Home / ಕವನ / ಕವಿತೆ / ಕುರ್ಚಿ

ಕುರ್ಚಿ

ಹಗಲಲ್ಲೇ ಮುಗಿಲು ಕಪ್ಪಾಗಿ
ಕತ್ತಲಾವರಿಸಿದ ಹಾಗೆ ಈ ಕುರ್ಚಿ
ಸಿಕ್ಕಿದವರಿಗೆ ಸೀರುಂಡೆಯಾದಾಗ
ಕುರ್ಚಿಯ ಕಣ್ಣಿಗೆ ಹುಣ್ಣುಹತ್ತಿ
ಜನರ ಮೇಲೆ ಝಳಪಿಸುವ
ಕುರುಡು ಕತ್ತಿ.

ಕೆಲವರು-
ಸುಪ್ಪತ್ತಿಗೆಯ ಸುಕುಮಾರಸ್ವಾಮಿಗಳು
ಆಕ್ಷತೆಯೂ ಕಲ್ಲು, ಹೂವೆಂಬುದು ಹಾವು
ಕರುಳಲ್ಲಿ ಮುರಿದ ಮುಳ್ಳುಗಳ ನೋಡದ
ರಾಜ ಸುಖ ಆದೀತು ಹೇಗೆ
ನಿಜದ ಸುಖ?

ಇನ್ನು ಕೆಲವರು-
ತೆಂಗಿನಕಾಯಿ ಧೂಪ ದೀಪ ಧುರೀಣರು
ದಕ್ಕದೆ ಹೋದಾಗ ಹುಳಿದ್ರಾಕ್ಷಿ ನರಿರಾಯರು
ಸರ್ವಸಂಗ ಪರಿತ್ಯಾಗಿಯ ಫೋಜಿನಲ್ಲೇ
ಹೊಟ್ಟೆಯೊಳಗಿನ ಉರಿ ಬಾಯಿಗೆ ತರುತ್ತಾರೆ;
ಸಿನಿಕ ಸಾಮ್ರಾಜ್ಯದ ಸಿಂಹಾಸನದಲ್ಲಿ ಕೂತು
ಕ್ಷಣಿಕ ತತ್ವದ ವಿರಾಗಿಯಾಗುತ್ತಾರೆ;

ಕುರ್ಚಿಯೆಂದರೆ ಕಿರೀಟವಲ್ಲ ಒಳತೋಟಿ
ಬಟ್ಟೆಗೆ ಬೇಕಾದ ನೂಲಿನ ರಾಟಿ
ಚಿಟ್ಟೆ ಚಿತ್ತಾರ ಬಿಡಿಸುವ ಬದಲು
ಹಾವಿನ ಬಾಯ ಕಪ್ಪೆಯಾದರೆ
ಹುಣ್ಣಿಮಯೇ ಅಮಾವಾಸ್ಯೆ.

ಕಾಣಬೇಕು ಕುರ್ಚಿಯ ಕಣ್ಣಿಗೆ-
ರೆಕ್ಕೆಸುಟ್ಟ ಕನಸುಗಳಲ್ಲಿ
ಸೀದ ರೊಟ್ಟಿಯ ಬದುಕು;
ಹೂಬಿಟ್ಟ ಮೂಳೆಗಳಲ್ಲಿ ಧಗ್ಗನೆ
ಹಬ್ಬಿದ ಕಾಳ್ಗಿಚ್ಚು;
ಬೂದಿಯಲ್ಲಿ ಬಿದ್ದ ದಳಗಳು
ನಡುಗುತ್ತಿರುವ ನಾಳೆಗಳು.

ಆಗಬಾರದು ಕುರ್ಚಿಯಲ್ಲಿ ಕೂತವರು
ಕುರ್ಚಿಗಿಂತ ಕುಬ್ಜರು.
ಕೂತರೂ ಕೂರದಂತೆ
ಅತ್ತಿತ್ತ ಹಾರದಂತೆ
ತಳದ ತಳಮಳಕ್ಕೆ ತಣ್ಣೀರು ಎರಚದಂತೆ
ಕಣ್ಣೀರು ಒರೆಸುವ ಕರುಳಾದರೆ
ಕುರ್ಚಿಯಾಗುತ್ತದೆ ಹೃದಯ
ಪ್ರಜಾಪ್ರಭುತ್ವಕ್ಕೆ ಅಭಯ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...