Home / ಕವನ / ಕವಿತೆ / ಬಾನ್ಸುರಿಯ ನಾದ

ಬಾನ್ಸುರಿಯ ನಾದ

ಅದೆಷ್ಟು ದಿನಗಳಾದವು ಕಸುವು
ಹದಗೊಳ್ಳಲು ಕಾದು,
ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು
ಬಿದಿರುಕೋಲಿನ ನಾದ ಕರ್‍ಣಕ್ಕಿಳಿಯದೇ
ಕದಿರು ಕತ್ತರಿಸಿದ ಪೈರು ಆಕೆ

ಆ ನೀಲಾಂಗನನ ಸುತ್ತ ನೆರೆದ
ಗೋಪಿಕೆಯರ ಕಮಲದಳ ಕಣ್ಣುಗಳ
ದಂತ ಕದಳಿ ಮೈ ನುಣುಪು
ತೋಳುಗಳ ನಡುವೆಯೂ
ಅದೆಂಥಹ ಸೆಳೆತ ಶ್ಯಾಮಗೆ ರಾಧೆಯೆಡೆಗೆ.

ರುಕ್ಮಿಣಿಯ ಬಾಹುಬಂಧ, ಭಾವಬಂಧದಲ್ಲಿ
ತಲ್ಲೀನ ಚುಂಬನ ಸೆಳೆತ, ಬಳೆಗಳ ಕಿಣಿಕಿಣಿ,
ಮಥುರೆಯ ಹಾದಿ ಬೀದಿಗಳೆಲ್ಲ ಅವರದೇ
ಗೆಜ್ಜೆಯುಲಿತ, ಹೆಜ್ಜೆ ಕುಣಿತ.
ಬಿದಿರಕೋಲಿಗೆ ಲೋಕ ಮೆಚ್ಚಿತು.
ಹಾಡಿಹೊಗಳಿತು

ಕಾಲ ನಿಲ್ಲದು
ಓಡು ಕುದುರೆಯ ಗೊರಸು ಸದ್ದು
ಬಿದಿರಕೋಲಿನ ನಾದ
ನೆನಕೆಯ ಹೊತ್ತ ಹೆಣ್ಣು ಆಕೆ
ಬತ್ತಿದ ಎದೆಯೊಳಗೆ ನಿಷ್ಪಂದ ಉಸಿರಾಗಿ
ಎದೆಯೊಳಗೆ ಸುರಿದುಕೊಂಡದ್ದು
ಅದೇ ರೂಪು,
ಪುಷ್ಪಗಂಧಕ್ಕೆ ಸಡಿಲಾಗದ ಮನಕ್ಕೆ
ಕಡು ಪರಿತಾಪ,

ಕನ್ನಡಿಯಲ್ಲಿ ಮೂಡಿದ ಪಾತ್ರಗಳೆಲ್ಲ
ಕರಗಿಹೋದವು
ಕೃಷ್ಣ ಅವಳೆಡೆಗೇ ನಡೆದು ಬಂದ
ಬಾನ್ಸುರಿಯ ರಂಧ್ರಗಳೆಲ್ಲ
ತಾನೆ ತಾನೆ ರಿಂಗುಣಿಸಿದವು
ಅವನ ಕನಸಿನ ತುಂಬಾ ಮುತ್ತಾಗುವುದು
ಮಣಿ ಪೋಣಿಸುವುದು ಆಕೆ ಮಾತ್ರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...