Home / ಕವನ / ಕವಿತೆ / ಟ್ಯೂಬ್‌ಲೈಟುಗಳು

ಟ್ಯೂಬ್‌ಲೈಟುಗಳು

ನಾವೆಲ್ಲಾ ಟ್ಯೂಬ್‌ಲೈಟುಗಳು
ವಿವಿಧ ಕಂಪೆನಿಗಳ ಲ್ಯಾಬುಗಳಲ್ಲಿ
ಹಲವಾರು ‘ಅಗ್ನಿ ಪರೀಕ್ಷೆ’ಗಳಿಗೆ ಒಳಗಾಗಿ
ಅತ್ಯುತ್ತಮವೆನಿಸಿಕೊಂಡು ಹೊರ ಬಂದವರು
ನಾವು… ಟ್ಯೂಬ್‍ಲೈಟುಗಳು.
ಒಮ್ಮೆ ಖರ್ಚು ಮಾಡಿ ಹಾಕಿಸಿದರಾಯಿತು
ವರ್ಷಗಳು, ದಶಕಗಳು ಕಳೆದರೂ
ಬರ್‍ನ್ ಆಗುವ ಚಿಂತೆಯಿಲ್ಲ.
ಮಾಮೂಲಿ ಬಲ್ಬುಗಳಿಗಿಂತ ಕಡಿಮೆ
ವಿದ್ಯುತ್ ಬಳಸುತ್ತೇವೆ ಮತ್ತು
ಎಷ್ಟೋ ಹೆಚ್ಚು ಬೆಳಕನ್ನು ನೀಡುತ್ತೇವೆ.
ನಾವು… ಟ್ಯೂಬ್‌ಲೈಟುಗಳು.
ಅರಮನೆಯಾಗಲಿ, ಸೆರಮನೆಯಾಗಲಿ
ರಾಜ ಬೀದಿಯಾಗಲಿ, ಕೊಳೆಗೇರಿಯಾಗಲಿ
ಎಲ್ಲೆಡೆ ಸೇವೆಗೆ ನಾವು ಸದಾ ಸಿದ್ಧ.
ಹಾಗೆ ನೋಡ ಹೋದರೆ ಕಾರ್ಯ ಸ್ಥಳ
ಆರಿಸಿಕೊಳ್ಳಲು ನಾವು ಸ್ವತಂತ್ರರಲ್ಲ ಬಿಡಿ.
ಕಾಡೇನು, ನಾಡೇನು ಎಲ್ಲೆಡೆ ದುಡಿಯುವವರು
ನಾವು… ಟ್ಯೂಬ್‌ಲೈಟುಗಳು.
ನಾವೆಷ್ಟು ಹೊಗಳಿಕೊಂಡರೂ ನೀವು
ನಮ್ಮನ್ನು ತೆಗಳದೆ ಬಿಡುವುದಿಲ್ಲ.
ಸಂಜೆ ನಾವು ಬೇಗ ಹತ್ತದಿದ್ದರೆ
ಅದು ನಮ್ಮ ತಪ್ಪೇ? ನಾವೆಷ್ಟು
ಒಳ್ಳೆಯ ಗುಣಮಟ್ಟದವರಾದರೇನು?
ನಮ್ಮ ವ್ಯವಸ್ಥೆಯೇ ಹಾಗಿದೆಯಲ್ಲ
“ವೋಲೇಜಿ”ಲ್ಲದೆ ನಮಗೇನು ಬೆಲೆ?
ಎಷ್ಟಾದರೂ ನಾವು…. ಟ್ಯೂಬ್‌ಲೈಟುಗಳು.
*****
೦೮-೦೮-೧೯೮೮

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...