ಮೊದಲ ಮಳೆ ಬಿದ್ದ ಮಣ್ಣಾಂತಾಗುವೆನು

ನಾನು, ಅನ್ನಿಸಿಕೊಂಡ ನನ್ನನ್ನು
ಅದೋ.. ಇದೋ.. ಅವನೋ.. ಇವನೋ.. ನನಗೆ ಗೊತ್ತಿಲ್ಲ!
ಯಾವುದೋ ಒಂದು ಶಕ್ತಿ
ರೂಪ ಕೊಟ್ಟು, ಪ್ರಾಣ ಕೊಟ್ಟು
ಅಪ್ಪ, ಅಮ್ಮನ ಹೊಟ್ಟೆಯಲ್ಲಿ ತಂದು ಬಿಟ್ಟಿತು.

ಅಪ್ಪ, ಅಮ್ಮ ಭೂಮಿಗಿಳಿಸಿ
ಪ್ರೀತಿಯಿಂದ ತೊಳೆದು, ಬಳಿದು, ಬೆಳೆಸಿ
ಯಾವುದು ? ಏನು ? ಎಂತು ?
ಆಡಿ, ಮಾಡಿ, ನೋಡೋದು ಕಲಿಸಿಕೊಟ್ಟರು;
ಮನೆಮಂದಿ, ಊರು ಜನರ ಸಹಯೋಗ, ಸ್ನೇಹದಿ
ಪರಮ ಗುರುಗಳಾದರು.

ಶಾಲೆಯಲ್ಲಿ
ಸಂತ ಗುರುಗಳು
ಲೋಕ ಜ್ಞಾನ ನೀಡಿ
ನಿನ್ನೆ, ಇಂದು, ನಾಳೆಗಳ ನೋಡುವಂತಹ
ಕಣ್ಣು ಇಟ್ಟರು.

ಇಂದು, ನಾನು ಏನಾಗಿರುವೆ
ಏನನ್ನಾದರೂ ನೀಡಿರುವೆಯೆಂದರೆ
ಅದಕ್ಕೆ, ಎಲ್ಲದಕ್ಕೆ ಕಾರಣ ನಾನು ಹೇಗೆ ಆದೇನು ?
ಈ ಋಣ ಭಾವವು ನನ್ನನ್ನು ತಬ್ಬಿದಾಗ
ಮೊದಲ ಮಳೆ ಬಿದ್ದ ಮಣ್ಣಂತಾಗುವೆನು; ಘಂ! ಎನ್ನುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸಹಾಯಕ
Next post ಮುನ್ನಿನಂತಿನ್ನುಂ ಎನ್ನ ಖುಷಿಯೆನ್ನ ಹಕ್ಕೆಂದೊಡೆಂತಕ್ಕು ?

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys