ಹೂವಿನ ಸಾವು

ಮಂಜಿನ ಮರೆಗೆ
ತಿಪ್ಪೆಯ ಒಳಗೆ
ಹೂವೊಂದು ಅರಳಿತ್ತು

ಮತ್ತನ ಮೈಯಿ
ಕೆಂಪನೆ ಬಾಯಿ
ಥರ ಥರ ನಡುಗಿತ್ತು

ಕಣ್ಣಲಿ ಕಂಬನಿ
ನುಣ್ಣನೆ ನಲ್ದನಿ
ನಸುಕನು ಹರಿದಿತ್ತು

ಯಾರದು ತಂದೆ?
ಯಾರದು ತಾಯಿ?
ಎಲ್ಲರ ಕೇಳಿತ್ತು

ನಾಯಿಯ ಬೊಗಳು
ಇರುವೆಯ ಸಾಲು
ಕಂದನ ಮುತ್ತಿತ್ತು

ಎಲ್ಲವ ದೇವರು
ಎಲ್ಲದು ಧರ್ಮವು?
ಚೀರಿ ಅತ್ತಿತ್ತು

ಕೂಸಿನ ಅಳಲು
ಮುಟ್ಟಲು ಮುಗಿಲು
ಜಾತ್ರೆಯು ನೆರೆದಿತ್ತು

ಬಂದರು, ಹೂದರು
ನಿಂದರು, ನೊಂದರು
ಜಗವದು ನಡೆದಿತ್ತು

ಕತ್ತಲು ಸುರಿಯಿತು
ಚಂದಿರ ಹೊರಳಿತು
ಜೀವವೂ ಸೊರಗಿತ್ತು

ಲೋಕವೆ ನೂಕಲು
ನಾಕವು ಸಲಹುದೆ?
ಜೋಗಿತಿ ಹಾಡಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೨೨
Next post ಅಸಾಮಾನ್ಯರು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…