Home / ಕವನ / ತತ್ವಪದ / ಭಕ್ತಿ ತರಂಗಗಳು

ಭಕ್ತಿ ತರಂಗಗಳು

ದಿನೆ ದಿನೆ ಬಾಳನ್ನು ಹಸನಗೊಳಿಸು
ಭಕ್ತಿಯೆಂಬ ಮಕರಂದದಲಿ ಮುಳುಗು
ತನುವಿನ ದಿಕ್ಕು ದಿಕ್ಕಿನಲ್ಲಿ ದೇವ ಅನುಭವಿಸು
ಮನದ ಮೂಲೆ ಮೂಲೆಯಲ್ಲಿ ಆತ್ಮ ಬೆಳಗು.

ಮಾನವ ತನ್ನ ತಾನು ನೆಟ್ಟಗೆ ನಿಲ್ಲಲಾರನೆ
ಹಾಗೆಂದರೆ ಅವನೆಂಥ ಕ್ಷುಲಕ ವಸ್ತು
ಕವಿ ಸ್ಯಾಮುವೆಲ್ ಡ್ಯಾನಿಯಲ್ ಕೇಳುತ್ತಾನೆ
ದೇವರೆನ್ನುತ್ತಾನೆ ನಿ ಯೋಚಿಸಿದಂತೆ ಅಸ್ತು

ಭಕ್ತ ಭಕ್ತರ ಹೃದಯ ಬೆಳಗಿದರು ಅವರು
ಅವರೆ ನಮ್ಮ ರಾಮಕೃಷ್ಣ ಪರಮಹಂಸರು
ದೇವರ ಬಿಟ್ಟು ಉಳಿದೆಲ್ಲವೂ ಅಶಾಶ್ವತವು
ಎಂದರು ನಮ್ಮ ಗುರು ದಾರ್ಶನಿಕರು

ಯಾವ ಪುಣ್ಯದ ಫಲವೊ ನಾವೀಗ ಮನುಜರು
ಇದು ಎಷ್ಟು ಹೊತ್ತಿನ ಕಣ್ಣು ಮುಚ್ಚಾಲೆ ಆಟವೊ
ಬೆಳಕಿನಲಿ ಕಳೆದುದೆಲ್ಲವೂ ನೀನು ಗಳಿಸಿಕೊ
ಕತ್ತಲು ನಿನಗೆ ಹೊಂಚು ಹಾಕುತ್ತಿದೆ ತಿಳಿದುಕೊ

ಮಾತಿನಲ್ಲಿ ನಡೆಯಲಿ ಭಕ್ತಿ ರಸ ಚಿಮ್ಮಿಸು
ಎಷ್ಟು ವೇಳೆಯವರೆಗೆ ದೇವರನ್ನು ವಂಚಿಸವೆಯಾ
ಜಗತ್ತನು ಬೇಕಾದರೆ ಮೋಸ ಗೊಳಿಸಬಹುದು
ಮಾಣಿಕ್ಯ ವಿಠಲನಿಗೆ ವಂಚಿಸಲಾರೆಯ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...