ಒಲೆಗಳು ಬದಲಾಗಿವೆ ಹೊಸ ರೂಪ,
ಆಡಂಬರದ ಬಿಂಕ ಬಿನ್ನಾಣ ಮೈತೆತ್ತು
ಉರಿ ಬದಲಾಗಿದೆಯೇ?
ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ
ಹೊಳಪು ಕಂದಿದೆಯೇ?
ಕಳೆಕುಂದಿದರೆ
ಬೇಯಿಸುವ ಕೈಗಳು
ಕೆಲಸ ಕಳೆದುಕೊಳ್ಳುತ್ತದೆ
ಕೈಬಳೆಯ ನಿಟ್ಟುಸಿರ ಗಾಳಿಯೂ
ದೀರ್ಘವಾಗುತ್ತದೆ.
ಹಸಿದ ಹೊಟ್ಟೆಗಳು
ಬೆಂಕಿಯುಗುಳುತ್ತವೆ.
ಎಳೆಗೂಸಿನ ಹಾಲು ಸಮ ಉಷ್ಣತೆಯ
ಹೀರದೆ ರೋಗಾಣು ವೈರಾಣುಗಳು
ಪ್ರಾಣ ಹೀರುತ್ತವೆ.
ಹೋಟೆಲ್ಲಿನ ಗಲ್ಲಾ ಪೆಟ್ಟಿಗೆಗೆ
ನುಸಿ ಮುತ್ತುತ್ತವೆ.
ಆಗಲಿ ಬೇಕಾದರೆ ಒಲೆಯ
ನಮೂನೆ ಚಿಮಣಿ ತೊಟ್ಟು
ಧೂಮನಿವಾರಕ ಹೊತ್ತು
ಫ್ಯಾಶನ್ನಿನ ಒವನ್ ಆಗಿ
ಬದಲಾಗದೇ ಇರಲಿ ಉರಿಯ
ಒಡಲು ಅದೇ ಬೆಂಕಿ ಕಡಲು
*****
Related Post
ಸಣ್ಣ ಕತೆ
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಕತೆಗಾಗಿ ಜತೆ
ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…