ಮಾಗಿ

ಕೇಳಿ ಭಟ್ಟರೆ ಏಳಿ ಶೆಟ್ಟರೆ
ಎರಡು ಸಾವಿರ ಖಂಡಿಗೆ
ಇಂದೆ ಸಾಗಿಸಿ ಈಗ ಸಾಗಿಸಿ
ಎಲ್ಲ ಸರಕನು ಮಂಡಿಗೆ

ಗೂಗೆ ಹೇಳಿತು ಕಾಗೆ ಕೇಳಿತು
ಸೋಗೆ ನಕ್ಕಿತು ಮೆಲ್ಲಗೆ
ಮಾವು ಚಿಗುರಿತು ಬೇವು ಕೊನರಿತು
ಬಂತು ಮಾಗಿಯು ಊರಿಗೆ

ಹೊದ್ದು ಕಂಬಳಿ ಇಡಿಯ ಹೋಬಳಿ
ಎದ್ದು ಕುಳಿತಿತು ಬಿಸಿಲಿಗೆ
ಒಲ್ಲದಾಕಳು ಎಲ್ಲ ಹೈಕಳು
ಹೊರಟು ನಿಂತವು ಎಲ್ಲಿಗೆ?

ಹೊತ್ತು ಮೂಡಿತು ಹೊತ್ತು ಮುಳುಗಿತು
ಸಂಜೆಯಿಳಿಯಿತು ರಾತ್ರಿಗೆ
ಕಣ್ಣು ಹುಡುಕಿತು ಕೈಯು ತಡವಿತು
ಮೈಯ ಕರೆಯಿತು ಹಾಸಿಗೆ

ತೆರೆದು ಮಾನಸ ಸೇರಿ ಆಗಸ
ಕಟ್ಟಿರೆಕ್ಕೆಯ ಕನಸಿಗೆ
ಮತ್ತೆ ಮರುದಿನ ಹೀಗೆ ಪ್ರತಿದಿನ
ಮಾಗಿ ಮುಗಿದರೆ ಬೇಸಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುಡ್ಯಾರ್ಡ ಕಿಪ್ಲಿಂಗ್‌ನ ಕಥನ ಗೀತೆಗಳು – ಭಾಗ ೨
Next post ಯಾರದ್ದು ವಿಷ?

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…