ಹಡಗು

ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ
ದೂರದಿಂದ ನೋಡಿ
ಅದರ ಸೌಂದರ್ಯ,
ತಿಳಿಯದೆ ಅಂತರ್ಯ,
ಸ್ಥಳ ಗಿಟ್ಟಿಸಲು ಹೋದವರು,
ಹೋಗಲು ಹಂಬಲಿಸಿದವರು
ಇದ್ದಾರು ಅಸಂಖ್ಯ ಜನರು.
ಒಳ ಹೊಕ್ಕು ಕುಳಿತವರಿಗೇ ಗೊತ್ತು
ಅಲ್ಲಿನ ವಿಶಿಷ್ಟ ಜಗತ್ತು
ನಿಂತ ನೆಲವೇ ಭದ್ರವಿಲ್ಲ
ಸದಾ ಕುಲುಕು ನಡಿಗೆ
ಹೊರಟಾಗಿದೆ. ಹಿಂತಿರುಗುವಂತಿಲ್ಲ,
ಮಧ್ಯೆ ಇಳಿಯುವ ಮಾತೇ ಇಲ್ಲ!
ತೇಲುತ್ತಿರುವ ಜಲವೇ ಉಕ್ಕಿ
ತನ್ನ ಒಡಲಲ್ಲಿ ಸೇರಿಸಿ
ಹೆಸರಿಲ್ಲದಂತೆ ಮಾಡೀತು.
ಅನಿರೀಕ್ಷಿತ ಬಂದ ತಿಮಿಂಗಿಲ
ಬುಡಮೇಲು ಮಾಡೀತು
ಕಡಲಗಳ್ಳರ ಕಾಟ ಒಂದೆಡೆ,
ಬಿರುಗಾಳಿಯ ಭೀತಿ ಮತ್ತೊಂದೆಡೆ.
ಶೇಖರಿಸಿರುವ ಊಟ, ನೀರು
ಮುಗಿಯುವ ಮುನ್ನ ಒಂದೂರು
ಸೇರುವ ನೆಲೆಸುವ ಆಸೆ ನೂರು
ಸೇರಿದರೆ ಸೇರೇವು,
ಕರೆ ಬಂದರೆ ಮತ್ತೆ ಹೊರಟೆವು
ದೀರ್ಘ ಪಯಣ ತಂದ ನಂಟು
ತಿಳಿಯದೆ ಹಾಕಿಕೊಂಡ ಗಂಟು
ತಂದೀತು ಅನಿಶ್ಚಿತತೆಯಲ್ಲೆ
ನಿಶ್ಚಿತ ಬಾಳಿನ ಲಂಗರು.
ನಮ್ಮಹಡಗು ಬ್ಯಾಂಕು
ಬಾಳು ದೀರ್ಘ ಪಯಣ
ಕೊನೆ ಮೊದಲಿಲ್ಲದ ವರ್ಗಗಳು
ಆಂತರಿಕ ಬಾಹ್ಯ ಒತ್ತಡಗಳು
ರಾಜಕೀಯ ವಶೀಲಿಗಳು
ದಿನ ನಿತ್ಯದ ನೂರೆಂಟು ಸಮಸ್ಯೆಗಳು
ಹುಟ್ಟೂರು ಬಿಟ್ಟು, ಕಳೆದು ದಶಕಗಳು
ಊರಿಂದೂರಿಗೆ ವಲಸೆ ಹೋದಲ್ಲಿ –
ಎಲ್ಲಿಯೋ ಮದುವೆಯಾಗಿ
ಬೇರೆಲ್ಲಿಯೋ ಮನೆ ಕಟ್ಟಿ
ದೇವರ ದಯೆಯಿಂದ,
ದೊಡ್ಡವರ ಆಶೀರ್ವಾದದಿಂದ
ಮರ್ಯಾದೆಯಾಗಿ ರಿಟೈರಾದರೆ
ಏಳೇಳು ಜನ್ಮಗಳ ಪುಣ್ಯ.
ನಿಜಕ್ಕೂ..ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ.
*****
೧೧-೦೬-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರ ಗುಟ್ಟು
Next post ಹೊನ್ನ ಸಿರಿ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…