ಆತ್ಮ ಸೌಂದರ್ಯ

ಪ್ರಿಯ ಸಖಿ,
ಇಂದು ನಾವು ಬಹಿರಂಗದ ಆಡಂಬರ, ಡಾಂಭಿಕತೆ, ಸೋಗಿನ ಸುಳಿಗೆ ಸಿಲುಕಿ ನಿಜವಾದ ಆತ್ಮಸೌಂದರ್ಯವನ್ನು ಮರೆತುಬಿಟ್ಟದ್ದೇವೆ. ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಯವರು ತಮ್ಮ ಒಂದು ಹಾಡಿನಲ್ಲಿ
ಅರಿಯಲಿಲ್ಲವಲ್ಲ
ಆತ್ಮನ ಮರೆತು ಕೆಟ್ಟರೆಲ್ಲಾ
ಹೊರಗಣ ಸೋಗೆಯ
ತಿಂದೊಳಗಿನ
ರಸದಿರವನರಿಯದಿಹ ಕುರಿಯಂತೆಲ್ಲಾ
ಎಂದಿದ್ದಾರೆ. ಕುರಿ ಸೋಗೆಯನ್ನು ಜಗಿದು ಉಗಿಯುತ್ತದೆ. ಅದಕ್ಕೆ ಆ ಗರಿಯೊಳಗಿನ ರಸದ ಅರಿವು ಇರುವುದೇ ಇಲ್ಲ. ಹಾಗೇ ನಾವು ಆತ್ಮದ ಔನ್ನತ್ಯವನ್ನು ಮರೆತು ಹೊರಗಿನ ಆಡಂಬರಕ್ಕೆ ಮನಸೋತು ಹೋಗಿದ್ದೇವೆ ಎನ್ನುತ್ತಾರೆ.

ನಮ್ಮ ಎಲ್ಲ ಧರ್ಮಗಳೂ ಆತ್ಮೋದ್ಧಾರಕ್ಕೆ ಹೆಚ್ಚಿನ ಮಹತ್ವ ನೀಡಿವೆ. ಬಹಿರಂಗ ಶುದ್ಧಿಗಿಂತಾ ಅಂತರಂಗ ಶುದ್ಧಿಯೇ ಮುಖ್ಯವಾದುದು. ದೇವರಿಗಾಗಿ ಕೋರಿಕೆಗೆ ಗಂಟೆಗಟ್ಟಲೆ ಪೂಜೆ, ಜಪ, ತಪ, ಧ್ಯಾನಗಳನ್ನು ಮಾಡಿಯೂ ಮನಸ್ಸನ್ನು ಕೇಂದ್ರೀಕರಿಸಲಾಗದ ಮೇಲೆ ಅಂತಹಾ ಪೂಜೆ, ಧ್ಯಾನಗಳಿಂದ ಪ್ರಯೋಜನವೇನು? ದೇಹವನ್ನು ನಾನಾ ವಿಧವಾದ ವಸ್ತ್ರ, ಆಭರಣ, ಪ್ರಸಾಧನಗಳಿಂದ ಸಿಂಗರಿಸಿ ಅದನ್ನೇ ನಾವು ಸೌಂದರ್ಯವೆಂದುಕೊಂಡು ಬೀಗುತ್ತೇವೆ. ಆದರೆ ನಿಜವಾದ ಆತ್ಮ ಸೌಂದರ್ಯಕ್ಕೆ ಇಂತಹ ಯಾವುದೇ ಆಡಂಬರವೂ ಬೇಡ.

ಹಾಗಾದರೆ ಸಖೀ ಈ ಆತ್ಮಸೌಂದರ್ಯವೆಂದರೆ ಏನು? ಅದನ್ನು ವೃದ್ಧಿಸಿಕೊಳ್ಳುವುದು ಹೇಗೆ? ನಾವು ಒಳ್ಳೆಯದೆಂದು ನಂಬಿರುವ ತತ್ವಗಳು, ಮೌಲ್ಯಗಳು, ಗುಣಗಳು ಇವುಗಳ ಅಳವಡಿಕೆಯೇ ಆತ್ಮದ ಸಿಂಗಾರದೊಡವೆಗಳು. ಒಳ್ಳೆಯದನ್ನು ಕುರಿತು ಆಲೋಚಿಸುವ, ಒಳ್ಳೆಯದನ್ನು ಮಾಡುವ, ಒಳ್ಳೆಯ ರೀತಿಯಲ್ಲಿ ನಡೆಯುವ ಬದುಕಿಗೆ ಯಾವ ಸೋಗೂ ಬೇಕಿಲ್ಲ. ಇಂದಿನ ಬದುಕಿನ ಅಧೋಗತಿಗೆ ಕಾರಣವೇ ನಾವು. ಆತ್ಮವನ್ನು ನಿರ್ಲಕ್ಷಿಸಿರುವುದು ಬುದ್ಧಿಪ್ರಧಾನವಾದ, ವ್ಯಾವಹಾರಿಕ ಬದುಕೇ ನಮಗಿಂದು ಮಹತ್ವದ್ದಾಗಿರುವುದರಿಂದಲೇ ನಮ್ಮ ಸುತ್ತಲೂ ಅನಾಚಾರ ಹೆಚ್ಚಾಗಿ ಶಾಂತಿ ನೆಮ್ಮದಿಗಳು ಕಾಣೆಯಾಗಿವೆ.

ನಿಜವಾದ ಆತ್ಮಸೌಂದರ್ಯದ ಬಗೆಗೆ ಮನುಜ ತಿಳಿದುಕೊಂಡು ಎಚ್ಚೆತ್ತು ಆಡಂಬರದ ಹಾದಿಯನ್ನು ಬಿಟ್ಟು ಸತ್ಯದ ಹಾದಿಯಲ್ಲಿ ನಡೆಯತೊಡಗಿದಾಗ ನಿಜವಾಗಿ ನಾವು ‘ಆತ್ಮ’ ಹೊಂದಿದವರಾಗುತ್ತೇವೆ. ಇಂತಹ ಶಾಶ್ವತವಾದ ಆತ್ಮ ಸೌಂದರ್ಯವನ್ನು ಪಡೆಯುವೆಡೆಗೆ ಹಂತಹಂತವಾಗಿಯಾದರೂ ಸರಿ ನಾವು ಹೆಜ್ಜೆ ಹಾಕೋಣ. ಅಲ್ಲವೇ ಸಖೀ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ ಬೇಗ ಮಲಗಿ
Next post ಅರಿತವರು ಆರು?

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys