದೆಲ್ಲವೂ ಅಶಾಶ್ವತವು
ಎಂದರು ನಮ್ಮ ಗುರು ದಾರ್ಶನಿಕರು

ಯಾವ ಪುಣ್ಯದ ಫಲವೊ ನಾವೀಗ ಮನುಜರು
ಇದು ಎಷ್ಟು ಹೊತ್ತಿನ ಕಣ್ಣು ಮುಚ್ಚಾಲೆ ಆಟವೊ
ಬೆಳಕಿನಲಿ ಕಳೆದುದೆಲ್ಲವೂ ನೀನು ಗಳಿಸಿಕೊ
ಕತ್ತಲು ನಿನಗೆ ಹೊಂಚು ಹಾಕುತ್ತಿದೆ ತಿಳಿದುಕೊ

ಮಾತಿನಲ್ಲಿ ನಡೆಯಲಿ ಭಕ್ತಿ ರಸ ಚಿಮ್ಮಿಸು
ಎಷ್ಟು ವೇಳೆಯವರೆಗೆ ದೇವರನ್ನು ವಂಚಿಸವೆಯಾ
ಜಗತ್ತನು ಬೇಕಾದರೆ ಮೋಸ ಗೊಳಿಸಬಹುದು
ಮಾಣಿಕ್ಯ ವಿಠಲನಿಗೆ ವಂಚಿಸಲಾರೆಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು ಒಂದು ರುದ್ರವೀಣೆ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೪ನೆಯ ಖಂಡ – ದೈವೀಭಾವನೆ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…