ನೀನೇ ನನ್ನ ಕಣ್ಣು

ನೀನೇ ನನ್ನ ಕಣ್ಣು
ನೀನಿರದೆ ನಾನು ಕುರುಡು
ನಿನ್ನ ಪ್ರೀತಿ ಮಾತು
ಅದು ಇರದೆ ಬದುಕು ಬರಡು
ನಂಬು ನನ್ನ ನಲ್ಲೆ
ಇಲ್ಲವೆ ಕೊಲ್ಲ್ಲು ಇಲ್ಲೆ /ಪ//

ನಿನ್ನ ಮೊದಲ ನೋಟ
ಕಣ್ಗೆ ಅತ್ಯಪೂರ್ವ
ಅದರ ರೆಪ್ಪೆ ಬಡಿತ
ತಕ್ಷಣ ಪ್ರೇಮ ಪರ್ವ
ಇದು ಎಲ್ಲ ನಿನ್ನಿಂದ
ಆ ಕ್ಷಣವೆ ಜಗವು ಅಂದ

ನೀನು ಇಟ್ಟ ಹೆಜ್ಜೆ
ಅಲ್ಲಿ ಪ್ರೇಮ ಸ್ಮಾರಕ
ನೀನು ಹೋದ ದಿಕ್ಕು
ನನಗಿನ್ಯಾವ ದಿಕ್ಕು
ಹೇಳೆ ನನ್ನ ಒಲವೆ
ನೀನಿರದೆ ಯಾವ ಬಲವೆ?

ದಾರಿ ಕಾಯುತಿರುವೆ
ನೀ ಹೋದ ದಿಕ್ಕಿನಲ್ಲಿ
ಕಾಲ ನೂಕುತಿರುವೆ
ನೀ ಬರುವ ದಾರಿಯಲ್ಲಿ
ನಂಬು ನನ್ನ ಚಿನ್ನ
ಮಾಡಿಹೆ ಹೃದಯ ಕನ್ನ

ಕಾಡಬೇಡ ಇನ್ನೂ
ತೋಳು ಸೇರು ಇನ್ನು
ಕೊಟ್ಟು ತುಟಿಯ ಜೇನು
ಹೀರು ಪ್ರೀತಿಯನ್ನು
ಬೇಡ ಇನ್ನು ಅಂತರ
ಇದಾಗಲಿ ನಿರಂತರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರುಣೋದಯ
Next post ಕನ್ನಡ ಚಳವಳಿಯ ದಿಕ್ಕುದಿಸೆ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…