Home / ಕವನ / ಅನುವಾದ / ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ

ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ

ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ
ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ,
ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ
ಅವರಿಗೆ ತಿಳಿಯುವುದಿಲ್ಲ. ಹಾಗೆ
ನಾಲ್ಕು ಬಾರಿ ಭಿಕ್ಷೆ ಕೊಟ್ಟ ಮನೆಯ ಮುಂದೆ ಐದನೆಯ ಬಾರಿ ಭಿಕ್ಷುಕ ನಿಂತು ಕೂಗುತ್ತಾನೆ
ಈಗ ಅವನಿಗೆ ನಿಜವಾಗಿ ಹೊಟ್ಟೆಹಸಿದಿದೆ. ಹಾಗೆ
ಡಾಕ್ಟರಿಗೆ ಕಾಯುತ್ತಾ ರೋಗಿಯೊಬ್ಬ ಬಿದ್ದಿದ್ದಾನೆ. ಗಾಯದಿಂದ ರಕ್ತ ಹರಿಯುತ್ತಲೇ ಇದೆ.
ಹಾಗೆ
ನಾವೀಗ ಮುಂದೆ ಬಂದು ಕೆಡುಕು ಸಂಭವಿಸಿದ್ದನ್ನು ಹೇಳುತ್ತಿದ್ದೇವೆ.
ಕಟುಕರಂತೆ ನಮ್ಮ ಗೆಳೆಯರನ್ನು ಕೊಚ್ಚಿ ಹಾಕಿದರೆಂಬ ಸುದ್ದಿ ಮೊದಲಿಗೆ ತಿಳಿದಾಗ
ಭಯದ ಚೇತ್ಕಾರವಿತ್ತು. ನಂತರ ನೂರು ಜನರನ್ನು ಕೊಚ್ಚಿ ಹಾಕಿದರು. ಸಾವಿರ ಜನರನ್ನು
ಕೊಚ್ಚಿದಾಗ ಕಟುಕತನಕ್ಕೆ ಕೊನೆಯಿರಲಿಲ್ಲ. ಮೌನದ ಕಂಬಳಿ ಎಲ್ಲರನ್ನು ಕವಿದಿತ್ತು.
ಕೆಡುಕು ಮಳೆಯಂತೆ ಧೋ ಎಂದು ಸುರಿಯುವಾಗ ಯಾರೂ ಗೊಣಗುವುದಿಲ್ಲ.
ತಪ್ಪಿನ ಮೇಲೆ ತಪ್ಪು, ಕೆಡುಕಿನ ಮೇಲೆ ಕೆಡುಕು ರಾಶಿ ಬೀಳುತ್ತ ಹೋದಾಗ ಅವು
ಯಾವುವೂ ಕಣ್ಣಿಗೇ ಕಾಣದಂತೆ ಅದೃಶ್ಯವಾಗುತ್ತವೆ. ನೋವು ಸಹಿಸಲಾರದಷ್ಟಾದಾಗ
ಅಳು, ಚೇರಾಟಗಳು ಕೂಡ ಕೇಳುವುದಿಲ್ಲ. ಅಳು ಕೂಡ ಬೇಸಗೆ ಮಳೆಯಂತೆ
ಸುರಿಯುತ್ತದೆ.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...