ಹಡಗು

ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ
ದೂರದಿಂದ ನೋಡಿ
ಅದರ ಸೌಂದರ್ಯ,
ತಿಳಿಯದೆ ಅಂತರ್ಯ,
ಸ್ಥಳ ಗಿಟ್ಟಿಸಲು ಹೋದವರು,
ಹೋಗಲು ಹಂಬಲಿಸಿದವರು
ಇದ್ದಾರು ಅಸಂಖ್ಯ ಜನರು.
ಒಳ ಹೊಕ್ಕು ಕುಳಿತವರಿಗೇ ಗೊತ್ತು
ಅಲ್ಲಿನ ವಿಶಿಷ್ಟ ಜಗತ್ತು
ನಿಂತ ನೆಲವೇ ಭದ್ರವಿಲ್ಲ
ಸದಾ ಕುಲುಕು ನಡಿಗೆ
ಹೊರಟಾಗಿದೆ. ಹಿಂತಿರುಗುವಂತಿಲ್ಲ,
ಮಧ್ಯೆ ಇಳಿಯುವ ಮಾತೇ ಇಲ್ಲ!
ತೇಲುತ್ತಿರುವ ಜಲವೇ ಉಕ್ಕಿ
ತನ್ನ ಒಡಲಲ್ಲಿ ಸೇರಿಸಿ
ಹೆಸರಿಲ್ಲದಂತೆ ಮಾಡೀತು.
ಅನಿರೀಕ್ಷಿತ ಬಂದ ತಿಮಿಂಗಿಲ
ಬುಡಮೇಲು ಮಾಡೀತು
ಕಡಲಗಳ್ಳರ ಕಾಟ ಒಂದೆಡೆ,
ಬಿರುಗಾಳಿಯ ಭೀತಿ ಮತ್ತೊಂದೆಡೆ.
ಶೇಖರಿಸಿರುವ ಊಟ, ನೀರು
ಮುಗಿಯುವ ಮುನ್ನ ಒಂದೂರು
ಸೇರುವ ನೆಲೆಸುವ ಆಸೆ ನೂರು
ಸೇರಿದರೆ ಸೇರೇವು,
ಕರೆ ಬಂದರೆ ಮತ್ತೆ ಹೊರಟೆವು
ದೀರ್ಘ ಪಯಣ ತಂದ ನಂಟು
ತಿಳಿಯದೆ ಹಾಕಿಕೊಂಡ ಗಂಟು
ತಂದೀತು ಅನಿಶ್ಚಿತತೆಯಲ್ಲೆ
ನಿಶ್ಚಿತ ಬಾಳಿನ ಲಂಗರು.
ನಮ್ಮಹಡಗು ಬ್ಯಾಂಕು
ಬಾಳು ದೀರ್ಘ ಪಯಣ
ಕೊನೆ ಮೊದಲಿಲ್ಲದ ವರ್ಗಗಳು
ಆಂತರಿಕ ಬಾಹ್ಯ ಒತ್ತಡಗಳು
ರಾಜಕೀಯ ವಶೀಲಿಗಳು
ದಿನ ನಿತ್ಯದ ನೂರೆಂಟು ಸಮಸ್ಯೆಗಳು
ಹುಟ್ಟೂರು ಬಿಟ್ಟು, ಕಳೆದು ದಶಕಗಳು
ಊರಿಂದೂರಿಗೆ ವಲಸೆ ಹೋದಲ್ಲಿ –
ಎಲ್ಲಿಯೋ ಮದುವೆಯಾಗಿ
ಬೇರೆಲ್ಲಿಯೋ ಮನೆ ಕಟ್ಟಿ
ದೇವರ ದಯೆಯಿಂದ,
ದೊಡ್ಡವರ ಆಶೀರ್ವಾದದಿಂದ
ಮರ್ಯಾದೆಯಾಗಿ ರಿಟೈರಾದರೆ
ಏಳೇಳು ಜನ್ಮಗಳ ಪುಣ್ಯ.
ನಿಜಕ್ಕೂ..ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ.
*****
೧೧-೦೬-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರ ಗುಟ್ಟು
Next post ಹೊನ್ನ ಸಿರಿ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…