Home / ಕವನ / ಕವಿತೆ / ಬಂದರಿನ ಅಲೆ

ಬಂದರಿನ ಅಲೆ

ಬಿಕ್ಕಳು ತಾಯಿ
ಶರಧಿಯಾಳದಿ ಮುಖ ಹುಗಿಸಿ
ಕಣ್ಣೀರ ಕೋಡಿ ಹಗುರ ಹೊರೆ
ಸಾಗರ ಗರ್ಭ ಉಕ್ಕಿ ಸಿಡಿದು
ಈಗ ನೀರನೊರೆ
ಕೆನೆಕೆನೆಯ ಲಾಲಾರಸವಲ್ಲ,
ಅದು ಲಾವಾ
ಉಗುಳುತ್ತಿದೆ ಬೆಂಕಿ ಕೆಂಡ.

ತಾಯ್ತನದ ಹಿರಿಮೆಯೆ ಹಾಗೆ
ತನ್ನ ಇರಿದು, ಮುರಿದು, ಇಂಚು ಇಂಚು
ಭಂಗಿಸಿದರೂ ಕಣ್ಣಂಚ ಕೊನೆ ಒದ್ದೆಯಷ್ಟೇ.
ಮಕ್ಕಳಿಲ್ಲದ ಕಡೆಯಲ್ಲಿ
ಮರಭೂಮಿ ನಾಡಲ್ಲಿ
ಸಾಗರನ ಆಳದಲ್ಲಿ ವಿಷವ ಕಕ್ಕಿ
ತಣ್ಣಗಾಗಲು ಬಯಸಿದಳಷ್ಟೇ,

ಆದರೆ ದಡದ ಬುಡದಲಿ ಕಂಡಿದ್ದು
ವಾರಿಧಿಯ ಧಿಮಿಕಿತ ಕಂಪನ.
ಸೌಮ್ಯ ತೆರೆಗಳ ದೈತ್ಯ ದರ್ಶನ
ಎದ್ದ ಅಲೆಗಳಿಗೆ ಮತ್ತೂ
ಹಗೆಯ ಹೊಗೆ ಎಬ್ಬಿಸುವ ಬಯಕೆ
ಹೆಸರಿಲ್ಲದೇ ಬಂದ
ಅಲೆಯಲ್ಲಿ ಕೊಚ್ಚಿ ಹೋಗುತ್ತ
ಬಿದಿರ ಕಡ್ಡಿಯ ಹಿಡಿದು
ದಡ ಸೇರಲಾದೀತೇ?
ನಿದ್ದೆಯಿಲ್ಲದ ರಾತ್ರಿಯಲ್ಲಿ
ಕಂಡ ಕನಸಂತೆ
ಬಂದರಿನ ಅಲೆಗಳು ಬಂದದ್ದು
ತಿಳಿಯುವ ಮೊದಲೆ
ಸಮುದ್ರರಾಜನ ಬೆಳ್ನೊರೆ
ರಕ್ತರಾಡಿ ಕೆಂಪು
ಹೆಣಗಳ ರಾಶಿ
ಒಟ್ಟು ಮಾಡುವ ಗುತ್ತಿಗೆ ಹಿಡಿದಿದ್ದ
ಅಲೆರಾಯ, ಮೆಲ್ಲನೆ ಕರೆದೊಯ್ದು
ಜೀವ ಹೀರುವ ಕೆಲಸದಲ್ಲಿದ್ದಳು ಜಲಕನ್ಯೆ
ದಡ ಮಾತ್ರ ತೊಳೆದದ್ದಾಯ್ತೋ ಎಂದರೆ
ಇಲ್ಲ, ಬಾಲ್ಕನಿಯ ಎರಡಂತಸ್ತಿನ ಮನೆ
ನೋಡುತ್ತ ನೋಡುತ್ತ ನೆಲಕ್ಕೆ
ದಿನವೊಂದು ಎಡಬಿಡದ ಒತ್ತಡದ ಜಾತ್ರೆ
ಮರುದಿನ ಅದು ತೊಳೆದ ಪಟ್ಟಣ.
ಹೀಗಾಗಿ
ಈಗೀಗ ಸುನಾಮಿ ಹೆಸರು
ಬಹಳ ಪ್ರಸಿದ್ಧ. ಅನ್ವರ್ಥನಾಮಕ್ಕೆ
ಆಟಗಾರರು, ಸಿನೆಮಾತಾರೆಯರು
ಬಿಡದೆ ನೆರೆಮನೆಯಕ್ಕನ ಮಗನೂ
ಸುನಾಮಿ ಸೋಮ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...