ಹೊನ್ನ ಸಿರಿ

ಕಾಯಕ ಯೋಗಿ ಕಾರ್ಮಿಕ
ನಿನ್ನಯ ಬದುಕು ಸಾರ್ಥಕ ||ಪ||

ಭೂಮಿಯ ಒಡಲಲಿ ಚಿನ್ನದ ಗೂಡು
ಹುದುಗಿಹ ಚಿನ್ನದ ನಿಕ್ಷೇಪ ನೋಡು
ಹಟ್ಟಿಯ ಚಿನ್ನದ ಗಣಿಯಲ್ಲಿಹ ಬೀಡು
ಭಾರತ ದೇಶದ ಮುಕುಟವೇ ಈ ನಾಡು.

ತಲೆಯ ಮೇಲೆ ಮಂದಿ ದೀಪವ ಇತ್ತು
ಭೂಗರ್ಭದಿ ಇಳಿದೆ ಧೈರ್ಯವ ಹೊತ್ತು
ನಿನ್ನವರಿಗಾಗಿಯೇ ಪ್ರಾಣವನೇ ಪಣವಾಗಿ ಇತ್ತು
ಕೊರೆಯುತ ಸಾಗಿದೆ ಭೂಮಿಯ ಮೂರೊತ್ತು.

ಬೆವರನು ಸುರಿಸುತ ನೆತ್ತರು ಹರಿಸುತ
ಕಲ್ಲನು ಅಗೆಯುತ ಕುಟ್ಟತ ಬೀಸುತ
ಕಾಯಿಸಿ ಕರಗಿಸಿ ಹಾಕಿದೆ ಚಿನ್ನದ ಗಟ್ಟಿ
ಹಗಲಿರುಳು ದುಡಿಯುತ ನೀನಾದೆ ಜೆಟ್ಟಿ.

ಚಿನ್ನದ ಗಣಿಯಲ್ಲಿ ನಿತ್ಯದ ಕಾಯಕ
ಸಾಗಿದೆ ಜಗಕೆ ಚಿನ್ನ ನೀಡುವ ಕಾಯಕ
ಚಿನ್ನದ ಮೇಲೆ ಮೋಹವು ನಿನಗಿಲ್ಲ
ಚಿನ್ನದಂತಹ ಕಾರ್ಮಿಕ ನೀನಾಗಿಹೆಯಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಡಗು
Next post ಹೃದಯ ಚೆಂಡು

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys