ಮೊದಲ ಮಳೆ ಬಿದ್ದ ಮಣ್ಣಾಂತಾಗುವೆನು

ನಾನು, ಅನ್ನಿಸಿಕೊಂಡ ನನ್ನನ್ನು
ಅದೋ.. ಇದೋ.. ಅವನೋ.. ಇವನೋ.. ನನಗೆ ಗೊತ್ತಿಲ್ಲ!
ಯಾವುದೋ ಒಂದು ಶಕ್ತಿ
ರೂಪ ಕೊಟ್ಟು, ಪ್ರಾಣ ಕೊಟ್ಟು
ಅಪ್ಪ, ಅಮ್ಮನ ಹೊಟ್ಟೆಯಲ್ಲಿ ತಂದು ಬಿಟ್ಟಿತು.

ಅಪ್ಪ, ಅಮ್ಮ ಭೂಮಿಗಿಳಿಸಿ
ಪ್ರೀತಿಯಿಂದ ತೊಳೆದು, ಬಳಿದು, ಬೆಳೆಸಿ
ಯಾವುದು ? ಏನು ? ಎಂತು ?
ಆಡಿ, ಮಾಡಿ, ನೋಡೋದು ಕಲಿಸಿಕೊಟ್ಟರು;
ಮನೆಮಂದಿ, ಊರು ಜನರ ಸಹಯೋಗ, ಸ್ನೇಹದಿ
ಪರಮ ಗುರುಗಳಾದರು.

ಶಾಲೆಯಲ್ಲಿ
ಸಂತ ಗುರುಗಳು
ಲೋಕ ಜ್ಞಾನ ನೀಡಿ
ನಿನ್ನೆ, ಇಂದು, ನಾಳೆಗಳ ನೋಡುವಂತಹ
ಕಣ್ಣು ಇಟ್ಟರು.

ಇಂದು, ನಾನು ಏನಾಗಿರುವೆ
ಏನನ್ನಾದರೂ ನೀಡಿರುವೆಯೆಂದರೆ
ಅದಕ್ಕೆ, ಎಲ್ಲದಕ್ಕೆ ಕಾರಣ ನಾನು ಹೇಗೆ ಆದೇನು ?
ಈ ಋಣ ಭಾವವು ನನ್ನನ್ನು ತಬ್ಬಿದಾಗ
ಮೊದಲ ಮಳೆ ಬಿದ್ದ ಮಣ್ಣಂತಾಗುವೆನು; ಘಂ! ಎನ್ನುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸಹಾಯಕ
Next post ಮುನ್ನಿನಂತಿನ್ನುಂ ಎನ್ನ ಖುಷಿಯೆನ್ನ ಹಕ್ಕೆಂದೊಡೆಂತಕ್ಕು ?

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…