Home / ಕವನ / ತತ್ವಪದ / ಭಕ್ತಿ ತರಂಗಗಳು

ಭಕ್ತಿ ತರಂಗಗಳು

ದಿನೆ ದಿನೆ ಬಾಳನ್ನು ಹಸನಗೊಳಿಸು
ಭಕ್ತಿಯೆಂಬ ಮಕರಂದದಲಿ ಮುಳುಗು
ತನುವಿನ ದಿಕ್ಕು ದಿಕ್ಕಿನಲ್ಲಿ ದೇವ ಅನುಭವಿಸು
ಮನದ ಮೂಲೆ ಮೂಲೆಯಲ್ಲಿ ಆತ್ಮ ಬೆಳಗು.

ಮಾನವ ತನ್ನ ತಾನು ನೆಟ್ಟಗೆ ನಿಲ್ಲಲಾರನೆ
ಹಾಗೆಂದರೆ ಅವನೆಂಥ ಕ್ಷುಲಕ ವಸ್ತು
ಕವಿ ಸ್ಯಾಮುವೆಲ್ ಡ್ಯಾನಿಯಲ್ ಕೇಳುತ್ತಾನೆ
ದೇವರೆನ್ನುತ್ತಾನೆ ನಿ ಯೋಚಿಸಿದಂತೆ ಅಸ್ತು

ಭಕ್ತ ಭಕ್ತರ ಹೃದಯ ಬೆಳಗಿದರು ಅವರು
ಅವರೆ ನಮ್ಮ ರಾಮಕೃಷ್ಣ ಪರಮಹಂಸರು
ದೇವರ ಬಿಟ್ಟು ಉಳಿದೆಲ್ಲವೂ ಅಶಾಶ್ವತವು
ಎಂದರು ನಮ್ಮ ಗುರು ದಾರ್ಶನಿಕರು

ಯಾವ ಪುಣ್ಯದ ಫಲವೊ ನಾವೀಗ ಮನುಜರು
ಇದು ಎಷ್ಟು ಹೊತ್ತಿನ ಕಣ್ಣು ಮುಚ್ಚಾಲೆ ಆಟವೊ
ಬೆಳಕಿನಲಿ ಕಳೆದುದೆಲ್ಲವೂ ನೀನು ಗಳಿಸಿಕೊ
ಕತ್ತಲು ನಿನಗೆ ಹೊಂಚು ಹಾಕುತ್ತಿದೆ ತಿಳಿದುಕೊ

ಮಾತಿನಲ್ಲಿ ನಡೆಯಲಿ ಭಕ್ತಿ ರಸ ಚಿಮ್ಮಿಸು
ಎಷ್ಟು ವೇಳೆಯವರೆಗೆ ದೇವರನ್ನು ವಂಚಿಸವೆಯಾ
ಜಗತ್ತನು ಬೇಕಾದರೆ ಮೋಸ ಗೊಳಿಸಬಹುದು
ಮಾಣಿಕ್ಯ ವಿಠಲನಿಗೆ ವಂಚಿಸಲಾರೆಯ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...