ಡಾನ್‌ನ ಕಗ್ಗೊಲೆ

 

ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ
ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ.
ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ
ತಲೆ ತೆಗೆದು ಬಂದಿದ್ದ.
ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ;
ಆದರೆ ಹೂ‌ಎಲೆ ತೊಟ್ಟುಗಳು ತೇಲಿತೇಲಿ ಬೀಳುತ್ತಿದ್ದವು.

ಅವನು ನಾಪತ್ತೆಯಾದ ಆ ದಿನಗಳ ಬಗ್ಗೆ ಖಚಿತವಾಗಿ ಹೇಳಲಾಗದು.

ಅವನು ತಿರುಗಿ ಬಂದಾಗ ದಿಕ್ಕಿಲ್ಲದ, ನಿರ್ಗತಿಕ ಮನುಷ್ಯನಂತೆ
ದಟ್ಟ ದಾಡಿ ಬೆಳೆಸಿಕೊಂಡಿದ್ದ, ಕುಂಟುತ್ತಿದ್ದ.
ದೈಹಿಕವಾಗಿ, ಮಾನಸಿಕವಾಗಿ ವಿರೋಚಿತ
ಸೋಲು ಕಂಡಿದ್ದನೆಂದೇ ಹೇಳಬಹುದು.

ಸಾರಾಯಿ ಗಡಂಗು ತೆರೆಯುತ್ತೇನೆಂದೋಗಿ
ಬಾರ್ ಮಾಲೀಕನಿಂದ ಭೀಕರ ಹಲ್ಲೆಗೊಳಗಾದ,
ಸತ್ತು ಹೋಗಿದ್ದನಾದರೂ ಬದುಕುಳಿದಿದ್ದ.

ಈ ಸಲ ಕಾಣೆಯಾದವನು ಬಹಳ ಬೇಗ ತನ್ನ ಕಡೆಯ ದಿನವನ್ನು
ಆತುರಾತುರವಾಗಿ ಪ್ರಕಟಿಸಿಬಿಟ್ಟಿದ್ದ.
ಕೆಲಸದ ಆಮಿಷ ಒಡ್ಡಿ, ಪರಸ್ಥಳವೊಂದಕ್ಕೆ ಕರೆದೊಯ್ದ ಹಳೆದ್ವೇಷಿಗಳು
ಅವನ ಪಾದಗಳನ್ನು ಕತ್ತರಿಸಿ, ನೇಣು ಹಾಕಿದ್ದರು.

ಹೀಗೆ ಭೀಕರ ಕಗ್ಗೊಲೆಯಲ್ಲಿ ಒಂದು ದಿನ ಅಂತ್ಯಗೊಂಡಿದ್ದ;
ಅವನು ಇದ್ದನೆಂಬುದಕ್ಕೆ ನನ್ನ ಬಳಿ ಯಾವುದೇ ಪುರಾವೆ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ 1
Next post ಒಲವೇ… ಭಾಗ – ೧೦

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys