ಕಾರ್ಗಿಲ್ ವಿಜಯ

ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ
ತೊರೆ, ನದಿಗಳ ಹಿಮದ ಜಾರುಂಡೆಗಳಲಿ

ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ
ನರ್ತನ ಗೈಯ್ಯುತಿದ್ದವು ಸಾವು ನೋವುಗಳು

ತಾಂಡವ ರೂಪದ ವೀರಯೋಧರು
ಭಾರತಾಂಬೆಯ ಹೆಮ್ಮೆ ಕುವರರು

ಚಳಿಗಾಳಿ ಹಸಿವೆನ್ನದೆ
ಜೈಹಿಂದ್ ಎನ್ನುತಲಿ ಎದೆಯೊಡ್ಡಿ ನಡೆದರು

ಅಜೇಯ, ಅಹುಜ, ಸೌರವ, ಕಾಲಿಯಾ
ವಿಕ್ರಮ ಬಾತ್ರಾ, ಕರ್ನಲ ವಿಶ್ವನಾಥ

ವಿನೋದ ಪಾಂಡೆ, ಮೇಜರ ಶರವಣನ್
ವಿವೇಕ ಗುಪ್ತ, ಯಶವೀರಂತರನೇಕ

ವೀರಯೋಧ ಸೇನಾನಿ ಅಮರರಾದರು
ತ್ರಿವರ್ಣ ಧ್ವಜ ಹಾರಿಸುತಲಿ

ಕಾರ್ಗಿಲ್ ಕಣಿವೆ ಕಾರ್ಗತ್ತಲಲಿ
ಕಲಿಗಳಾಗಿ ಕಾದಾಡಿದ ವೀರರು

ಕನ್ನಡಾಂಬೆಯ ಕುಡಿಗಳು ಧೊಂಡಿಬಾ, ವೆಂಕಟ,
ಗುರುಬಸಯ್ಯಾ, ದಾವಲಸಾಬ, ಕಾವೇರಪ್ಪ, ಪೋತರಾಜ,
ಸಿದ್ದನಗೌಡ, ಯಶವಂತ, ಮಡಿವಾಳಪ್ಪ, ಮೋಹಿಲನ್,

ಕಾರ್ಗಿಲ್ ವಿಜಯ ಕಾರ್ಯಾಚರಣೆಯ
ಚಿರತೆಗಳಾಗಿ ಸಿಂಹ ಗರ್ಜನೆಗೈದರು

ಕಾರ್ಗಿಲ್, ಕಕ್ಸರ್‍, ಡ್ರಾಸ, ಮುಸ್ಕೋಹಾ
ಬಟಾಲಕ, ಟೋಲೋರಿಂಗ್, ಟೈಗರ ಶಿಖರಗಳಪ್ಪಿದರು

ಶ್ವೇತ ವಸ್ತ್ರಾಧಾರಿ, ಪ್ರಶಾಂತ…
ಶಿಖರಗಳಲ್ಲೆಡೆ ಕಾಲಿಟ್ಟಡಗಿದ ಕಪಿಗಳ
ರಕ್ಕಸ, ರಕ್ತ ಪಿಪಾಶೆಯ ವೈರಿ

ಮುಜಾಹಿದ್ದಿನ, ಜೆಹಾದ ಬಾಡಿಗೆ ಪಡೆ
ಕಾರುವ ಶೆಲ್ ಗುಂಡಿನ ದಾಳಿಗೆ
ಮೈಯೊಡ್ಡುತ ಎದೆ ಸೀಳಿದರು…

ವೈರಿಪಡೆಯ ರಕ್ತ ಚೆಲ್ಲುತ ವೀರಯೋಧರು
ಮಾತೃಭೂಮಿಯ ಮಡಿಲಲಿ ಮಡಿದರು

ಅಮರರಾದರು ವೀರ ಸಹೋದರರು
ಮಾತೃಭೂಮಿಯ ಋಣ ತೀರಿಸುತಲಿ

ತ್ಯಾಗ ಬಲಿದಾನಗಳಿಗೆ ಸಾಟಿಯಿರದೆ
ಪ್ರತಿ ಭಾರತೀಯನ ಮನದಲಿ ಉಳಿದರು

ದೇಶದ ಹೆಮ್ಮೆಯ ವೀರಚೇತನರು
ಕಾರ್ಗಿಲ್‌ದ ವೀರಮರಣದ
ವೀರಯೋಧರು ಹೆಮ್ಮೆಯ ಕುವರರು.

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ
Next post ವಸತಿ ಗೃಹ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys