Home / ಕವನ / ಕವಿತೆ / ಕಾರ್ಗಿಲ್ ವಿಜಯ

ಕಾರ್ಗಿಲ್ ವಿಜಯ

ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ
ತೊರೆ, ನದಿಗಳ ಹಿಮದ ಜಾರುಂಡೆಗಳಲಿ

ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ
ನರ್ತನ ಗೈಯ್ಯುತಿದ್ದವು ಸಾವು ನೋವುಗಳು

ತಾಂಡವ ರೂಪದ ವೀರಯೋಧರು
ಭಾರತಾಂಬೆಯ ಹೆಮ್ಮೆ ಕುವರರು

ಚಳಿಗಾಳಿ ಹಸಿವೆನ್ನದೆ
ಜೈಹಿಂದ್ ಎನ್ನುತಲಿ ಎದೆಯೊಡ್ಡಿ ನಡೆದರು

ಅಜೇಯ, ಅಹುಜ, ಸೌರವ, ಕಾಲಿಯಾ
ವಿಕ್ರಮ ಬಾತ್ರಾ, ಕರ್ನಲ ವಿಶ್ವನಾಥ

ವಿನೋದ ಪಾಂಡೆ, ಮೇಜರ ಶರವಣನ್
ವಿವೇಕ ಗುಪ್ತ, ಯಶವೀರಂತರನೇಕ

ವೀರಯೋಧ ಸೇನಾನಿ ಅಮರರಾದರು
ತ್ರಿವರ್ಣ ಧ್ವಜ ಹಾರಿಸುತಲಿ

ಕಾರ್ಗಿಲ್ ಕಣಿವೆ ಕಾರ್ಗತ್ತಲಲಿ
ಕಲಿಗಳಾಗಿ ಕಾದಾಡಿದ ವೀರರು

ಕನ್ನಡಾಂಬೆಯ ಕುಡಿಗಳು ಧೊಂಡಿಬಾ, ವೆಂಕಟ,
ಗುರುಬಸಯ್ಯಾ, ದಾವಲಸಾಬ, ಕಾವೇರಪ್ಪ, ಪೋತರಾಜ,
ಸಿದ್ದನಗೌಡ, ಯಶವಂತ, ಮಡಿವಾಳಪ್ಪ, ಮೋಹಿಲನ್,

ಕಾರ್ಗಿಲ್ ವಿಜಯ ಕಾರ್ಯಾಚರಣೆಯ
ಚಿರತೆಗಳಾಗಿ ಸಿಂಹ ಗರ್ಜನೆಗೈದರು

ಕಾರ್ಗಿಲ್, ಕಕ್ಸರ್‍, ಡ್ರಾಸ, ಮುಸ್ಕೋಹಾ
ಬಟಾಲಕ, ಟೋಲೋರಿಂಗ್, ಟೈಗರ ಶಿಖರಗಳಪ್ಪಿದರು

ಶ್ವೇತ ವಸ್ತ್ರಾಧಾರಿ, ಪ್ರಶಾಂತ…
ಶಿಖರಗಳಲ್ಲೆಡೆ ಕಾಲಿಟ್ಟಡಗಿದ ಕಪಿಗಳ
ರಕ್ಕಸ, ರಕ್ತ ಪಿಪಾಶೆಯ ವೈರಿ

ಮುಜಾಹಿದ್ದಿನ, ಜೆಹಾದ ಬಾಡಿಗೆ ಪಡೆ
ಕಾರುವ ಶೆಲ್ ಗುಂಡಿನ ದಾಳಿಗೆ
ಮೈಯೊಡ್ಡುತ ಎದೆ ಸೀಳಿದರು…

ವೈರಿಪಡೆಯ ರಕ್ತ ಚೆಲ್ಲುತ ವೀರಯೋಧರು
ಮಾತೃಭೂಮಿಯ ಮಡಿಲಲಿ ಮಡಿದರು

ಅಮರರಾದರು ವೀರ ಸಹೋದರರು
ಮಾತೃಭೂಮಿಯ ಋಣ ತೀರಿಸುತಲಿ

ತ್ಯಾಗ ಬಲಿದಾನಗಳಿಗೆ ಸಾಟಿಯಿರದೆ
ಪ್ರತಿ ಭಾರತೀಯನ ಮನದಲಿ ಉಳಿದರು

ದೇಶದ ಹೆಮ್ಮೆಯ ವೀರಚೇತನರು
ಕಾರ್ಗಿಲ್‌ದ ವೀರಮರಣದ
ವೀರಯೋಧರು ಹೆಮ್ಮೆಯ ಕುವರರು.

***

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...