ಬೃಂದಾವನ

ತನು ಮನ ಸೆಳೆಯುವ
ಬೃಂದಾವನಕೆ ಹೋಗುವ ಬಾರೆ ಸಖಿ
ಕರೆಯೋಲೆಯನಿತ್ತು ಕರೆಯುತಿದೆ
ಬೃಂದಾವನ ||

ನವರಸ ಶೃಂಗಾರ ರಸದೌತಣ
ನವ ಚೈತನ್ಯ ಮೈತಾಳಿತ್ತು
ರಾಧೆ ಕೃಷ್ಣೆಯರ ಗೋಪಿಕೆಯರ
ವನ ಬೃಂದಾವನ ||

ಕಿನ್ನರ ಲೋಕದ ಕಿನ್ನರಿಯ ನರ್‍ತನ
ಜಲದಿನಿಂದು ಮೆರೆವ ಸ್ವರ್‍ಗ
ಮಧುಸೂದನನ ವನ ಬಿನ್ನಾಣ
ಇಳೆಯ ಗೀತಗಾನ ಬೃಂದಾವನ ||

ಪುಷ್ಪಕ ವಿಮಾನ ರಾಜಹಂಸ ತೂಗಿ
ಆಡಿಸಿತ್ತು ಜೋಗುಳ ಬೆಳ್ಳಿಯ
ಕಿರೀಟವ ಧರಿಸಿ ಝೆಂಕಾರದಲಿ
ಜಲದಿ ರಾಜ ನಿಂದು ಹರಿಸಿದವನ ಬೃಂದಾವನ ||

ಕೊಳಲ ಗಾನದಲಿ ನಾಟ್ಯವಾಡುವ ಅಪ್ಸರೆ
ಬಳಕುತ ಬಳ್ಳಿಲತೆಗಳಂತೆ ರಮಣಿಯ
ರಾಗ ಭಂಗಿಯಲಿ ಸೋಪಾನ
ಕೆಳೆವಿತ್ತು ಕರೆಯಿತು ಬೃಂದಾವನ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಿಯ ಪ್ರತಿಮೆಗಳೇ ಪ್ರೀತಿ ಕಲಿಸಿ
Next post ಪಕ್ಷಾಂತರ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys