ಸಂತರ ಮನ ನೀಡು

ಹರಿಯೇ ನಿನ್ನಲ್ಲಿ ನಾ ಬೇಡುವುದೊಂದೆ
ನನ್ನ ಹೃದಯದಲಿ ಸಂತರ ಮನ ನೀಡು
ಭವದ ಸುಖ ಭೋಗಗಳ ನನ್ನಲ್ಲಿ ತ್ಯಾಗಿಸಿ
ನಿನ್ನ ಧ್ಯಾನದಲ್ಲಿ ನನ್ನ ತೇಲುವಂತೆ ಮಾಡು

ಮೀರಾ ಮಾತೆ ಹರಿಗೆ ತನ್ನಂತೆ ಮಾಡಿ
ಒಲಿಸಿ ಕೊಂಡಳು ತಾನು ನಿತ್ಯ ಧ್ಯಾನಿಸಿ
ಗೋರಾ ಕುಂಬಾರ ಮಾಯೆ ಮರೆತು
ಪಾಂಡುರಂಗ ಸಾಕ್ಷತ ಕರಿಸಿಕೊಂಡ ಭಕ್ತಿಸಿ

ಲೋಕವೆ ದೂರಾಗಿಸಿದರೂ ಜ್ಞಾನ ದೇವನು
ವಿಶಾಲ ಸಾಧನೆಯಲಿ ದೇವ ನೊಲಿಸಿಕೊಂಡ
ಕಿರಿವಯಸಿನಲಿ ಜ್ಞಾನೇಶ್ವರಿ ಗ್ರಂಥ ರಚಿಸಿ
ಲೋಕವೆ ತನ್ನ ದೈವತದಿ ಸೆಳೆದುಕೊಂಡ

ಹರಿಯೇ ಎನ್ನಲ್ಲೂ ನಿನ್ನ ಧ್ಯಾನ ತುಂಬಲಿ
ಎನ್ನ ಮನವಾಗಲಿ ನಿನಗೆ ಮೀಸಲು
ನಿತ್ಯ ನಿತ್ಯವೂ ನಿನ್ನ ನೆನಪು ಕಾಡಲಿ
ಮಾಣಿಕ್ಯ ವಿಠಲನಿಗೆ ನೀದಯೆ ಬೀಸಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ಬಡವನಾದರೇನು
Next post ಸಂಸ್ಕತಿ: ಆಚಾರವನೆ ಕಂಡರು ವಿಚಾರವನೆ ಕಾಣರು

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…