Home / ಕವನ / ಕವಿತೆ / ಅಂಗರಕ್ಷಕ

ಅಂಗರಕ್ಷಕ

ರಾಜಮಹಾರಾಜರ, ಚಕ್ರವರ್ತಿ ಬಾದಶಹರ
ಜೀವ ಕಾಪಾಡಲು, ನೆರಳಂಬಂತೆ
ಹಿಂದಿದ್ದೆ, ಮುಂದಿದ್ದೆ, ಜೊತೆಗಿದ್ದೆ.
ಗೆಳೆಯನಾಗಿ, ಭಂಟನಾಗಿ, ಸಲಹೆಗಾರನಾಗಿ,
ಚರಣದಾಸನಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.
ನನ್ನ ಜೀವ ತೆತ್ತು ಅವನ ಜೀವ ರಕ್ಷಿಸಿದ್ದೆ.
ನಾನಿಲ್ಲ ಅವನಿಲ್ಲ… ಆಗ,
ಅವನಿಲ್ಲ, ನಾನಿದ್ದೇನೆ… ಈಗ.

ಈಗ ನಾನು ಅಂಗರಕ್ಷಕನಲ್ಲ – ಬಾಡಿಗಾರ್ಡ್.
ದೇಶದ ಅಧ್ಯಕ್ಷರ, ಉಪಾಧ್ಯಕ್ಷರ ಮಂತ್ರಿಗಳ
ಹಿಂದೆ ಮಾತ್ರ ಇರುವೆ – ಜೊತೆಗಿಲ್ಲ.
ಕಟ್ಟುಮಸ್ತಾದ ಸಿಪಾಯಿ ನಾನು
ಶಿಸ್ತಾಗಿ ನಿಲ್ಲುವೆ ಸಮವಸ್ತ್ರ ಧರಿಸಿ.
ಕೆಲವೊಮ್ಮೆ ಮಫ್ತಿಯಲ್ಲಿ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ.
ನನ್ನ ಮುಂದಿರುವ ರಾಜಕೀಯ ಪುಢಾರಿ
ಯಾರಿರಲಿ, ಹೇಗಿರಲಿ, ಏನು ಮಾಡುತ್ತಿರಲಿ
ಏನೇ ಮಾತಾಡುತ್ತಿರಲಿ, ಯಾರ ಜತೆಗಿರಲಿ
ಎಲ್ಲಾ ನೋಡುತ್ತಿದ್ದರೂ, ನಾ ಕುರುಡ
ಎಲ್ಲಾ ಕೇಳುತ್ತಿದ್ದರೂ, ನಾ ಕಿವುಡ
ಎಂದೂ ಏನೂ ಮಾತನಾಡದ ಮೂಗ.
ನನ್ನ ಮುಂದೆ ನಿಂತು ಸಹಸ್ರ ಸಹಸ್ರ
ಜನಸ್ತೋಮವನ್ನು ಮೋಡಿ ಮಾಡಿ
ನಗೆಗಡಲಲ್ಲಿ ಮುಳುಗಿಸಿ,
ಕರುಣೆಯಿಂದ ಕಂಬನಿ ಬರಿಸಿ,
ಬೇರೆಯವರ ಮೇಲೆ ಎತ್ತಿಕಟ್ಟಿ
ತನ್ನೆಡೆಗೆ ಸೆಳೆದುಕೊಳ್ಳುವ ಆಟ
ಎಲ್ಲ ನಾಟಕ ನೋಡುವುದೆನಗೆ ಕಾಟ!

ನಾನು ನಗುವುದಿಲ್ಲ, ಅಳುವುದಿಲ್ಲ.
ನಿರ್ಲಿಪ್ತರಲ್ಲಿ ನಿರ್ಲಿಪ್ತ. ನನಗೆ
ಎಲ್ಲ ಭಾಷೆ ಗೊತ್ತು, ಭಾವ ಗೊತ್ತು
ಎಲ್ಲರ ಕಥೆಗಳೂ ಚೆನ್ನಾಗಿ ಗೊತ್ತು
ಯಾರನ್ನು ಬೇಕಾದರೂ ಬ್ಲ್ಯಾಕ್‌ಮೈಲ್
ಮಾಡಬಲ್ಲೆ, ಮುಳುಗಿಸಲೂ ಬಲ್ಲೆ.
ಆದರೆ ನಾನು ಮಾತನಾಡುವಂತಿಲ್ಲ
ನಗುವಂತಿಲ್ಲ, ಅಳುವಂತಿಲ್ಲ!
ನಾನು ಕೇವಲ ನೆರಳು ಗೊಂಬೆ.
ನೀವೆಲ್ಲಾ ನನ್ನ ನೋಡುವಿರಿ ಪ್ರತಿ ದಿನ
ಟಿ.ವಿ.ಯಲ್ಲಿ, ಬಹಿರಂಗ ಸಭೆಯಲ್ಲಿ.
ನನ್ನ ಮುಖ ಚಿರಪರಿಚಿತ
ಆದರೆ ನಾನಾರಿಗೂ ಗೊತ್ತಿಲ್ಲ
ನನಗೊಂದು ಹೆಸರಿಲ್ಲ, ಬಾಳಿಲ್ಲ
ನಾನು ಒಬ್ಬ ಸರ್ಕಾರಿ ನೌಕರ
ಆದರೂ ನಾನು ಜೀತದ ಜೀವ.
ದೊಡ್ಡವರ ಹಿಂದಿದ್ದರೂ ನನಗಾವ
ಪ್ರಭಾವವಿಲ್ಲ. ಈಗಲೂ ನಾನು
ಜೀವಕ್ಕೆ ಜೀವ ಕೊಡುತ್ತೇನೆ
ನಾನು ಎಂದೆಂದಿಗೂ ಅಂಗರಕ್ಷಕ.
*****
೧೨-೦೬-೧೯೮೭

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ