ಮೊದಲ ಮಳೆ ಬಿದ್ದ ಮಣ್ಣಾಂತಾಗುವೆನು

ನಾನು, ಅನ್ನಿಸಿಕೊಂಡ ನನ್ನನ್ನು
ಅದೋ.. ಇದೋ.. ಅವನೋ.. ಇವನೋ.. ನನಗೆ ಗೊತ್ತಿಲ್ಲ!
ಯಾವುದೋ ಒಂದು ಶಕ್ತಿ
ರೂಪ ಕೊಟ್ಟು, ಪ್ರಾಣ ಕೊಟ್ಟು
ಅಪ್ಪ, ಅಮ್ಮನ ಹೊಟ್ಟೆಯಲ್ಲಿ ತಂದು ಬಿಟ್ಟಿತು.

ಅಪ್ಪ, ಅಮ್ಮ ಭೂಮಿಗಿಳಿಸಿ
ಪ್ರೀತಿಯಿಂದ ತೊಳೆದು, ಬಳಿದು, ಬೆಳೆಸಿ
ಯಾವುದು ? ಏನು ? ಎಂತು ?
ಆಡಿ, ಮಾಡಿ, ನೋಡೋದು ಕಲಿಸಿಕೊಟ್ಟರು;
ಮನೆಮಂದಿ, ಊರು ಜನರ ಸಹಯೋಗ, ಸ್ನೇಹದಿ
ಪರಮ ಗುರುಗಳಾದರು.

ಶಾಲೆಯಲ್ಲಿ
ಸಂತ ಗುರುಗಳು
ಲೋಕ ಜ್ಞಾನ ನೀಡಿ
ನಿನ್ನೆ, ಇಂದು, ನಾಳೆಗಳ ನೋಡುವಂತಹ
ಕಣ್ಣು ಇಟ್ಟರು.

ಇಂದು, ನಾನು ಏನಾಗಿರುವೆ
ಏನನ್ನಾದರೂ ನೀಡಿರುವೆಯೆಂದರೆ
ಅದಕ್ಕೆ, ಎಲ್ಲದಕ್ಕೆ ಕಾರಣ ನಾನು ಹೇಗೆ ಆದೇನು ?
ಈ ಋಣ ಭಾವವು ನನ್ನನ್ನು ತಬ್ಬಿದಾಗ
ಮೊದಲ ಮಳೆ ಬಿದ್ದ ಮಣ್ಣಂತಾಗುವೆನು; ಘಂ! ಎನ್ನುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸಹಾಯಕ
Next post ಮುನ್ನಿನಂತಿನ್ನುಂ ಎನ್ನ ಖುಷಿಯೆನ್ನ ಹಕ್ಕೆಂದೊಡೆಂತಕ್ಕು ?

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…