ಹೆಮ್ಮೆ ನನಗೆ ಅಮ್ಮ

ಹೆಮ್ಮೆ ನನಗೆ ಅಮ್ಮ ನಿನ್ನ
ತಾಯಿಯೆಂದು ಕರೆಯಲು
ಕಂದನೆಂಬ ನಿನ್ನ ಪ್ರೀತಿ
ಸವಿಯು ಜೇನಿಗಿಂತಲು

ಏನು ತಾನೆ ಇದ್ದರೂ
ನಿನಗೂ ಸಿರಿವಂತರು?
ಬಲ್ಲೆ ನಾನೆ ಇರುವರೆಷ್ಟೋ
ನಿನಗೂ ಧೀಮಂತರು;
ಬಾಳಿಬಂದ ಗರಿಮೆಯಲ್ಲಿ
ಯಾರು ಸಮಕೆ ಬರುವರು?
ತಾಳಿ ನಿಂತ ಸಹನೆಯಲ್ಲಿ
ನಿನ್ನ ಯಾರು ಗೆಲುವರು?

ಪ್ರಾಚೀನ ಎನಿಸಿದರೂ
ಚಿರನೂತನೆ ನೀನು
ವೇದಮೂಲವಾದ ಜ್ಞಾನ-
ಸುಧೆಗೆ ನೀನು ಧೇನು;
ಕೋಟಿ ಕೋಟಿ ಬೆಳಗು ಅರಳಿ
ನಿನ್ನ ಪಾದ ತೊಳೆದಿವೆ
ನಿನ್ನ ಕಾಣಲೆಂದೆ ಚಂದ್ರ
ತಾರೆ ನಭದಿ ನೆರೆದಿವೆ.

ತಂಪು ಆಲದಡಿಗೆ ಬಂದು
ನಿಂತ ಭಕ್ತ ನಾನು
ಮೇಲಿನಿಂದ ಕೆಳಗುರುಳಿದ
ಬಿತ್ತವಾದರೇನು?
ನನ್ನ ಮನದಿ ಅರಳುತ್ತಿದೆ
ತಾಯೆ ನಿನ್ನ ರೂಪ
ಕಂಪು ಬೀರಿ ಸುತ್ತಲೆಲ್ಲ
ಹರಡಿ ನಿಲುವ ಧೂಪ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮವರ ಬಣ್ಣ
Next post ಮಿನಿ ಕವನ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys