ಪರಿಚಯ

ನನ್ನ ಪರಿಚಯ ಮಾಡಿಕೊಡುವೆ,
ಸಹನೆ ಇದ್ದರೆ ಕೇಳಿ.
ಕಾಲೇಜಿನಲ್ಲಿ ಕಲಿಯುತ್ತಿರುವ
ಬಡ ವಿದ್ಯಾರ್ಥಿ ನಾನು.
ಎಲೆಮರೆಯ ಕಾಯಿಯಂತೆ
ಬದುಕ ಬಯಸುವೆ ನಾನು.

ಕಾಲೇಜಲೆಲ್ಲೆಲ್ಲೂ ಎದ್ದುಕಾಣುವ,
ಚರ್ಚೆ, ಸಮಾರಂಭ, ಸಮ್ಮೇಳನಗಳಲ್ಲಿ
ಭಾಷಣ ಬಿಗಿಯುವ ವಾಗ್ಮಿ ನಾನಲ್ಲ.
ಚುನಾವಣೆಗಳಲ್ಲಿ ಗೆಲ್ಲುವ,
ನಾಟಕ, ಗಾಯನ, ಎನ್ಸೀಸಿ, ಸ್ಪೋರ್‍ಟ್ಸ್
ಎಲ್ಲೆಡೆ ಮಿಂಚುವ ಪ್ರತಿಭಾವಂತ ನಾನಲ್ಲ.

ಮಾತಿನಿಂದೆಲ್ಲರ ಮೋಡಿ ಮಾಡುವ,
ನವೀನ ಉಡುಪುಗಳಿಂದೆಲ್ಲರ ಸೆಳೆದು
ಕಂಡ ಬಣ್ಣದ ಚಿಟ್ಟೆಗಳ ಹಿಂದೆ ಓಡುವ
ನೀರಿನಂತೆ ಹಣವ ಸುರಿದು
ಜೀವನದ ಸುಖ ಜೇನ ಸವಿಯುವ
ಜವಾಬ್ದಾರಿರಹಿತನು ನಾನಲ್ಲ.

ಸದಾ ಕಾಲ ಓದಿ ರ್‍ಯಾಂಕ್‌ಗಳಿಸುವ
ಪುಸ್ತಕದ ಹುಳ ನಾನಲ್ಲದಿದ್ದರೂ
ಜವಾಬ್ದಾರಿಯನರಿತು ಓದುವೆ,
ನನ್ನ ಕೈಲಾದಷ್ಟೂ ಗುರು ಹಿರಿಯರ,
ದೀನ ದರಿದ್ರರ ಅನಾಥ ಅಸಹಾಯಕರ
ಸೇವೆಯಲ್ಲಿ ಕಾಲ ಕಳೆಯುವೆ.

ಪೂಜ್ಯ ತಂದೆ ತಾಯಿಯರ ಆರೈಕೆಯಲ್ಲಿ
ಪ್ರಚಾರ ರಹಿತ ಸರಳ ಜೀವನದಲ್ಲಿ
ಪರೋಪಕಾರ ಮಾಡುವುದರಲ್ಲಿ
ದೇವರ ಕಾಣಲು ಯತ್ನಿಸುವೆ.
ದ್ವೇಷಿಸುವವರನ್ನೂ ಪ್ರೀತಿಸುವೆ
ನಿಜ ಸ್ನೇಹಕೆ ಮಣಿದು ನ್ಯಾಯದಿ ನಡೆವೆ.
*****
೧೨-೦೪-೧೯೭೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಂಹಾಸನ ಮೀರಿದ ಸಂವೇದನೆ ನಾಲ್ವಡಿ ಕೃಷ್ಣರಾಜ ಒಡೆಯರ್
Next post ಬಾಂಧವ್ಯ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…