ವಸತಿ ಗೃಹ

ಬೆಂಗಳೂರಿನ ಗಾಳಿಮಳೆಗೆ ಮೈ ಒಡ್ಡಿ ಮಲಗುವುದು
ಸುಖದಾಯಕವೆನಿಸುತ್ತದೆ;

ಎಲ್ಲೋ ಬೇರ್ಪಟ್ಟ ಕನಸುಗಳು ಮತ್ತೊಮ್ಮೆ ಸಾಕಾರಗೊಂಡಂತೆ.
ಈ ವೇಳೆ ವಸತಿಗೃಹಗಳಲ್ಲಿ ಕಾಲ ನೂಕುತ್ತಿರುವ ಜನ
ಕಳ್ಳ ನೋಟಗಳಲ್ಲಿ ತಲ್ಲೀನರಾಗಿರುತ್ತಾರೆ.

ಕೋಣೆ ಬಾಗಿಲು ಎಡತಾಕುವ,
ಊಟ ಮತ್ತು ಮದ್ಯವನ್ನು ಸರಬರಾಜು ಮಾಡುವ
ಅವನ ವಿಕೃತ ಆಲೋಚನೆಗಳೋ ಅವನನ್ನೇ
ತಿಂದು ಹಾಕುತ್ತಿರುತ್ತವೆ.

ರೈಲ್ವೆ ನಿಲ್ದಾಣದ ಹಾದಿಬದಿಯ ಮರಗಿಡಗಳ ಹೂ‌ಎಲೆಗಳಲಿ
ಮಂಜಿನ ಹನಿಗಳಂತೆ ನಿಲ್ಲಲು ನೋಡುವ ಮರಳಿನ ಕಣಗಳು
ಸಣ್ಣಗಾಳಿಗೆ ಬೆದರಿ, ಕುರುಡನ ಕಣ್ಣುಗಳೆದುರಿಗೆ ಹಾದುಹೋಗುತ್ತವೆ.

ಅಲ್ಲಿ-
ವೃತ್ತಪತ್ರಿಕೆಗಳು, ನಿಯತಕಾಲಿಕಗಳು ಮತ್ತು ಗೆದ್ದಲಿಡಿದ ಪತ್ತೇದಾರಿ
ಕಾದಂಬರಿಗಳು ಅವರು ಬಿಟ್ಟುಹೋದ ಗೂಢ ಸಂಗತಿಗಳನ್ನು
ಹೇಳಲು ತವಕಿಸುತ್ತಿರುತ್ತವೆ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್ಗಿಲ್ ವಿಜಯ
Next post ಅಪ್ಪ ನೀನಾಗಬೇಡ ದಪ್ಪ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys