ಬಾನ್ಸುರಿಯ ನಾದ

ಅದೆಷ್ಟು ದಿನಗಳಾದವು ಕಸುವು
ಹದಗೊಳ್ಳಲು ಕಾದು,
ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು
ಬಿದಿರುಕೋಲಿನ ನಾದ ಕರ್‍ಣಕ್ಕಿಳಿಯದೇ
ಕದಿರು ಕತ್ತರಿಸಿದ ಪೈರು ಆಕೆ

ಆ ನೀಲಾಂಗನನ ಸುತ್ತ ನೆರೆದ
ಗೋಪಿಕೆಯರ ಕಮಲದಳ ಕಣ್ಣುಗಳ
ದಂತ ಕದಳಿ ಮೈ ನುಣುಪು
ತೋಳುಗಳ ನಡುವೆಯೂ
ಅದೆಂಥಹ ಸೆಳೆತ ಶ್ಯಾಮಗೆ ರಾಧೆಯೆಡೆಗೆ.

ರುಕ್ಮಿಣಿಯ ಬಾಹುಬಂಧ, ಭಾವಬಂಧದಲ್ಲಿ
ತಲ್ಲೀನ ಚುಂಬನ ಸೆಳೆತ, ಬಳೆಗಳ ಕಿಣಿಕಿಣಿ,
ಮಥುರೆಯ ಹಾದಿ ಬೀದಿಗಳೆಲ್ಲ ಅವರದೇ
ಗೆಜ್ಜೆಯುಲಿತ, ಹೆಜ್ಜೆ ಕುಣಿತ.
ಬಿದಿರಕೋಲಿಗೆ ಲೋಕ ಮೆಚ್ಚಿತು.
ಹಾಡಿಹೊಗಳಿತು

ಕಾಲ ನಿಲ್ಲದು
ಓಡು ಕುದುರೆಯ ಗೊರಸು ಸದ್ದು
ಬಿದಿರಕೋಲಿನ ನಾದ
ನೆನಕೆಯ ಹೊತ್ತ ಹೆಣ್ಣು ಆಕೆ
ಬತ್ತಿದ ಎದೆಯೊಳಗೆ ನಿಷ್ಪಂದ ಉಸಿರಾಗಿ
ಎದೆಯೊಳಗೆ ಸುರಿದುಕೊಂಡದ್ದು
ಅದೇ ರೂಪು,
ಪುಷ್ಪಗಂಧಕ್ಕೆ ಸಡಿಲಾಗದ ಮನಕ್ಕೆ
ಕಡು ಪರಿತಾಪ,

ಕನ್ನಡಿಯಲ್ಲಿ ಮೂಡಿದ ಪಾತ್ರಗಳೆಲ್ಲ
ಕರಗಿಹೋದವು
ಕೃಷ್ಣ ಅವಳೆಡೆಗೇ ನಡೆದು ಬಂದ
ಬಾನ್ಸುರಿಯ ರಂಧ್ರಗಳೆಲ್ಲ
ತಾನೆ ತಾನೆ ರಿಂಗುಣಿಸಿದವು
ಅವನ ಕನಸಿನ ತುಂಬಾ ಮುತ್ತಾಗುವುದು
ಮಣಿ ಪೋಣಿಸುವುದು ಆಕೆ ಮಾತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೪
Next post ಮುಸ್ಸಂಜೆಯ ಮಿಂಚು – ೨೧

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…