Home / ಕವನ / ಕವಿತೆ / ಇಂದು ನಿನ್ನೆಯಂತಿಲ್ಲ

ಇಂದು ನಿನ್ನೆಯಂತಿಲ್ಲ

ಗೆಳೆಯ ರಹೀಮನ ಮನೆಯಲ್ಲಿ
ಕುಟ್ಟಿದ ಮೆಹಂದಿಗೆ ಹಪಾಹಪಿಸಿ
ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ.
ಕೈಬಣ್ಣ ಕೆಂಪಗಾದಷ್ಟು
ಗುಲಾಬಿ ಅರಳುತ್ತಿತ್ತು ಮನದಲ್ಲಿ.

ಪತ್ರ ಹೊತ್ತು ತರುವ ಇಸೂಬಸಾಬ್
ಬಂದಾಗಲೆಲ್ಲಾ ಚಾ ಕುಡಿದೇ
ಹೋಗುತ್ತಿದ್ದ..
ಅಂಗಳದ ತುಂಬೆಲ್ಲಾ
ಅತ್ತರಿನ ಪರಿಮಳ ಬಿಟ್ಟು.

ರಮಜಾನ್ ದಿನದ ಸಿರ್‍ಕುರಮಾ
ಘಮಘಮಲು ನಮ್ಮನೆಯಲ್ಲೂ
ತುಂಬಿಕೊಳ್ಳುತ್ತಿತ್ತು.
ಬಂಡಿಹಬ್ಬದ ಬೆಂಡು ಬತ್ತಾಸು,
ಕಜ್ಜಾಯಗಳೆಲ್ಲ
ಅವರ ತಿಂಡಿಡಬ್ಬ ತುಂಬಿಕೊಳ್ಳುತ್ತಿತ್ತು.
ದೊಡ್ಡವರಾದೆವು ನೋಡಿ
ಮನೆ ಜೋಪಡಿಗಳಿಲ್ಲ ಈಗ
ಬರಿಯ ಬಂಗೆಲೆಗಳೆದ್ದಿವೆ.
ಮನೆಮುಂದಿನ ಗಿಡಮರಗಳಲ್ಲಿ
ಹೆಣಗಳು ನೇತಾಡುತ್ತಿವೆ
ಹಿತ್ತಲ ಕೆರೆಯಲ್ಲಿ ಕೊಳೆತ ಶವದ
ವಾಸನೆಗೆ ನೈದಿಲೆಗಳು ಕಮರಿವೆ.

ನಿತ್ಯ ಹುಟ್ಟುವ ಸೂರ್ಯ ಇಂದು
ಪೂರ್ವಕ್ಕೆ ಏಳುತ್ತಾನೆ
ಆಂಜನೇಯನಿಗೆ ಅಡ್ಡ ಬಿದ್ದರೆ
ಆಯಸ್ಸು ಮಿಗುತ್ತದೆ.
ಅಮ್ಮ ಚಿಕ್ಕಂದಿನಲ್ಲಿ ಹೇಳಿದ್ದು
ಸುಳ್ಳಾಗುತ್ತಿದೆ-
ಬತ್ತಿ ಬೆಳಗಲು ಹೋದವ ಹೆಣವಾದದ್ದು ಕೇಳಿ.
ಗಂಟೆ ಜಾಗಟೆ, ಜಾ ನಮಾಜ್ ಎಲ್ಲೆಂದರಲ್ಲಿ
ಉರಿದು ಹೋದವು. ಕೆಂಡ ಇಂಗಳವಾದವು
ಆ ಕೈಗಳೆಲ್ಲ
ಈಗ ಕತ್ತಿ ತಲವಾರಗಳನ್ನೆ ತೊಟ್ಟಿವೆ.

ರಹೀಮನ ಮನೆಯ ಸಿರಕುರಮಾ
ನಮ್ಮನೆಯ ಬೆಂಡು ಬತ್ತಾಸು ಪರಸ್ಪರ
ಮಾತು ಬಿಟ್ಟಿವೆ, ತಪಶೀಲು ಜಾರಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...