ಹಡಗು

ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ
ದೂರದಿಂದ ನೋಡಿ
ಅದರ ಸೌಂದರ್ಯ,
ತಿಳಿಯದೆ ಅಂತರ್ಯ,
ಸ್ಥಳ ಗಿಟ್ಟಿಸಲು ಹೋದವರು,
ಹೋಗಲು ಹಂಬಲಿಸಿದವರು
ಇದ್ದಾರು ಅಸಂಖ್ಯ ಜನರು.
ಒಳ ಹೊಕ್ಕು ಕುಳಿತವರಿಗೇ ಗೊತ್ತು
ಅಲ್ಲಿನ ವಿಶಿಷ್ಟ ಜಗತ್ತು
ನಿಂತ ನೆಲವೇ ಭದ್ರವಿಲ್ಲ
ಸದಾ ಕುಲುಕು ನಡಿಗೆ
ಹೊರಟಾಗಿದೆ. ಹಿಂತಿರುಗುವಂತಿಲ್ಲ,
ಮಧ್ಯೆ ಇಳಿಯುವ ಮಾತೇ ಇಲ್ಲ!
ತೇಲುತ್ತಿರುವ ಜಲವೇ ಉಕ್ಕಿ
ತನ್ನ ಒಡಲಲ್ಲಿ ಸೇರಿಸಿ
ಹೆಸರಿಲ್ಲದಂತೆ ಮಾಡೀತು.
ಅನಿರೀಕ್ಷಿತ ಬಂದ ತಿಮಿಂಗಿಲ
ಬುಡಮೇಲು ಮಾಡೀತು
ಕಡಲಗಳ್ಳರ ಕಾಟ ಒಂದೆಡೆ,
ಬಿರುಗಾಳಿಯ ಭೀತಿ ಮತ್ತೊಂದೆಡೆ.
ಶೇಖರಿಸಿರುವ ಊಟ, ನೀರು
ಮುಗಿಯುವ ಮುನ್ನ ಒಂದೂರು
ಸೇರುವ ನೆಲೆಸುವ ಆಸೆ ನೂರು
ಸೇರಿದರೆ ಸೇರೇವು,
ಕರೆ ಬಂದರೆ ಮತ್ತೆ ಹೊರಟೆವು
ದೀರ್ಘ ಪಯಣ ತಂದ ನಂಟು
ತಿಳಿಯದೆ ಹಾಕಿಕೊಂಡ ಗಂಟು
ತಂದೀತು ಅನಿಶ್ಚಿತತೆಯಲ್ಲೆ
ನಿಶ್ಚಿತ ಬಾಳಿನ ಲಂಗರು.
ನಮ್ಮಹಡಗು ಬ್ಯಾಂಕು
ಬಾಳು ದೀರ್ಘ ಪಯಣ
ಕೊನೆ ಮೊದಲಿಲ್ಲದ ವರ್ಗಗಳು
ಆಂತರಿಕ ಬಾಹ್ಯ ಒತ್ತಡಗಳು
ರಾಜಕೀಯ ವಶೀಲಿಗಳು
ದಿನ ನಿತ್ಯದ ನೂರೆಂಟು ಸಮಸ್ಯೆಗಳು
ಹುಟ್ಟೂರು ಬಿಟ್ಟು, ಕಳೆದು ದಶಕಗಳು
ಊರಿಂದೂರಿಗೆ ವಲಸೆ ಹೋದಲ್ಲಿ –
ಎಲ್ಲಿಯೋ ಮದುವೆಯಾಗಿ
ಬೇರೆಲ್ಲಿಯೋ ಮನೆ ಕಟ್ಟಿ
ದೇವರ ದಯೆಯಿಂದ,
ದೊಡ್ಡವರ ಆಶೀರ್ವಾದದಿಂದ
ಮರ್ಯಾದೆಯಾಗಿ ರಿಟೈರಾದರೆ
ಏಳೇಳು ಜನ್ಮಗಳ ಪುಣ್ಯ.
ನಿಜಕ್ಕೂ..ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ.
*****
೧೧-೦೬-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರ ಗುಟ್ಟು
Next post ಹೊನ್ನ ಸಿರಿ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys