Home / ಕವನ / ಕವಿತೆ / ಅಂಗರಕ್ಷಕ

ಅಂಗರಕ್ಷಕ

ರಾಜಮಹಾರಾಜರ, ಚಕ್ರವರ್ತಿ ಬಾದಶಹರ
ಜೀವ ಕಾಪಾಡಲು, ನೆರಳಂಬಂತೆ
ಹಿಂದಿದ್ದೆ, ಮುಂದಿದ್ದೆ, ಜೊತೆಗಿದ್ದೆ.
ಗೆಳೆಯನಾಗಿ, ಭಂಟನಾಗಿ, ಸಲಹೆಗಾರನಾಗಿ,
ಚರಣದಾಸನಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.
ನನ್ನ ಜೀವ ತೆತ್ತು ಅವನ ಜೀವ ರಕ್ಷಿಸಿದ್ದೆ.
ನಾನಿಲ್ಲ ಅವನಿಲ್ಲ… ಆಗ,
ಅವನಿಲ್ಲ, ನಾನಿದ್ದೇನೆ… ಈಗ.

ಈಗ ನಾನು ಅಂಗರಕ್ಷಕನಲ್ಲ – ಬಾಡಿಗಾರ್ಡ್.
ದೇಶದ ಅಧ್ಯಕ್ಷರ, ಉಪಾಧ್ಯಕ್ಷರ ಮಂತ್ರಿಗಳ
ಹಿಂದೆ ಮಾತ್ರ ಇರುವೆ – ಜೊತೆಗಿಲ್ಲ.
ಕಟ್ಟುಮಸ್ತಾದ ಸಿಪಾಯಿ ನಾನು
ಶಿಸ್ತಾಗಿ ನಿಲ್ಲುವೆ ಸಮವಸ್ತ್ರ ಧರಿಸಿ.
ಕೆಲವೊಮ್ಮೆ ಮಫ್ತಿಯಲ್ಲಿ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ.
ನನ್ನ ಮುಂದಿರುವ ರಾಜಕೀಯ ಪುಢಾರಿ
ಯಾರಿರಲಿ, ಹೇಗಿರಲಿ, ಏನು ಮಾಡುತ್ತಿರಲಿ
ಏನೇ ಮಾತಾಡುತ್ತಿರಲಿ, ಯಾರ ಜತೆಗಿರಲಿ
ಎಲ್ಲಾ ನೋಡುತ್ತಿದ್ದರೂ, ನಾ ಕುರುಡ
ಎಲ್ಲಾ ಕೇಳುತ್ತಿದ್ದರೂ, ನಾ ಕಿವುಡ
ಎಂದೂ ಏನೂ ಮಾತನಾಡದ ಮೂಗ.
ನನ್ನ ಮುಂದೆ ನಿಂತು ಸಹಸ್ರ ಸಹಸ್ರ
ಜನಸ್ತೋಮವನ್ನು ಮೋಡಿ ಮಾಡಿ
ನಗೆಗಡಲಲ್ಲಿ ಮುಳುಗಿಸಿ,
ಕರುಣೆಯಿಂದ ಕಂಬನಿ ಬರಿಸಿ,
ಬೇರೆಯವರ ಮೇಲೆ ಎತ್ತಿಕಟ್ಟಿ
ತನ್ನೆಡೆಗೆ ಸೆಳೆದುಕೊಳ್ಳುವ ಆಟ
ಎಲ್ಲ ನಾಟಕ ನೋಡುವುದೆನಗೆ ಕಾಟ!

ನಾನು ನಗುವುದಿಲ್ಲ, ಅಳುವುದಿಲ್ಲ.
ನಿರ್ಲಿಪ್ತರಲ್ಲಿ ನಿರ್ಲಿಪ್ತ. ನನಗೆ
ಎಲ್ಲ ಭಾಷೆ ಗೊತ್ತು, ಭಾವ ಗೊತ್ತು
ಎಲ್ಲರ ಕಥೆಗಳೂ ಚೆನ್ನಾಗಿ ಗೊತ್ತು
ಯಾರನ್ನು ಬೇಕಾದರೂ ಬ್ಲ್ಯಾಕ್‌ಮೈಲ್
ಮಾಡಬಲ್ಲೆ, ಮುಳುಗಿಸಲೂ ಬಲ್ಲೆ.
ಆದರೆ ನಾನು ಮಾತನಾಡುವಂತಿಲ್ಲ
ನಗುವಂತಿಲ್ಲ, ಅಳುವಂತಿಲ್ಲ!
ನಾನು ಕೇವಲ ನೆರಳು ಗೊಂಬೆ.
ನೀವೆಲ್ಲಾ ನನ್ನ ನೋಡುವಿರಿ ಪ್ರತಿ ದಿನ
ಟಿ.ವಿ.ಯಲ್ಲಿ, ಬಹಿರಂಗ ಸಭೆಯಲ್ಲಿ.
ನನ್ನ ಮುಖ ಚಿರಪರಿಚಿತ
ಆದರೆ ನಾನಾರಿಗೂ ಗೊತ್ತಿಲ್ಲ
ನನಗೊಂದು ಹೆಸರಿಲ್ಲ, ಬಾಳಿಲ್ಲ
ನಾನು ಒಬ್ಬ ಸರ್ಕಾರಿ ನೌಕರ
ಆದರೂ ನಾನು ಜೀತದ ಜೀವ.
ದೊಡ್ಡವರ ಹಿಂದಿದ್ದರೂ ನನಗಾವ
ಪ್ರಭಾವವಿಲ್ಲ. ಈಗಲೂ ನಾನು
ಜೀವಕ್ಕೆ ಜೀವ ಕೊಡುತ್ತೇನೆ
ನಾನು ಎಂದೆಂದಿಗೂ ಅಂಗರಕ್ಷಕ.
*****
೧೨-೦೬-೧೯೮೭

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...