ಹುಡುಕ್ಕೊಂಡ್ ಹೋಯ್ತೋ

ಹುಡುಕ್ಕೊಂಡ್ ಹೋಯ್ತೋ
ಹಕ್ಕಿ ಹುಡುಕ್ಕೊಂಡ್ ಹೋಯ್ತೋ
ಹಕ್ಕಿ ಹಾರಾಡ್ಕೊಂಡ್ ಹೋಯ್ತೋ ||

ಆ ಮರ ಈ ಮರ ನೆಲ ಮರ
ಶಾಶ್ವತವಲ್ಲದ ಮರ ರೆಂಬೆಕೊಂಬೆಗಳ
ಗೂಡುಗಳ ತೂರಿ ಹಾರ್‌ಕೊಂಡ್ ಹೋಯ್ತೊ ||

ಯಾವ ಜೀವ ಜೀವಿಗಳ
ದಾಹದಲ್ಲಿ ಮಾಡಿದ ಕರ್‍ಮ
ಅಂಗಸಂಗಗಳ ಬೆಸೆದು
ಅರಿವಿನ ಅಂಗಿನ ತೊಟ್ಟು ||

ಬೆಳೆದ ಬೇಸಾಯ ಫಲ ಫಲವಲ್ಲ
ಗಿಡಮರದ ಕಾಯಿ ಹಣ್ಣು ಹಣ್ಣಲ್ಲ
ಯಾವ ಕಾಯಕದ ನೆಲ ದಕ್ಕಿದೆ
ಹಕ್ಕಿ ಅದೇ ಕರ್‍ಮದ ಫಲ ||

ಸಾಸಿರ ನಾಮದ ಪುಣ್ಯದ ಫಲ
ಎಲ್ಲಾ ಫಲಗಳಲ್ಲಿ ಇಲ್ಲಾ ಬಲ
ಬೆಲೆ ಇಲ್ಲಾ ನೀ ರುಚಿಸುವ ತನಕ
ವೆಂಕಟರಮಣನಿಗೆ ಇಷ್ಟವಾಗುವ ತನಕ ||

ಹುಡುಕ್ಕೊಂಡ್ ಹೋಯ್ತೋ ಹಕ್ಕಿ
ರೆಕ್ಕೆ ಬಿಚ್ಚಿ ಸ್ವಚ್ಛಂದ ಹಾರಾಡಿ
ಬೆಟ್ಟ ಗುಡ್ಡ ಹಾದಿ ಗಟ್ಟಿಗಿತ್ತಿಯಾಗಿ
ತನ್ನನೊಳಗಣ ಗುರುಲಿಂಗನ ನೆನೆದು ||

ನೂರು ವರುಷ ದಾಟಿ ನೂರಾರು
ಬೆಳಕ ಚೆಲ್ಲಿ ಹಾಡಿ ಹಾಡ
ಬಣ್ಣಗಳನು ಅಂಗೈಯಲ್ಲಿ
ಹಿಡಿದ ಹಕ್ಕಿ ಚುಕ್ಕಿಯ ಬರೆದು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ ಸ್ಪಂದನ
Next post ಒಲವು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys