ಅಡಿಗರಿಂದಲು ಕಲಿತೆ ನಾಡಿಗರಿಂದಲು ಕಲಿತೆ
ಅಡಿಗಡಿಗೆ ಕಲಿತುದನು ನುಡಿಯಲ್ಲಿ ಮರೆತೆ
ರತಿಯ ಬಗ್ಗೆಯು ಬರೆದೆ ಆರತಿಯ ಬಗ್ಗೆಯು ಬರೆದೆ
ಮತಿಯ ಪರಿಧಿಗೆ ತೋರಿದಂತೆ ಒರೆದೆ
ಹರಿದ ಕಾಗದದ ಚೂರು ಮಹಾಯುದ್ಧಗಳ ಜೋರು
ಧರೆಯೊಳಗೆ ಸಕಲವನು ತಿಳಿದವರು ಯಾರು?
ಎಲ್ಲವನು ತಿಳಿದ ಜನ ವಹಿಸಿಕೊಳ್ಳುವರು ಮೌನ
ತಲ್ಲಣದಲೊದಗುವುದು ಸದಾ ವರ್ತಮಾನ
ಮಾತು ಕೊಡುವುದು ಯುಗ ಮಾತು ಕೊಳ್ಳುವುದು ಯುಗ
ಭೂತ ಭವಿಷ್ಯಗಳ ನಡುವೆ ಎಂಥ ಆವೇಗ!
*****



















