ಡಾನ್‌ನ ಕಗ್ಗೊಲೆ

 

ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ
ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ.
ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ
ತಲೆ ತೆಗೆದು ಬಂದಿದ್ದ.
ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ;
ಆದರೆ ಹೂ‌ಎಲೆ ತೊಟ್ಟುಗಳು ತೇಲಿತೇಲಿ ಬೀಳುತ್ತಿದ್ದವು.

ಅವನು ನಾಪತ್ತೆಯಾದ ಆ ದಿನಗಳ ಬಗ್ಗೆ ಖಚಿತವಾಗಿ ಹೇಳಲಾಗದು.

ಅವನು ತಿರುಗಿ ಬಂದಾಗ ದಿಕ್ಕಿಲ್ಲದ, ನಿರ್ಗತಿಕ ಮನುಷ್ಯನಂತೆ
ದಟ್ಟ ದಾಡಿ ಬೆಳೆಸಿಕೊಂಡಿದ್ದ, ಕುಂಟುತ್ತಿದ್ದ.
ದೈಹಿಕವಾಗಿ, ಮಾನಸಿಕವಾಗಿ ವಿರೋಚಿತ
ಸೋಲು ಕಂಡಿದ್ದನೆಂದೇ ಹೇಳಬಹುದು.

ಸಾರಾಯಿ ಗಡಂಗು ತೆರೆಯುತ್ತೇನೆಂದೋಗಿ
ಬಾರ್ ಮಾಲೀಕನಿಂದ ಭೀಕರ ಹಲ್ಲೆಗೊಳಗಾದ,
ಸತ್ತು ಹೋಗಿದ್ದನಾದರೂ ಬದುಕುಳಿದಿದ್ದ.

ಈ ಸಲ ಕಾಣೆಯಾದವನು ಬಹಳ ಬೇಗ ತನ್ನ ಕಡೆಯ ದಿನವನ್ನು
ಆತುರಾತುರವಾಗಿ ಪ್ರಕಟಿಸಿಬಿಟ್ಟಿದ್ದ.
ಕೆಲಸದ ಆಮಿಷ ಒಡ್ಡಿ, ಪರಸ್ಥಳವೊಂದಕ್ಕೆ ಕರೆದೊಯ್ದ ಹಳೆದ್ವೇಷಿಗಳು
ಅವನ ಪಾದಗಳನ್ನು ಕತ್ತರಿಸಿ, ನೇಣು ಹಾಕಿದ್ದರು.

ಹೀಗೆ ಭೀಕರ ಕಗ್ಗೊಲೆಯಲ್ಲಿ ಒಂದು ದಿನ ಅಂತ್ಯಗೊಂಡಿದ್ದ;
ಅವನು ಇದ್ದನೆಂಬುದಕ್ಕೆ ನನ್ನ ಬಳಿ ಯಾವುದೇ ಪುರಾವೆ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ 1
Next post ಒಲವೇ… ಭಾಗ – ೧೦

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…