Home / ಕವನ / ತತ್ವಪದ / ಭಕ್ತಿ ತರಂಗಗಳು

ಭಕ್ತಿ ತರಂಗಗಳು

ದಿನೆ ದಿನೆ ಬಾಳನ್ನು ಹಸನಗೊಳಿಸು
ಭಕ್ತಿಯೆಂಬ ಮಕರಂದದಲಿ ಮುಳುಗು
ತನುವಿನ ದಿಕ್ಕು ದಿಕ್ಕಿನಲ್ಲಿ ದೇವ ಅನುಭವಿಸು
ಮನದ ಮೂಲೆ ಮೂಲೆಯಲ್ಲಿ ಆತ್ಮ ಬೆಳಗು.

ಮಾನವ ತನ್ನ ತಾನು ನೆಟ್ಟಗೆ ನಿಲ್ಲಲಾರನೆ
ಹಾಗೆಂದರೆ ಅವನೆಂಥ ಕ್ಷುಲಕ ವಸ್ತು
ಕವಿ ಸ್ಯಾಮುವೆಲ್ ಡ್ಯಾನಿಯಲ್ ಕೇಳುತ್ತಾನೆ
ದೇವರೆನ್ನುತ್ತಾನೆ ನಿ ಯೋಚಿಸಿದಂತೆ ಅಸ್ತು

ಭಕ್ತ ಭಕ್ತರ ಹೃದಯ ಬೆಳಗಿದರು ಅವರು
ಅವರೆ ನಮ್ಮ ರಾಮಕೃಷ್ಣ ಪರಮಹಂಸರು
ದೇವರ ಬಿಟ್ಟು ಉಳಿದೆಲ್ಲವೂ ಅಶಾಶ್ವತವು
ಎಂದರು ನಮ್ಮ ಗುರು ದಾರ್ಶನಿಕರು

ಯಾವ ಪುಣ್ಯದ ಫಲವೊ ನಾವೀಗ ಮನುಜರು
ಇದು ಎಷ್ಟು ಹೊತ್ತಿನ ಕಣ್ಣು ಮುಚ್ಚಾಲೆ ಆಟವೊ
ಬೆಳಕಿನಲಿ ಕಳೆದುದೆಲ್ಲವೂ ನೀನು ಗಳಿಸಿಕೊ
ಕತ್ತಲು ನಿನಗೆ ಹೊಂಚು ಹಾಕುತ್ತಿದೆ ತಿಳಿದುಕೊ

ಮಾತಿನಲ್ಲಿ ನಡೆಯಲಿ ಭಕ್ತಿ ರಸ ಚಿಮ್ಮಿಸು
ಎಷ್ಟು ವೇಳೆಯವರೆಗೆ ದೇವರನ್ನು ವಂಚಿಸವೆಯಾ
ಜಗತ್ತನು ಬೇಕಾದರೆ ಮೋಸ ಗೊಳಿಸಬಹುದು
ಮಾಣಿಕ್ಯ ವಿಠಲನಿಗೆ ವಂಚಿಸಲಾರೆಯ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...