ಡಾನ್‌ನ ಕಗ್ಗೊಲೆ

 

ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ
ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ.
ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ
ತಲೆ ತೆಗೆದು ಬಂದಿದ್ದ.
ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ;
ಆದರೆ ಹೂ‌ಎಲೆ ತೊಟ್ಟುಗಳು ತೇಲಿತೇಲಿ ಬೀಳುತ್ತಿದ್ದವು.

ಅವನು ನಾಪತ್ತೆಯಾದ ಆ ದಿನಗಳ ಬಗ್ಗೆ ಖಚಿತವಾಗಿ ಹೇಳಲಾಗದು.

ಅವನು ತಿರುಗಿ ಬಂದಾಗ ದಿಕ್ಕಿಲ್ಲದ, ನಿರ್ಗತಿಕ ಮನುಷ್ಯನಂತೆ
ದಟ್ಟ ದಾಡಿ ಬೆಳೆಸಿಕೊಂಡಿದ್ದ, ಕುಂಟುತ್ತಿದ್ದ.
ದೈಹಿಕವಾಗಿ, ಮಾನಸಿಕವಾಗಿ ವಿರೋಚಿತ
ಸೋಲು ಕಂಡಿದ್ದನೆಂದೇ ಹೇಳಬಹುದು.

ಸಾರಾಯಿ ಗಡಂಗು ತೆರೆಯುತ್ತೇನೆಂದೋಗಿ
ಬಾರ್ ಮಾಲೀಕನಿಂದ ಭೀಕರ ಹಲ್ಲೆಗೊಳಗಾದ,
ಸತ್ತು ಹೋಗಿದ್ದನಾದರೂ ಬದುಕುಳಿದಿದ್ದ.

ಈ ಸಲ ಕಾಣೆಯಾದವನು ಬಹಳ ಬೇಗ ತನ್ನ ಕಡೆಯ ದಿನವನ್ನು
ಆತುರಾತುರವಾಗಿ ಪ್ರಕಟಿಸಿಬಿಟ್ಟಿದ್ದ.
ಕೆಲಸದ ಆಮಿಷ ಒಡ್ಡಿ, ಪರಸ್ಥಳವೊಂದಕ್ಕೆ ಕರೆದೊಯ್ದ ಹಳೆದ್ವೇಷಿಗಳು
ಅವನ ಪಾದಗಳನ್ನು ಕತ್ತರಿಸಿ, ನೇಣು ಹಾಕಿದ್ದರು.

ಹೀಗೆ ಭೀಕರ ಕಗ್ಗೊಲೆಯಲ್ಲಿ ಒಂದು ದಿನ ಅಂತ್ಯಗೊಂಡಿದ್ದ;
ಅವನು ಇದ್ದನೆಂಬುದಕ್ಕೆ ನನ್ನ ಬಳಿ ಯಾವುದೇ ಪುರಾವೆ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ 1
Next post ಒಲವೇ… ಭಾಗ – ೧೦

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…