Home / ಕವನ / ಕವಿತೆ / ಡಾನ್‌ನ ಕಗ್ಗೊಲೆ

ಡಾನ್‌ನ ಕಗ್ಗೊಲೆ

 

ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ
ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ.
ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ
ತಲೆ ತೆಗೆದು ಬಂದಿದ್ದ.
ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ;
ಆದರೆ ಹೂ‌ಎಲೆ ತೊಟ್ಟುಗಳು ತೇಲಿತೇಲಿ ಬೀಳುತ್ತಿದ್ದವು.

ಅವನು ನಾಪತ್ತೆಯಾದ ಆ ದಿನಗಳ ಬಗ್ಗೆ ಖಚಿತವಾಗಿ ಹೇಳಲಾಗದು.

ಅವನು ತಿರುಗಿ ಬಂದಾಗ ದಿಕ್ಕಿಲ್ಲದ, ನಿರ್ಗತಿಕ ಮನುಷ್ಯನಂತೆ
ದಟ್ಟ ದಾಡಿ ಬೆಳೆಸಿಕೊಂಡಿದ್ದ, ಕುಂಟುತ್ತಿದ್ದ.
ದೈಹಿಕವಾಗಿ, ಮಾನಸಿಕವಾಗಿ ವಿರೋಚಿತ
ಸೋಲು ಕಂಡಿದ್ದನೆಂದೇ ಹೇಳಬಹುದು.

ಸಾರಾಯಿ ಗಡಂಗು ತೆರೆಯುತ್ತೇನೆಂದೋಗಿ
ಬಾರ್ ಮಾಲೀಕನಿಂದ ಭೀಕರ ಹಲ್ಲೆಗೊಳಗಾದ,
ಸತ್ತು ಹೋಗಿದ್ದನಾದರೂ ಬದುಕುಳಿದಿದ್ದ.

ಈ ಸಲ ಕಾಣೆಯಾದವನು ಬಹಳ ಬೇಗ ತನ್ನ ಕಡೆಯ ದಿನವನ್ನು
ಆತುರಾತುರವಾಗಿ ಪ್ರಕಟಿಸಿಬಿಟ್ಟಿದ್ದ.
ಕೆಲಸದ ಆಮಿಷ ಒಡ್ಡಿ, ಪರಸ್ಥಳವೊಂದಕ್ಕೆ ಕರೆದೊಯ್ದ ಹಳೆದ್ವೇಷಿಗಳು
ಅವನ ಪಾದಗಳನ್ನು ಕತ್ತರಿಸಿ, ನೇಣು ಹಾಕಿದ್ದರು.

ಹೀಗೆ ಭೀಕರ ಕಗ್ಗೊಲೆಯಲ್ಲಿ ಒಂದು ದಿನ ಅಂತ್ಯಗೊಂಡಿದ್ದ;
ಅವನು ಇದ್ದನೆಂಬುದಕ್ಕೆ ನನ್ನ ಬಳಿ ಯಾವುದೇ ಪುರಾವೆ ಇಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...