Home / ಕವನ / ಅನುವಾದ / ಗೊತ್ತಿಲ್ಲ

ಗೊತ್ತಿಲ್ಲ

ಕತ್ತಲ ಕಾರ್ಮೋಡವೋ, ನಗುವ ಎಳೆಯ ಬಿಸಿಲೋ
ನಮ್ಮ ನಾಳೆ ಹೇಗಿರಬಹುದೋ, ಗೊತ್ತಿಲ್ಲ.
ಹೆಜ್ಜೆಗುರುತಿಲ್ಲದ ಕಾಡ ಬಯಲಿಗೆ ಕರೆದೊಯ್ದೀತು
ಕಾಲಹಾದಿ- ಯೌವನ ಮರ್ಮರದ ಕಿರುತೊರೆಗೆ,
ತಳವಿಲ್ಲದ ಕತ್ತಲ ಕೂಪಕ್ಕೆ, ಹಗಲ ಬಿಂಬವೂ
ಮರೆಯಾದ ಎಡೆಗೆ. ಅಪರಿಚಿತ ನಾಡು
ಕೈಬೀಸಿ ಕರೆದಾವು. ಸೂರ್ಯನ ನೆನಪೂ
ಮರೆಯಾಗಿ ಕವಿತೆಯ ಸೊಲ್ಲು ಶಬ್ದ
ಉದುರಿಬಿದ್ದಾವು. ಅಯ್ಯೋ ನಚ್ಚಗೆ ಕಟ್ಟಿಕೊಂಡ
ನಮ್ಮ ಬದುಕಿನ ಕಿನ್ನರಕಥೆ, ಹೇಳಲೇ
ಬಾರದ ವ್ಯಥೆಯಾಗಿ ತಟ್ಟನೆ ಬದಲಾದೀತು!

ಆದರೂ, ಅಯ್ಯಾ, ಇಷ್ಟು ನಿಜ ಗಟ್ಟಿಮಾಡಿದ್ದೀಯ-
ನಾವು ಗುನುಗು ಹಕ್ಕಿಗಳು, ನೀನಿತ್ತ ವರದಲ್ಲಿ
ಒಂದಿಷ್ಟನ್ನು ನಮ್ಮ ಶಬ್ದಗಳಲ್ಲಿ ಹೊತ್ತು ಹಾರುತ್ತೇವೆ.
ನಾವಿರುವ ಎಡೆಗಳಲ್ಲಿ ನಿನ್ನ ದನಿಯ ಮರುದನಿ
ಕಾಪಾಡಿಕೊಳ್ಳುತ್ತೇವೆ-ಹಳೆ ಮನೆಯ ಮುಂದೆ ಇರುವ
ಒಣ ಹುಲ್ಲು ಎಳೆ ಬಿಸಿಲನ್ನು ನೆನಪಿಟ್ಟುಕೊಂಡಂತೆ.
ನೀನು ಬೆಳೆಸಿದ ಶಬ್ದವಿಲ್ಲದ ಈ ಮಾತು
ಬೇಸರದಲ್ಲಿ ಮೌನದಲ್ಲಿ ಬೆಳೆದ ಈ ಮಾತು
ಕಡಲ ಮೇಲಿನ ಉಪ್ಪು ಗಾಳಿಯ ರುಚಿಯೊಂದಿಗೆ
ಎಳೆಯ ತಮ್ಮಂದಿರ ಎದೆಗೆ ತಾಗಿ ಮತ್ತೆ ಹಸುರೊಡೆದಾವು.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...